Site icon Vistara News

Bigg Boss Kannada | ಕನ್ನಡಕ್ಕಾಗಿ ಹೋರಾಟ, ರೂಪೇಶ್‌-ಪ್ರಶಾಂತ್‌ ಕಾದಾಟ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಇಬ್ಬರು ಹೋರಾಟಗಾರರ ನಡುವೆ ವಾಗ್ವಾದ ತಾರಕ್ಕಕೇರುತ್ತಿದೆ. ಅದರಲ್ಲಿ ಪ್ರಶಾಂತ್‌ ಸಂಬರಗಿ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ಗಲಾಟೆಗಳು ನಡೆಯುತ್ತಲೇ ಇವೆ. ಎರಡನೇ ದಿನ ಮನೆಯಲ್ಲಿ ಪ್ರಶಾಂತ್‌ ಸಂಬರಗಿ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ಕನ್ನಡ ವಿಚಾರವಾಗಿ ದೊಡ್ಡ ಸಮರವೇ ನಡೆದಿದೆ.

ರೂಪೇಶ್‌ ರಾಜಣ್ಣ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿಗೆ ʻʻಸಮಾಜದಲ್ಲಿ ನೀವು ತುಂಬಾ ಡಿಸ್ಟರ್ಬ್‌ ಮಾಡ್ತಿದ್ದೀನಿ ಎಂದು ಅನ್ನಿಸ್ತಾ ಇಲ್ವಾ? ನೀವು ಕಾನೂನಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಡಿಸ್ಟರ್ಬ್‌ ಮಾಡುತ್ತಿದ್ದೀರಾ. ನಿಮ್ಮ ಮನೋಭಾವಕ್ಕೆ ತಕ್ಕಂತೆ ಇದ್ದವರು ಮಾತ್ರ ನಿಮ್ಮನ್ನು ಒಪ್ಪಿಕೊಳ್ಳುತ್ತಿದ್ದಾರೆʼʼ ಎಂದಿದ್ದಾರೆ. ಪ್ರಶಾಂತ್‌ ಸಂಬರಗಿ ಪ್ರತಿಕ್ರಿಯೆ ನೀಡಿ ʻʻನನ್ನನ್ನು ಒಪ್ಪಿಕೊಳ್ಳುವವರು ಸೊಸೈಟಿಯಲ್ಲೇ ಇಲ್ಲವಾʼʼ ಎಂದು ಎದುರೇಟು ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ಪ್ರಶಾಂತ್ ಸಂಬರಗಿ- ರೂಪೇಶ್ ರಾಜಣ್ಣ ವಾರ್‌: ಒಗ್ಗರಣೆ ಹಾಕಿದ ಅಅರುಣ್‌ ಸಾಗರ್‌!

ಇನ್ನೊಂದು ಕಡೆ ಅರುಣ್‌ ಸಾಗರ್‌ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಜತೆ ಕನ್ನಡದ ಬಗ್ಗೆ ಚರ್ಚೆಗಳನ್ನು ಮಾಡಿದ್ದಾರೆ. ಅರುಣ್‌ ಸಾಗರ್‌ ಮಾತನಾಡಿ ʻʻಕನ್ನಡ ಉಳಿಸಲು ಹೋರಾಟಕ್ಕಿಂತ, ಕನ್ನಡ ಕಲಿಸುವುದು ಮುಖ್ಯʼʼ ಎಂದು ರೂಪೇಶ್‌ ಜತೆ ವಾದಕ್ಕೆ ಇಳಿದರು. ಆದರೆ ರೂಪೇಶ್‌ ಇದನ್ನು ಒಪ್ಪದೇ ʻʻಕನ್ನಡ ಕಲಿಕೆ ಬೇಕು. ಆದರೆ ಹೋರಾಟ ಕೂಡ ಮುಖ್ಯವಾಗುತ್ತದೆ. ಹೋರಾಟ ಇಲ್ಲದೇ ಎನೂ ಸಫಲವಾಗುವುದಿಲ್ಲʼʼ ಎಂದು ತಿರುಗೇಟು ನೀಡಿದರು. ಹಾಗೇ ʻʻಶಾಲೆಯಲ್ಲಿ ಮೇಷ್ಟ್ರು ಬೇಕು, ಗಡಿಯಲ್ಲಿ ಸೈನಿಕರು ಬೇಕುʼʼ ಎಂದು ಖಡಕ್‌ ಆಗಿ ಅರುಣ್‌ ಸಾಗರ್‌ಗೆ ಹೇಳಿದ್ದಾರೆ.

ಪ್ರಶಾಂತ್‌ ಸಂಬರಗಿ ಈ ವಿಚಾರಕ್ಕೆ ಮಾತನಾಡಲು ಬಂದಾಗ ರೂಪೇಶ್‌ ರಾಜಣ್ಣ ಕಿಡಿಕಾರಿದ್ದಾರೆ.ʻʻ ಪ್ರಶಾಂತ್‌ ಅವರಿಗೆ ಕನ್ನಡ ವಿಚಾರ ಬಂದರೆ ಯಾಕಿಷ್ಟು ಉರಿ? ನಿಮ್ಮ ಕನ್ನಡ ಪ್ರೀತಿ ನೋಡಿದ್ದೇನೆʼʼ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ. ಪ್ರಶಾಂತ್‌ ಪ್ರತಿಕ್ರಿಯೆ ನೀಡಿ ʻʻನಾನು ಏನೂ ಪ್ರಶ್ನೆಯೇ ಮಾಡಿಲ್ಲ. ಮನೆಯ ಸ್ಪರ್ಧಿ ಆಗಿದ್ದಕ್ಕೆ ಡಿಬೇಟ್‌ಗೆ ಬಂದೆ ಅದು ತಪ್ಪೇʼʼ ಎಂದು ಕೂಗಾಡಿದ್ದಾರೆ.

ಒಟ್ಟಾರೆ ಮನೆಯಲ್ಲಿ ಪ್ರಶಾಂತ್‌ ಸಂಬರಗಿ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ಸಮರಗಳು ಏರುತ್ತಲೇ ಇವೆ. ಉಳಿದ ಸ್ಪರ್ಧಿಗಳು ಮೂಕವಿಸ್ಮಿತರಾಗಿದ್ದಾರೆ.

ಇದನ್ನೂ ಓದಿ | Bigg Boss Kannada | ಮುಂದೆ ಮನೆಯಲ್ಲಿ ಬೇಜಾನ್‌ ಹಬ್ಬ ಇದೆ ಎಂದ ನವಾಜ್‌: ಮೊದಲ ದಿನದ ಟಾಸ್ಕ್‌ ವಿನ್ನರ್‌ ಈ ಜೋಡಿ!

Exit mobile version