Site icon Vistara News

Bigg Boss Kannada | ಸ್ಪರ್ಧಿಗಳ ಜತೆ ರೂಪೇಶ್‌ ರಾಜಣ್ಣ ವಿನಾಕಾರಣ ಜಗಳ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ -9ರಲ್ಲಿ (Bigg Boss Kannada) ಸ್ಪರ್ಧಿಗಳಿಗೆ ಟಾಸ್ಕ್‌ಗೆ ಗಮನ ಕೊಡುವುದಕ್ಕಿಂತ ಗಾಸಿಪ್‌ಗಳನ್ನು ಶುರು ಮಾಡುತ್ತಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಎಲ್ಲರ ಜತೆ ವಿನಾಕಾರಣ ಜಗಳ ಮಾಡುತ್ತಿದ್ದಾರೆ. ಇದೀಗ ಅನುಪಮಾ ವಿಚಾರಕ್ಕೂ ಹಾಗೇ ಆಗಿದೆ.

ಬಿಗ್‌ ಬಾಸ್‌ ಸಮಸ್ಯೆ ಬಗೆಹರಿಸುವ ಟಾಸ್ಕ್‌ ಒಂದನ್ನು ನೀಡಿತ್ತು. ಅದರಲ್ಲಿ ಹಗ್ಗವನ್ನು ಬಿಚ್ಚಿ ಆಯಾ ಬಣ್ಣದ ಪ್ರಕಾರ ಕಟ್ಟಬೇಕಿತ್ತು. ಮೊದಲನೇ ಟಾಸ್ಕ್‌ನಲ್ಲಿ ಅನುಪಮಾ ಹಾಗೂ ನೇಹಾ ಜೋಡಿ ಸೋತಿದ್ದಾರೆ. ತಾನು ಸೋತಿದ್ದೇನೆ ಎನ್ನುವ ಗಿಲ್ಟ್‌ನಿಂದ ಅನುಪಮಾ ಅತ್ತರು. ಪ್ರಶಾಂತ್‌ ಸಂಬರಗಿ ಜೋಡಿ ಆಟ ಆಡಲು ಇನ್ನೊಂದು ಅವಕಾಶ ಕೊಟ್ಟಾಗ ಅನುಪಮಾ ಜೋಡಿ ದೀಪಿಕಾ ದಾಸ್‌ ಜೋಡಿ ವಿರುದ್ಧ ಗೆದ್ದಿದ್ದಾರೆ. ನಂತರ ಅನುಪಮಾ ಸ್ಪರ್ಧಿಗಳ ಮುಂದೆ ತನಗಾದ ಬೇಜಾರನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | Bigg Boss Kannada | ರೂಪೇಶ್ ರಾಜಣ್ಣ ನೀರಿನ ಪಾಠಕ್ಕೆ ಪ್ರಶಾಂತ್‌ ಸಂಬರಗಿ ಗರಮ್‌!

ಆದರೆ ಇದೇ ವಿಚಾರಕ್ಕೆ ರೂಪೇಶ್‌ ರಾಜಣ್ಣ ತಡ ರಾತ್ರಿ ಅನುಪಮಾ ಅವರನ್ನು ಕೆದಕಿದ್ದಾರೆ. ʻʻನೀವು ಅತ್ತಿದ್ದು ನಿಮಗೆ ಸರಿ ಅನ್ನಿಸಿತ್ತಾʼʼ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಅನುಪಮಾ ʼʼಎಲ್ಲರ ಭಾವನೆಗಳು ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರ ಫಿಲಿಂಗ್‌ ಬೇರೆ ಬೇರೆ ಆಗಿರುತ್ತದೆ. ನೀವು ಅಷ್ಟೆ ನಮ್ಮ ಥರಾ ಇದ್ದೀರಾ ಅನ್ನಲು ಸಾಧ್ಯವಿಲ್ಲ. ಆ ಕ್ಷಣಕ್ಕೆ ನನಗೆ ಅಳು ಬಂತು ʼʼಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ರೂಪೇಶ್‌ ʻʻನಂತರದ ದಿನದಲ್ಲಿಯೂ ಹೀಗೆ ಅಳುತ್ತೀರಾʼʼ ಎಂದು ಕೇಳಿದ್ದಾರೆ. ಅದಕ್ಕೆ ಅನುಪಮಾ ಗರಂ ಆಗಿ ʻʻನೀವು ಕೇಳುತ್ತಿರುವ ಉದ್ದೇಶವಾದರೂ ಏನು? ನಿಮ್ಮದು ಉದ್ದೇಶ ಮತ್ತು ರೀತಿ ಯಾವುದು ಸರಿ ಇಲ್ಲʼʼ ಎಂದರು.

ಉಳಿದ ಸ್ಪರ್ಧಿಗಳು ರೂಪೇಶ್‌ ರಾಜಣ್ಣರಿಗೆ ಸುಮ್ಮನೆ ಬೇರೆಯವರ ವಿಚಾರಕ್ಕೆ ತಲೆ ಹಾಕಬೇಡಿ ಎಂತಲೂ ಹೇಳುತ್ತಿದ್ದಾರೆ. ಇನ್ನೂ ಮಯೂರಿ ಅವರ ಭಾಷೆಯ ವಿಚಾರಕ್ಕೂ ರೂಪೇಶ್‌ ಕೂಗಾಡಿದರು. ಹೀಗೆ ವಿನಾ ಕಾರಣ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ ರೂಪೇಶ್‌.

ಇದನ್ನೂ ಓದಿ | Bigg Boss Kannada | ಕಾವ್ಯಶ್ರೀ ಜತೆ ರೂಪೇಶ್‌ ಇದ್ದರೆ ಸಾನ್ಯಾಗೆ ಉರಿ ಅಂತೆ: ಭವಿಷ್ಯ ನುಡಿದ ಆರ್ಯವರ್ಧನ್‌!

Exit mobile version