Site icon Vistara News

Bigg Boss Kannada | ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ಕಳಪೆ ಪ್ರದರ್ಶನ ಜಗಳ

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಈ ವಾರದ ಟಾಸ್ಕ್‌ಗಳು ಮುಕ್ತಾಯವಾಗಲಿದೆ. ಈಗ ಅಸಲಿ ಆಟ ಶುರುವಾಗಿದ್ದು, ಈ ವಾರದ ಕಳಪೆ ಆಟಗಾರ ಯಾರು ಎಂಬುದು ತಿಳಿಯುವ ಸಮಯವಾಗಿದೆ. ಬಿಗ್ ಬಾಸ್‌ ನಿಯಮದಂತೆ ಒಂದೊಂದೇ ಸ್ಪರ್ಧಿಗಳು, ಈ ವಾರದ ಕಳಪೆ ಪಟ್ಟಿಗೆ ಸೇರುವ ವ್ಯಕ್ತಿಗಳ ಹೆಸರನ್ನು ಸೂಚಿಸಿ ಸೂಕ್ತ ಕಾರಣ ನೀಡಬೇಕಾಗುತ್ತದೆ.

“ಕಳಪೆ ಪ್ರದರ್ಶನ”ದ ಕುರಿತಾದ ಪ್ರೋಮೊವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಕುತೂಹಲ ಹುಟ್ಟಿಸಿವೆ. ಅರುಣ್‌ ಸಾಗರ್‌ ಬಿಗ್‌ ಬಾಸ್‌ ಮನೆಯ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ ಎಂದು ರೂಪೇಶ್‌ ಶೆಟ್ಟಿ ಕಾರಣವನ್ನು ಕೊಟ್ಟಿದ್ದಾರೆ. ಆನಂತರದಲ್ಲಿ ಬಂದ ಅರುಣ್‌ ಸಾಗರ್‌, ರೂಪೇಶ್‌ ಶೆಟ್ಟಿ ಕಳಪೆ ಪ್ರದರ್ಶಕ ಎಂದು ಮೂದಲಿಸಿದ್ದಾರೆ. ʻʻರೂಪೇಶ್‌ಗೆ ಎಲ್ಲರ ಜತೆ ಬೆರೆಯುವ ಗುಣವಿಲ್ಲ. ಮಾನಸಿಕವಾಗಿ ಇನ್ನೂ ಓಪನ್‌ ಆಗಿಲ್ಲ. ತುಂಬಾ ಕಳಪೆʼʼ ಎಂದೂ ಅರುಣ್‌ ಸಾಗರ್‌ ಹೇಳಿದ್ದಾರೆ. ಕಾವ್ಯಶ್ರೀ, ಅನುಪಮಾ ಗೌಡ, ನೇಹಾ ಗೌಡ ಸೇರಿದಂತೆ ಇತರ ಸದಸ್ಯರೂ ರೂಪೇಶ್‌ ರಾಜಣ್ಣ ಕಳಪೆ ಎಂದು ಸೂಚಿಸುತ್ತಾರೆ.

ಇದನ್ನೂ ಓದಿ | Bigg Boss Kannada | ತಾಯಿಯನ್ನು ನೆನೆದು ಭಾವುಕರಾದ ವಿನೋದ್‌, ರೂಪೇಶ್‌ ಶೆಟ್ಟಿ : ಕಾವ್ಯಶ್ರೀ ಹೇಳಿದ್ದೇ ಬೇರೆ!

ಅಲ್ಲದೇ ನೇಹಾ ಗೌಡ ವಿವರಣೆ ನೀಡಿ, ʻʻರೂಪೇಶ್‌ ರಾಜಣ್ಣ ತುಂಬಾ ಫೇಕ್‌ ಎಂದು ಅನ್ನಿಸುತ್ತಾರೆʼʼ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೂಪೇಶ್‌ ರಾಜಣ್ಣ ʻʻನಾನೊಬ್ಬ ಹೋರಾಟಗಾರ. ನನಗೆ ಯಾರೆಲ್ಲ ನಾಟಕ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆʼʼ ಎಂದಿದ್ದಾರೆ.

ಈ ವೇಳೆ ದೀಪಿಕಾ ದಾಸ್‌ ಮಧ್ಯಪ್ರವೇಶಿಸಿ ʻʻಈಗ ನೀವು ಹೋರಾಟ ಮಾಡುವ ಸಮಯವಲ್ಲ. ದಯವಿಟ್ಟು ಬನ್ನಿ” ಎಂದಿದ್ದಾರೆ. ದೀಪಿಕಾ ದಾಸ್‌ ಮಾತಿಗೆ ರೂಪೇಶ್‌ ರಾಜಣ್ಣ, ʻʻನಾನು ಮಾತನಾಡುವಾಗ ಮಧ್ಯೆ ಮಾತನಾಡಬೇಡಿ” ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ದೀಪಿಕಾ ದಾಸ್‌ ʻʻನೀವು ವಿಷಯ ಬಿಟ್ಟು ಬೇರೆಲ್ಲ ಮಾತನಾಡುತ್ತಿದ್ದೀರಾʼʼ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ರೂಪೇಶ್‌ ರಾಜಣ್ಣ ಮೈಕ್‌ ತೆಗೆದು ಹೊರಟು ಬಿಡುತ್ತಾರೆ. ನಂತರ ಆರ್ಯವರ್ಧನ್‌ ಗುರೂಜಿ, ಅರುಣ್‌ ಸಾಗರ್‌ ಮತ್ತು ಉಳಿದ ಸ್ಪರ್ಧಿಗಳು ರೂಪೇಶ್‌ ರಾಜಣ್ಣಗೆ ಸಮಾಧಾನ ಮಾಡುತ್ತಾರೆ.

ಇದನ್ನೂ ಓದಿ | Bigg Boss Kannada | ಐಶ್ವರ್ಯಾ ಪಿಸೆಗೆ ಪ್ರಪೋಸ್‌ ಮಾಡಿದ ನವಾಜ್‌ : ಅರುಣ್‌ ಸಾಗರ್‌ ಮೆಡಿಟೇಶನ್ ಪ್ರಭಾವ?

Exit mobile version