Site icon Vistara News

Bigg Boss Kannada | ಕಾವ್ಯಶ್ರೀ ಮಚ್ಚೆಗೆ ಆರ್ಯವರ್ಧನ್‌ ಭವಿಷ್ಯ: ಕ್ಯಾಮೆರಾ ಸ್ವಲ್ಪ ತಿರುಗಣ್ಣ ಅಂದ್ರು ರಾಜಣ್ಣ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರಲ್ಲಿ (Bigg Boss Kannada) ಆರ್ಯವರ್ಧನ್‌ ಆಗಾಗ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ. ಹಿಂದೊಮ್ಮೆ ತುಟಿ, ಮೂಗು ಹೀಗೆ ಗ್ರಹಗಳ ಭವಿಷ್ಯವನ್ನು ನುಡಿದಿದ್ದರು. ಇದೀಗ ಕಾವ್ಯಶ್ರೀ ಮಚ್ಚೆಯ ಭವಿಷ್ಯವನ್ನು ಗುರೂಜಿ ಹೇಳಿದ್ದಾರೆ.

ಟಾಸ್ಕ್‌ ಮುಗಿದ ನಂತರ ಕಾವ್ಯಶ್ರೀ, ವಿನೋದ್‌ ಗೊಬ್ಬರಗಾಲ ಹಾಗೂ ಆರ್ಯವರ್ಧನ್‌ ಮಾತನಾಡಿಕೊಳ್ಳುತ್ತಿದ್ದರು. ಆಗ ಕಾವ್ಯಶ್ರೀ ಮಾತನಾಡಿ ʻʻನನ್ನ ಮುಖದಲ್ಲಿ ಮಚ್ಚೆ ಬಂದಿದೆʼ ಎಂದಿದ್ದಾರೆ. ಆರ್ಯವರ್ಧನ್‌ ಪ್ರತಿಕ್ರಿಯೆ ನೀಡಿ ʻʻನಿನಗೆ ಲೈನ್‌ ಹೊಡಿತಾರೆ. ಬೇಕಿದ್ದರೆ ನೀನು ಲೈನ್‌ ಹೊಡಿಬೋದು. ಇಲ್ಲ ಅಂದ್ರೆ ಬೀಳ್‌ಸ್ಕೋಬೋದು ಅದು ನಿನ್ನ ಪರ್ಸನಲ್‌ʼʼ ಎಂದಿದ್ದಾರೆ. ವಿನೋದ್‌ ಮಾತನಾಡಿ ʻʻಈಗಾಗಲೇ ನಿನಗೆ ಹುಡುಗರು ಬಿದ್ದಿದ್ದಾರೆʼʼ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಕಾವ್ಯ ʻʻಯಾವುದಾದರೂ ಚೆನ್ನಾಗಿರೋದು ಬಂದ್ರೆ ನೋಡಿ ಮದುವೆ ಆಗ್ತೀನಿʼʼ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್ಯವರ್ಧನ್‌ ʻʻಚೆನ್ನಾಗಿರೋದು ನೋಡೋಕೆ ಅದೇನು ತರಕಾರಿನಾ? ಎಂದು ತಮಾಷೆ ಮಾಡಿದ್ದಾರೆ.

