Site icon Vistara News

Bigg Boss Kannada | ಮೊದಲ ವಾರ ಉತ್ತಮ ಪ್ರದರ್ಶನಕಾರ ಅರುಣ್‌ ಸಾಗರ್‌ : ಕಳಪೆ ಆದವರು?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ (Bigg Boss Kannada) ಆರನೇ ದಿನಕ್ಕೆ ಕಾಲಿಟ್ಟಿದೆ. ಉತ್ತಮ ಮತ್ತು ಕಳಪೆ ಪ್ರದರ್ಶನವನ್ನು ಬಿಗ್‌ ಬಾಸ್‌ ಸ್ಪರ್ಧಿಗಳು ನೀಡಿದ್ದಾರೆ. ಅರುಣ್‌ ಸಾಗರ್‌ ಮೊದಲನೇ ವಾರ ಉತ್ತಮ ಪ್ರದರ್ಶನಕಾರನಾಗಿ ಹೊರಹೊಮ್ಮಿದ್ದಾರೆ. ರೂಪೇಶ್‌ ರಾಜಣ್ಣ ಕಳಪೆ ಪ್ರದರ್ಶನ ತೋರಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ಶುಕ್ರವಾರ ಕಳಪೆ ಮತ್ತು ಅತ್ಯುತ್ತಮ ಆಯ್ಕೆಯನ್ನು ಸ್ಪರ್ಧಿಗಳು ಮಾಡುತ್ತಾರೆ. ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಮೆಡಲ್‌ ನೀಡಿದರೆ ಕಳಪೆ ಆದವರನ್ನು ಜೈಲಿಗೆ ಹಾಕುತ್ತಾರೆ. ಈ ವಾರ ರಾಕೇಶ್‌ ಕಳಪೆಯನ್ನು ಅರುಣ್‌ ಸಾಗರ್‌ಗೆ ನೀಡಿದ್ದರೆ. ಅತ್ಯುತ್ತಮವನ್ನು ನವಾಜ್‌ಗೆ ನೀಡಿದ್ದಾರೆ. ದೀಪಿಕಾ ದಾಸ್‌ ಅತ್ಯುತ್ತಮವನ್ನು ಅರುಣ್‌ ಸಾಗರ್‌ಗೆ ನೀಡಿದರೆ ಕಳಪೆಯನ್ನು ಕಾವ್ಯಶ್ರೀಗೆ ನೀಡಿದ್ದಾರೆ. ದಿವ್ಯಾ ಉರುಡುಗ ಕಳಪೆಯನ್ನು ನವಾಜ್‌ಗೆ ನೀಡಿದರೆ ಅತ್ಯುತ್ತಮವನ್ನು ಗುರೂಜಿಗೆ ನೀಡಿದ್ದಾರೆ. ಮಯೂರಿ ಅತ್ಯುತ್ತಮವನ್ನು ಸಾನ್ಯಗೆ ನೀಡಿದ್ದಾರೆ. ಕಳಪೆಯನ್ನು ರೂಪೇಶ್‌ ರಾಜಣ್ಣಗೆ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ಕಳಪೆ ಪ್ರದರ್ಶನ ಜಗಳ

