Site icon Vistara News

Bigg Boss Kannada | ಗೊಂಬೆ ಆಟದಲ್ಲಿ ರಾಕೇಶ್‌-ದೀಪಿಕಾ ವಾದ, ಪ್ರತಿವಾದ: ಚಿಕನ್ ಕನವರಿಕೆಯಲ್ಲಿ ಕಾವ್ಯಶ್ರೀ!

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಎಂಟನೇ ವಾರ ಬಿಗ್‌ ಬಾಸ್‌ ಗೊಂಬೆ ಟಾಸ್ಕ್‌ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ‘ಸೂಪರ್‌ ಸಿಕ್ಸ್‌’ ಹಾಗೂ ‘ಗೋಲ್ಡನ್‌ ಗೊಂಬೆಗಳು’ ಎಂದು ಎರಡು ತಂಡಗಳು ರಚನೆ ಆಗಿವೆ. 54ನೇ ದಿನ ಸ್ಪರ್ಧಿಗಳು ತಾವು ಧರಿಸುವ ಮೈಕ್‌ ಬೆಲ್ಟ್‌ ಅನ್ನು ಡ್ಯಾಮೇಜ್‌ ಮಾಡಿದ ಕಾರಣ ಬಿಗ್‌ ಬಾಸ್‌ ಆಟವನ್ನು ನಿಲ್ಲಿಸುವಂತೆ ಆದೇಶ ನೀಡಿದ್ದಾರೆ. ಕೊನೆಯ ದಿನ ದೀಪಿಕಾ ದಾಸ್‌ ಮತ್ತು ರಾಕೇಶ್‌ ಅಡಿಗ ಅವರು ಟಾಸ್ಕ್‌ ವಿಚಾರದಲ್ಲಿ ಕೂಗಾಡಿದ್ದಾರೆ. ಕ್ಯಾಪ್ಟನ್‌ ಕಾವ್ಯಶ್ರೀ ಗೌಡ ಕೂಡ ರೇಗಾಡಿದ್ದಾರೆ.

ಗೊಂಬೆ ಮಾಡಲು ವಸ್ತುಗಳನ್ನು ಬಿಗ್‌ ಬಾಸ್‌ ನೀಡುತ್ತಿದ್ದಂತೆ ಸ್ಪರ್ಧಿಗಳು ಅದನ್ನು ಕಲೆಕ್ಟ್‌ ಮಾಡಿಕೊಳ್ಳಬೇಕು. ಆ ಸಂದರ್ಭದಲ್ಲಿ ರಾಕೇಶ್‌ ಅಡಿಗ ಮತ್ತು ದೀಪಿಕಾ ನಡುವೆ ವಾದಗಳು ನಡೆದಿವೆ. ರಾಕೇಶ್‌ ಅವರು ಕೂಗಾಡಿದ್ದು, ಕ್ಯಾಪ್ಟನ್‌ ಕಾವ್ಯಶ್ರೀ ಗೌಡ ಎಷ್ಟೇ ಪ್ರಯತ್ನಸಿದರೂ ಶಾಂತವಾಗಲಿಲ್ಲ. ರೂಪೇಶ್‌ ರಾಜಣ್ಣ ತಮ್ಮ ಟೀಮ್‌ಗೆ ಸಪೋರ್ಟ್‌ ಮಾಡಿದ್ದು, ಕಾವ್ಯಶ್ರೀ ನಡುವೆ ವಾದಕ್ಕೆ ಇಳಿದಿದ್ದಾರೆ. 30 ಗೊಂಬೆಗಳನ್ನು ಮಾಡುವಂತೆ ಬಿಗ್‌ ಬಾಸ್‌ ಬೇಡಿಕೆ ಇಟ್ಟಿದ್ದರು. ಯಾವ ತಂಡ ವಿಜೇತರಾಗಿದ್ದಾರೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ರಾಜಣ್ಣ ಉರುಳುಸೇವೆ: ಬಕ್ರಾ ಮಾಡಿದ್ದೇ ಗುರೂಜಿ, ರೂಪೇಶ್‌ ಶೆಟ್ಟಿ!

ದೀಪಿಕಾಗೆ ಈ ವಾರ ಕಿಚ್ಚನ ಚಪ್ಪಾಳೆ ಅಂತಿದ್ದಾರೆ ನೆಟ್ಟಿಗರು
ದೀಪಿಕಾ ಅವರು ಈ ಟಾಸ್ಕ್‌ನಲ್ಲಿ ಸಖತ್‌ ಆ್ಯಕ್ಟಿವ್‌ ಆಗಿ ಆಡಿದ್ದು, ಹಿಂದಿನ ಸಂಚಿಕೆಯಲ್ಲಿ ಪ್ರಶಾಂತ್‌ ಸಂಬರಗಿ ಅವರ ಜತೆಗೂ ಜಗಳ ಮಾಡಿದ್ದಾರೆ. ʻʻಕೆಂಪು ಬಣ್ಣದ ಟೀಮ್‌ ಆಟವನ್ನು ಆಟದ ತರ ಆಡಿದ್ದು ಹಸಿರು ಬಣ್ಣದ ಟೀಮ್‌ ಅಷ್ಟು ಚೆನ್ನಾಗಿ ಆಡಿಲ್ಲ. ಅದರಲ್ಲಿಯೂ ದೀಪಿಕಾ ದಾಸ್‌ ಚೆನ್ನಾಗಿ ಟಾಸ್ಕ್‌ ನಿಭಾಯಿಸಿದ್ದಾರೆʼʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮೂಲಕ ವ್ಯಕ್ತ ಪಡಿಸುತ್ತಿದ್ದಾರೆ ನೆಟ್ಟಿಗರು.

ಚಿಕನ್ ಕನವರಿಕೆಯಲ್ಲಿ ಕಾವ್ಯಶ್ರೀ!
ಈ ವಾರದ ಕ್ಯಾಪ್ಟನ್‌ ಕಾವ್ಯಶ್ರೀ ಗೌಡ ಕೂಡ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗಾಗಲೇ ಟಾಸ್ಕ್‌ ಮುಕ್ತಾಯಗೊಂಡಿದ್ದು, ಬಳಿಕ ಕಾವ್ಯಶ್ರೀ ಅವರು ಕಣ್ಣೀರು ಹಾಕಿದ್ದಾರೆ. ಚಿಕನ್‌ ಇಲ್ಲದೇ ಬದುಕಿರಲಾರೆ ಎಂದು ಬಿಗ್‌ ಬಾಸ್‌ ಮೇಲೆ ಮುನಿಸಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಒಂದು ಹೇಳಿದ್ರೆ ಜಾಸ್ತಿ, ಇನ್ನೊಂದು ಹೇಳಿದ್ರೆ ಕಮ್ಮಿ: ಕ್ಯಾಪ್ಟನ್‌ ಆದ ಮೇಲೆ ಕಾವ್ಯಶ್ರೀ ಬದಲಾದರಾ?

Exit mobile version