Site icon Vistara News

Bigg Boss Kannada | ಮನೆಯಿಂದ ಹೊರನಡೆದ ದರ್ಶ್‌ ಚಂದ್ರಪ್ಪ

Bigg Boss Kannada

ಬೆಂಗಳೂರು : ಖ್ಯಾತ ರಿಯಾಲಿಟಿ ಶೋ ಎಂದೆನಿಸಿಕೊಂಡ ಬಿಗ್ ಬಾಸ್ (Bigg Boss Kannada) ಒಂಬತ್ತನೇ ಆವೃತ್ತಿಯಲ್ಲಿ ಆರನೇ ಸ್ಪರ್ಧಿಯಾಗಿ ದರ್ಶ್ ಚಂದ್ರಪ್ಪ ಪ್ರವೇಶ ಪಡೆದುಕೊಂಡಿದ್ದರು. ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದ ದರ್ಶ್‌ ಮೂರನೇ ವಾರಕ್ಕೆ ದೊಡ್ಮನೆಯಿಂದ ಔಟ್‌ ಆಗಿದ್ದಾರೆ.

ಗೆಳೆಯರ ಸಲಹೆಯ ಮೇರೆಗೆ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದರ್ಶ್ ಪ್ರತಿಷ್ಠಿತ ಬ್ರ್ಯಾಂಡ್ ಹಣೆಪಟ್ಟಿಯುಳ್ಳ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ತ್ರೀ ರೋಸಸ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ದರ್ಶ್ ಮೊದಲ ಬಾರಿ ಕಿರುತೆರೆಗೆ ಕಾಲಿಟ್ಟಿದ್ದು ದುರ್ಗಾ ಧಾರಾವಾಹಿ ಮೂಲಕ. ಬಿಗ್ ಬಾಸ್ ಮೂಲಕ ಹೊಸ ಇನಿಂಗ್ಸ್‌ ಶುರು ಮಾಡಿದ್ದರು.

ಮೊದಲನೇ ವಾರದಲ್ಲಿಯೇ ಪ್ರಶಾಂತ್‌ ಸಂಬರಗಿ ಜತೆ ವಾರ್‌
ಮೊದಲ ವಾರ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದಿವ್ಯಾ ಉರುಡುಗ ಪರ ನಿಂತು ದರ್ಶ್ ಸಂಬರಗಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಅದಕ್ಕೆ ಪ್ರಶಾಂತ್ ಸಂಬರಗಿ ಅದು ನನ್ನ ಇಷ್ಟ ಎಂದಿದ್ದರು. ದಸರಾ ಸಮಯದಲ್ಲಿ ಸ್ಪರ್ಧಿಗಳು ದರ್ಶ್‌ ಬಗ್ಗೆ ಕಮೆಂಟ್‌ ಕೊಟ್ಟಾಗ ಕಣ್ಣೀರು ಹಾಕಿದ್ದರು. ʻʻನಾನು ತುಂಬಾ ಕಷ್ಟ ಪಟ್ಟು ನಟನೆಗೆ ಬಂದೆ. ಅಲ್ಲೂ ಅವಕಾಶ ಅಷ್ಟು ಸಿಕ್ಕಿಲ್ಲ. ಈಗ ಉದ್ಯಮ ಶುರು ಮಾಡಿ ಅದರಲ್ಲಿ ಯಶಸ್ವಿ ಆಗುತ್ತಿದ್ದೇನೆʼʼ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಗೋಲ್ಡ್‌ ಮೈನ್‌ ಸ್ಟ್ರ್ಯಾಟಜಿ ಸರಿ ಇತ್ತಾ? ದರ್ಶ್‌ ತಪ್ಪೊಪ್ಪಿಕೊಂಡಿದ್ದು ಏಕೆ?