ಪಟ್ಟು ಹಿಡಿದ ರಾಜಣ್ಣ, ಕ್ಯಾಮೆರಾ ಸ್ವಲ್ಪ ತಿರುಗಣ್ಣ ಅಂದ್ರು ರಾಜಣ್ಣ!
ಊಟ ಮಾಡುವಾಗ ರೂಪೇಶ್‌ ರಾಜಣ್ಣ ಎಕ್ಸ್‌ಪ್ರೆಷನ್‌ ನೋಡಿ ದಿವ್ಯಾ ಉರುಡುಗ ನಕ್ಕಿದ್ದಾರೆ. ಬಿಗ್‌ ಬಾಸ್‌ ಕ್ಯಾಮೆರಾ ರೂಪೇಶ್‌ ಅವರತ್ತ ತಿರುಗುವುದಿಲ್ಲ ಎಂದು ಸದಸ್ಯರು ಕಾಲೆಳಿದ್ದಾರೆ. ಅದಕ್ಕೆ ರೂಪೇಶ್‌ ರಾಜಣ್ಣ ಬಿಗ್‌ ಬಾಸ್‌ ಕ್ಯಾಮೆರಾಗೆ ರಿಕ್ವೆಸ್ಟ್‌ ಮಾಡಿದ್ದಾರೆ. ನಂತರ ಕ್ಯಾಮೆರಾ ರೂಪೇಶ್‌ ಮುಂದೆ ತಿರುಗಿದ್ದು ಬಿಗ್‌ ಬಾಸ್‌ ನೀಡಿದ ʻʻಟಂಗ್‌ ಟ್ವಿಸ್ಟರ್‌ʼʼಅನ್ನು ಹೇಳಿದ್ದಾರೆ.

ವಿನೋದ್‌ಗೆ ಹುಟ್ಟು ಹಬ್ಬದ ಸಂಭ್ರಮ!
ವಿನೋದ್‌ ಗೊಬ್ಬರಗಾಲಗೆ ಮನೆಯ ಸದಸ್ಯರು ತಾವೇ ಕೇಕ್‌ ಪ್ರಿಪೇರ್‌ ಮಾಡಿ, ವಿನೋದ್‌ ಜನುಮದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಅದರಲ್ಲಿಯೂ ಅರುಣ್‌ ಸಾಗರ್‌ ಹಾಡು, ಇನ್ನೂ ರಂಜನೆಯನ್ನು ಹೆಚ್ಚಿಸಿತ್ತು. ನಂತರ ಬಿಗ್‌ ಬಾಸ್‌ ಕೇಕ್‌ ಕಳುಹಿಸಿ ಮನೆಯವರಿಗೆ ಸರ್‌ಪ್ರೈಸ್‌ ನೀಡಿದರು.

ಕಡೆ ಕ್ಷಣದಲ್ಲಿ ಕ್ಯಾಪ್ಟನ್ ರೇಸ್‌ನಿಂದ ಹೊರಬಿದ್ದ ಕಾವ್ಯಶ್ರೀ ಗೌಡ
ವಾರದ ಟಾಸ್ಕ್‌ನಲ್ಲಿ ನಿಧಿ ಶೋಧಕಿಯಾಗಿದ್ದ ಕಾವ್ಯಶ್ರೀ ಗೌಡ ಟಾಪ್ 3 ಹಂತದವರೆಗೂ ಕ್ಯಾಪ್ಟನ್ಸಿ ಕಂಟೆಂಡರ್ ರೇಸ್‌ನಲ್ಲಿದ್ದರು. ಆದರೆ, ಕೊನೆಗೆ ರೇಸ್‌ನಿಂದ ಹೊರಬಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ಗೆ ಅನುಪಮಾ ಗೌಡ ಹಾಗೂ ದೀಪಿಕಾ ದಾಸ್ ಆಯ್ಕೆ ಆದರು. ವಿಸರ್ಜಕರ ಪೈಕಿ ರೂಪೇಶ್ ಶೆಟ್ಟಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಸೆಲೆಕ್ಟ್ ಆದರು. ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು ಮೂರನೇ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ದರ್ಶ್, ದಿವ್ಯಾ ಉರುಡುಗ, ಮಯೂರಿ, ವಿನೋದ್ ಗೊಬ್ಬರಗಾಲ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ಅನುಪಮಾ ಗೌಡ ಹಾಗೂ ಅಮೂಲ್ಯ ಗೌಡ ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ | Bigg Boss Kannada | ಗೋಲ್ಡ್ ಮೈನ್ ಟಾಸ್ಕ್‌ ಕುರಿತು ಮನೆಯಲ್ಲಿ ಚರ್ಚೆ: ಇದು ಗ್ಯಾಂಗ್‌ ಗೇಮ್‌ ಅಂದ್ರು ಆರ್ಯವರ್ಧನ್‌!

Exit mobile version