ಅನುಪಮಾ ಕಳಪೆಯನ್ನು ರೂಪೇಶ್‌ ರಾಜಣ್ಣಗೆ ನೀಡಿದ್ದಾರೆ. ಉತ್ತಮವನ್ನು ದರ್ಶ್‌ಗೆ ನೀಡಿದ್ದಾರೆ. ಪ್ರಶಾಂತ್‌ ಸಂಬರಗಿ ಕಳಪೆಯನ್ನು ನವಾಜ್‌ಗೆ ನೀಡಿದ್ದಾರೆ. ಉತ್ತಮವನ್ನು ಅರುಣ್‌ ಸಾಗರ್‌ಗೆ ನೀಡಿದ್ದಾರೆ. ಅಮೂಲ್ಯ ಉತ್ತಮವನ್ನು ಗುರೂಜಿಗೆ ನೀಡಿದ್ದಾರೆ. ಕಳಪೆಯನ್ನು ನವಾಜ್‌ಗೆ ನೀಡಿದ್ದಾರೆ. ಅರುಣ್‌ ಸಾಗರ್‌ ಅತ್ಯುತ್ತಮವನ್ನು ಗುರೂಜಿಗೆ ನೀಡಿದ್ದಾರೆ, ಕಳಪೆಯನ್ನು ರೂಪೇಶ್‌ ಶೆಟ್ಟಿಗೆ ನೀಡಿದ್ದಾರೆ. ಕಾವ್ಯಶ್ರೀ ಕಳಪೆಯನ್ನು ರೂಪೇಶ್‌ ರಾಜಣ್ಣ ಹಾಗೂ ಉತ್ತಮ ಅರುಣ್‌ಗೆ ನೀಡಿದ್ದಾರೆ. ಐಶ್ವರ್ಯ ಪಿಸೆ ಉತ್ತಮ ಅರುಣ್‌ ಸಾಗರ್‌ಗೆ ನೀಡಿದರೆ ಕಳಪೆಯನ್ನು ರೂಪೇಶ್‌ ರಾಜಣ್ಣಗೆ ನೀಡಿದ್ದಾರೆ. ದರ್ಶ್‌ ಕಳಪೆಯನ್ನು ಅರುಣ್‌ ಸಾಗರ್‌ಗೆ ನೀಡಿದರೆ ಉತ್ತಮವನ್ನು ಗುರೂಜಿಗೆ ನೀಡಿದ್ದಾರೆ. ಆರ್ಯವರ್ಧನ್‌ ಉತ್ತಮವನ್ನು ದಿವ್ಯಾ ಉರುಡುಗನಿಗೆ ನೀಡಿದರೆ, ಕಳಪೆಯನ್ನು ರೂಪೇಶ್‌ ರಾಜಣ್ಣಗೆ ನೀಡಿದ್ದಾರೆ. ವಿನೋದ್‌ ಉತ್ತಮವನ್ನು ಪ್ರಶಾಂತ್‌ ಸಂಬರಗಿಗೆ ನೀಡಿದರೆ ಕಳಪೆಯನ್ನು ಕಾವ್ಯಶ್ರೀಗೆ ನೀಡಿದ್ದಾರೆ. ರೂಪೇಶ್‌ ಶೆಟ್ಟಿ ಉತ್ತಮವನ್ನು ಗುರೂಜಿಗೆ ನೀಡಿದ್ದಾರೆ ಕಳಪೆಯನ್ನು ಅರುಣ್‌ ಸಾಗರ್‌ಗೆ ನೀಡಿದ್ದಾರೆ.

ಕಳಪೆ ಪ್ರದರ್ಶನದ ಫಲಿತಾಂಶದ ನಂತರ ಬಿಗ್‌ ಬಾಸ್‌ ಸ್ಪರ್ಧಿಗಳು ತಮ್ಮಲ್ಲಿಯೇ ಗಾಸಿಪ್‌ ಶುರು ಮಾಡಿಕೊಂಡಿದ್ದರು. ಸಾನ್ಯ ಮತ್ತು ರೂಪೇಶ್‌ ಹಾಗೂ ಕಾವ್ಯಶ್ರೀ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು. ʻʻಅರುಣ್‌ ಸಾಗರ್‌ಗೆ ಇಗೋ ಹರ್ಟ್‌ ಆಗಿ ನಿಮ್ಮನ್ನು ಕಳಪೆ ಎಂದರುʼʼ ಎಂದು ರೂಪೇಶ್‌ ಬಳಿ ಸಾನ್ಯ ಹೇಳಿಕೊಂಡರು. ಅದೇ ರೀತಿ ಅನುಪಮಾ ಗೌಡ ʻʻರೂಪೇಶ್‌ ರಾಜಣ್ಣ ಫೇಕ್‌ʼʼ ಎಂದು ಸ್ಪರ್ಧಿಗಳ ಮುಂದೆ ಹೇಳಿದರು. ಪ್ರಶಾಂತ್‌ ಸಂಬರಗಿ ರಾಕೇಶ್‌ ಜತೆ ಮಾತನಾಡಿ ʻʻಒಟಿಟಿಯವರು ನೀವೆಲ್ಲ ಗ್ರೂಪಿಸಮ್‌ ಮಾಡುತ್ತಿದ್ದೀರಿ . ನಿಮಗೆ ಅರುಣ್‌ ಸಾಗರ್‌ ಬಗ್ಗೆ ಅವರ ಆಟ, ಯಾವುದರ ಬೆಲೆ ಗೊತ್ತಿಲ್ಲʼʼ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಕೇಶ್‌ ʻʻನನಗೂ ಆ ಗುಂಪಿಗೂ ಸಂಬಂಧವೇ ಇಲ್ಲ. ಆಗಲೂ ಒಬ್ಬನೇ ಆಟವಾಡಿಕೊಂಡು ಬಂದಿದ್ದೇನೆʼʼ ಎಂದರು.

ಇದನ್ನೂ ಓದಿ | Bigg Boss Kannada | ತಾಯಿಯನ್ನು ನೆನೆದು ಭಾವುಕರಾದ ವಿನೋದ್‌, ರೂಪೇಶ್‌ ಶೆಟ್ಟಿ : ಕಾವ್ಯಶ್ರೀ ಹೇಳಿದ್ದೇ ಬೇರೆ!

Exit mobile version