Site icon Vistara News

Bigg Boss Kannada | ವಯಸ್ಸಿಗೆ ಮರ್ಯಾದೆ ಕೊಡುತ್ತಿದ್ದೇನೆ , ಮಾತಲ್ಲಿ ನಿಗಾ ಇರಲಿ: ಗುರೂಜಿಗೆ ಕಿಚ್ಚ ಎಚ್ಚರಿಕೆ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಆರ್ಯವರ್ಧನ್‌ ಅವರಿಗೆ ಕಿಚ್ಚ ವೀಕೆಂಡ್ ಪಂಚಾಯಿತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ವಾರ ದರ್ಶ್‌ ಮನೆಯಿಂದ ಹೊರ ನಡೆದಿದ್ದಾರೆ. ಹಾಗೆಯೇ, ರೂಪೇಶ್‌ ಶೆಟ್ಟಿಯನ್ನು ದರ್ಶ್‌ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಟಾಪ್‌ 2 ಸ್ಪರ್ಧಿಗಳ ಕುರಿತು ಮಾತಾಡುವಾಗ ಕಿಚ್ಚ ಆರ್ಯವರ್ಧನ್‌ ಅವರಿಗೆ ಗರಂ ಆಗಿ ವಾರ್ನ್‌ ಮಾಡಿದರು.

ವೈಲ್ಡ್‌ ಕಾರ್ಡ್‌ ಎಂಟ್ರಿ ಆದ ಮಾತ್ರಕ್ಕೆ ಅವರನ್ನೇ ಗೆಲ್ಲಿಸುತ್ತೇವಾ?
ಕಿಚ್ಚ ಮಾತನಾಡಿ ʻʻಪ್ರತಿ ಸೀಸನ್‌ ಅಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗುತ್ತೆ. ಅದರ ಉದ್ದೇಶ ಅವರನ್ನು ಗೆಲ್ಲಿಸಬೇಕು ಅಂತನಾ? ಮ್ಯಾಚ್‌ ಫಿಕ್ಸಿಂಗ್‌ ಅಂತನಾ? ಹಾಗಿದ್ದಾಗ ಎಷ್ಟು ದಿನ ವೈಲ್ಡ್‌ ಕಾರ್ಡ್‌ ಬಂದವರು ಉಳಿದುಕೊಂಡಿದ್ದಾರೆ?ʼʼ ಎಂದರು. ʻʻನನ್ನ ಮನಸ್ಸು ಒಪ್ಪಲ್ಲ. ಬಲವಂತವಾಗಿ ಒಪ್ಪಿಸಲು ಬರಬೇಡಿʼʼ ಎಂದು ಆರ್ಯವರ್ಧನ್‌ ಹೇಳಿದರು. ಕಿಚ್ಚ “ಇಲ್ಲಿ ಯಾವ ಬಡ್ಡಿ ಮಗ ಒಪ್ಪಿಸಲು ಬರುತ್ತಿದ್ದಾನೆ ಹೇಳಿ” ಎಂದು ಗರಂ ಆದರು.

Bigg Boss Kannada

ವಯಸ್ಸಿಗೆ ಮರ್ಯಾದೆ ಕೊಡುತ್ತಿದ್ದೇನೆ
ಕಿಚ್ಚ ಮಾತನಾಡಿ ʻʻನಮ್ಮ ನಿಮ್ಮ ಮಧ್ಯದಲ್ಲಿ ಬಾಯಿ ಮುಚ್ಚಿಕೊಂಡು ಕೇಳಿಸಿಕೊಂಡರೆ ಸರಿ. ವಯಸ್ಸಿಗೆ ಮರ್ಯಾದೆ ಕೊಡುತ್ತಾ ಇದ್ದೇನೆ. ಈ ವೇದಿಕೆ ಮರ್ಯಾದೆ ತೆಗಿದರೆ ನಮಗೂ ನಿಮಗೂ ಬೀಳುತ್ತೆ. ಆ ತರ ಆಗುತ್ತಿದೆ ಕೂಡ. ಏನ್ರಿ ಅದು ಮ್ಯಾಚ್‌ ಫಿಕ್ಸಿಂಗ್‌, ತಮಾಷೆ ಮಾಡ್ತಾ ಇದ್ದೀರಾ?ʼʼ ಎಂದು ಗರಂ ಆಗಿದ್ದಾರೆ. ಎಲ್ಲದೂ ಊರಲ್ಲಿರೋದೆಲ್ಲ ಮಾತಾಡಕ್ಕೆ ಬರತ್ತೆ ನಿಮಗೆ, ಮ್ಯಾಚ್‌ ಫಿಕ್ಸಿಂಗ್‌ ಅಂದರೆ ಅಲ್ಲಿ ಕೂತ್‌ಕೊಂಡು ಆಡ್ತಾ ಇರೋರು ಯಾರು ಹಾಗಾದ್ರೆ? ಯಾರಿಗೂ ಯೋಗ್ಯತೆ ಇಲ್ಲವಾ, ಮೋಸ ಮಾಡಿ ಗೆಲ್ಲುತ್ತಾ ಇದ್ದಾರಾ ಇವರು ಎಂದು ಗರಂ ಆದರು. ಇಷ್ಟ ಆಗಿರೋದು ಹೇಳಿ, ಮ್ಯಾಚ್‌ ಫಿಕ್ಸಿಂಗ್‌ ಅಂದರೆ ಅರ್ಥ? ನಿಮ್ಮ ವ್ಯಕ್ತಿತ್ವ ಬಗ್ಗೆ ಹೇಳಿದರೆ ಇಷ್ಟು ಉದ್ದ ಮಾತಾಡುತ್ತೀರಾ? ಕೇರ್‌ ಫುಲ್‌ ಇರಿ ಎಂದರು. ನಿಮ್ಮ ಅನಿಸಿಕೆ ಹೇಳಿ. ಆದರೆ ಮಾತಲ್ಲಿ ನಿಗಾ ಇರಲಿʼʼ ಎಂದರು ಕಿಚ್ಚ.

Bigg Boss Kannada

ಇದಾದ ನಂತರ ಅನುಪಮಾ ಸದಸ್ಯರ ಮುಂದೆ ಅತ್ತಿದ್ದಾರೆ. ಹಾಗೆಯೇ, ಗುರೂಜಿ ಜತೆ ಮಾತಾಡುವುದಿಲ್ಲ ಎಂತಲೂ ಹೇಳಿದರು. ರಾಕೇಶ್‌ ನಂತರ ಆರ್ಯವರ್ಧನ್‌ಗೆ ಟಾಸ್ಕ್‌ಅನ್ನು ವಿವರಿಸಿದರೂ, ಸ್ಪರ್ಧಿಗಳು ಬುದ್ಧಿ ಮಾತನ್ನು ಹೇಳಲು ಬಂದರೂ ಕೇಳಲು ತಯಾರು ಇರಲಿಲ್ಲ ಗುರೂಜಿ.

ಇದನ್ನೂ ಓದಿ | Bigg Boss Kannada | ಅನುಪಮಾ ಒಳಗಡೆ ಬರಲಿ ಎನ್ನುವ ಆಸೆ ಬಿಗ್‌ ಬಾಸ್‌ಗೆ ಇತ್ತು: ಆರ್ಯವರ್ಧನ್‌

Exit mobile version