ಗೋಲ್ಡ್‌ ಮೈನ್‌ ಟಾಸ್ಕ್‌ ವಿಚಾರಕ್ಕೆ ತಪ್ಪು ಒಪ್ಪಿಕೊಂಡ ದರ್ಶ್‌
ಈ ವಾರದ ಕ್ಯಾಪ್ಟನ್‌ ಆಗಲು ಬಿಗ್ ಬಾಸ್ ಗೋಲ್ಡ್ ಮೈನ್ ಆಟವನ್ನೂ ದರ್ಶ್ ಚೆನ್ನಾಗಿ ಆಡಿದ್ದರು. ಆದರೆ ಒಮ್ಮೆ ರೂಲ್ಸ್ ಬ್ರೇಕ್ ಮಾಡಿ ಚಿನ್ನ ತೆಗೆದುಕೊಂಡು ಬಂದು, ದಂಡವಾಗಿ ಸಂಪಾದಿಸಿದ ಚಿನ್ನವನ್ನೆಲ್ಲ ಬಿಗ್ ಬಾಸ್​ಗೆ ಕೊಟ್ಟಿದ್ದರು. ಕಿಚ್ಚ ಆರ್ಯವರ್ಧನ್‌ಗೆ ʻʻಟಾಸ್ಕ್‌ ವಿಚಾರದಲ್ಲಿ ಆರು ಜನ ಮಾತ್ರ ಗೋಲ್ಡ್ ಮೈನ್ ಒಳಗೆ ಹೋಗಬೇಕಿತ್ತು. ಆದರೆ, 7 ಜನ ಒಳಗೆ ಹೋದರು. ಆರ್ಯವರ್ಧನ್‌ 7 ಜನರ ಲೆಕ್ಕ ಬರೆದುಕೊಂಡಿದ್ದೀರಿ..‘ಬಿಗ್ ಬಾಸ್’ ಲೆಟರ್ ಕಳುಹಿಸುವವರೆಗೂ ನಿಮಗೆ ಗೊತ್ತಾಗಲಿಲ್ವ? ಇಲ್ಲ ಎಡವಟ್ಟಾಯ್ತಾ? ಅಸಲಿಗೆ ನಡೆದಿದ್ದೇನು? ಎಂದು ಕೇಳಿದ್ದಾರೆ.

ದರ್ಶ್ ನಂತರ ಮಾತನಾಡಿ ʻನಾನು ಮೊದಲು ವಾದ ಮಾಡಿದೆ. ಆಮೇಲೆ ಒಂದೈದು ನಿಮಿಷ ಟೈಮ್ ಕೊಡಿ ಎಂದು ಕೇಳಿದೆ. ಎಲ್ಲರೂ ಮುಗಿಬಿದ್ದಾಗ. ಗುರೂಜಿ ಹಾಗೆ ಕೇಳಿದಾಗ., ಕೊಟ್ಟುಬಿಟ್ಟೆ. 5 ನಿಮಿಷ ಟೈಮ್ ಕೊಟ್ಟಿದ್ದರೆ, ನಾನೇ ಎಲ್ಲವನ್ನೂ ಕೊಟ್ಟುಬಿಡುತ್ತಿದ್ದೆ. ಕಾಲಿಗೆ ಬೀಳುತ್ತೇನೆ ಎಂದು ಹೇಳಿದ್ದಕ್ಕೆ ಕೊಟ್ಟೆ ಅಂತಲ್ಲ. ಕಾಲ ಒಟ್ಟಿಗೆ ಕೂಡಿ ಬಂತು. ನನ್ನದೂ ತಪ್ಪಿತ್ತುʼʼಎಂದಿದ್ದರು.

ಬಿಗ್ ಬಾಸ್‌ನ ಮೂರನೇ ವಾರದ ಆಟದಲ್ಲಿ ದರ್ಶ್ ಎಲಿಮಿನೇಟ್ ಆಗಿದ್ದಾರೆ. ಐಶ್ವರ್ಯಾ ಪಿಸ್ಸೆ, ನವಾಜ್ ನಂತರ ಇದೀಗ ದರ್ಶ್‌ಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗಿದೆ.

ಇದನ್ನೂ ಓದಿ | Bigg Boss Kannada | ಇಲ್ಲಿ ಬರೀ ನಾವು ಸೇತುವೆ ಅಷ್ಟೆ: ಅಲ್ಲಿ ಇಲ್ಲದೆ ಇರುವ ಉದ್ದೇಶ ಹೊರಗೆ ಕಾಣಿಸುವುದು ಬೇಡ ಎಂದ ಕಿಚ್ಚ!

Exit mobile version