Site icon Vistara News

Bigg Boss Kannada | ಮನೆಯಲ್ಲಿ ಕಾವ್ಯಶ್ರೀ ಗೋಳು ಕೇಳೋರು ಯಾರೂ ಇಲ್ವಂತೆ: ಹೊಸ ಗೆಳೆಯ ಬಂದಾಯ್ತಂತೆ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 28ನೇ ದಿನ ಮನೆಯಲ್ಲಿ ಕಾವ್ಯಶ್ರೀ ಸಖತ್‌ ಆಕ್ಟಿವ್‌ ಆಗಿ ಕಾಣಿಸಿಕೊಂಡರು. ಕಳಪೆ ಮತ್ತು ಉತ್ತಮ ಪ್ರದರ್ಶನ ವೇಳೆಯಲ್ಲಿಯೂ ಕಾವ್ಯರನ್ನು ಮನೆಯ ಸದಸ್ಯರು ಹೊಗಳಿದರು. ಕಾವ್ಯಶ್ರೀ ಅವರು ರಾಕೇಶ್‌ ಅವರಿಗೆ ತಮಾಷೆಯನ್ನು ಮಾಡಿದ್ದು, ಈ ವಾರ ಹೈಲೈಟ್‌ ಆಗಿದ್ದಾರೆ.

ಕಾವ್ಯಶ್ರೀ ಹಾಗೂ ರಾಕೇಶ್‌ ಮನೆಯಲ್ಲಿ ಯಾವಾಗಲೂ ಕ್ಲೋಸ್‌ ಆಗಿ ಇರುತ್ತಿದ್ದರು. ಮಾತು, ಹಾಡು, ಹರಟೆ ಎಂದು ರಾಕೇಶ್ ಜತೆಗೆ ಹೆಚ್ಚು ಸಮಯ ಇರುತ್ತಿದ್ದರು. ಆದರೆ ಈಗ ರಾಕೇಶ್ ಅವರು ಅಮೂಲ್ಯ ಜತೆಗೆ ಓಡಾಡುತ್ತಿರುವುದನ್ನು ಕಾಮಿಡಿ ಮಾಡಿದ್ದಾರೆ. ತಮಾಷೆ ಮಾಡುವಾಗ ಅನುಪಮಾ ಕೂಡ ಸಾಥ್‌ ನೀಡಿದ್ದಾರೆ.

ಕಾವ್ಯಶ್ರೀ ಮಾತನಾಡಿ ʻʻಪಾರಿವಾಳಕ್ಕೆ ಕಾಳು ಹಾಕಿ ನನ್ನ ಅಣ್ಣನಂತೆ ಸಾಕಿದ್ದೆ. ಆದರೆ ಪಾರಿವಾಳ ಹಾರಿ ಹೋಯ್ತು. ಬಿಗ್ ಬಾಸ್ ಬಂದ್ಮೇಲೆ ನಮ್ಮ ಅಣ್ಣನನ್ನೇ ಕಿತ್ತುಕೊಂಡೆ. ಇಲ್ಲಿ ಎಲ್ಲಾರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಒಂದು ಜೋಡಿ ಬೇಕು ದೇವ್ರೆ. ಆಟ ಆಡುವಾಗಲೂ ಸಿಂಗಲ್, ಗ್ರೂಪ್‌ನಲ್ಲಿ ಇದ್ದಾಗಲೂ ಸಿಂಗಲ್. ಯಾರು ನನ್ನ ತಂಗಿ ಎನ್ನುತ್ತಾರೆ? ಸ್ಕೂಲ್‌ಗೆ ಹೋದ ಮೇಲೆ ನನ್ನ ವಿದ್ಯೆಯನ್ನೇ ಕಿತ್ತುಕೊಂಡೆ. ಕಾಲೇಜಿಗೆ ಹೋದ ಮೇಲೆ ನನ್ನ ಕ್ರಶ್‌ ಕಿತ್ತುಕೊಂಡೆ. ಈಗ ನೆಮ್ಮದಿ ಕಿತ್ತುಕೊಂಡೆ. ಬಿಗ್‌ ಬಾಸ್‌ಗೆ ಬಂದ ಮೇಲೆ ಅಣ್ಣನನ್ನೇ ಕಿತ್ತುಕೊಂಡೆ. ಈ ದುಃಖನಾ ಹೇಳಿಕೊಳ್ಳೋಣಾ ಅಂದ್ರೆ ಬಿಗ್ ಬಾಸ್ ಕಣ್ಣೆದುರು ಬರುದಿಲ್ಲವೇ ಅಂತ ಗೋಳಾಡುವಾಗ ರಾಕೇಶ್ ಬಂದಿದ್ದಾರೆ. ಆಗ ಕಾವ್ಯಾ ಮಾತನಾಡಿʻʻಮಾಡುವುದೆಲ್ಲ ಮಾಡಿ ಈಗ ಮಳ್ಳನ ಥರ ಬಂದಿದ್ದು ನೋಡುʼʼʼ ಎಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ಆಗಿರುವ ಖುಷಿಯ ನಡುವೆಯೂ ಸಾನ್ಯ ಅತ್ತಿದ್ಯಾಕೆ?

ಟಾಮಿ ಎನ್ನುವ ಕಪ್ಪೆ ಕಾವ್ಯಶ್ರೀಗೆ ಹೊಸ ಗೆಳೆಯನಾಗಿದ್ದು, ರೂಪೇಶ್‌ ಶೆಟ್ಟಿ ಅವರಿಗೆ ಟಾಮಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ಟಾಮಿ ಮುಂದೆ ಕಾವ್ಯಶ್ರೀ ಮಾತನಾಡಿ ʻʻಇಲ್ಲಿ ಎಷ್ಟೋ ಜನ ಮನೆಯ ಒಳಗೆ ಬರಲು ಕಾಯುತ್ತಿರುತ್ತಾರೆ. ನೀನು ಆರಾಮಾಗಿ ಇಲ್ಲಿದ್ದೀಯʼʼ ಎಂದು ಹೇಳಿದರು.

ಮನೆಯಲ್ಲಿ ರಾಕೇಶ್‌ ಅಡಿಗ ಹಾಗೂ ಅಮೂಲ್ಯ ನಡುವೆ ಆಪ್ತತೆ ಇನ್ನೂ ಹೆಚ್ಚಾಗುತ್ತಿದ್ದು, ಅನುಪಮಾ ಅವರ ಮುಂದೆ ರಾಕೇಶ್‌ ಅವರು ʻʻನಾನು ಮತ್ತು ಅಮೂಲ್ಯ ಒಂದೇ ರೀತಿ ಯೋಚನೆ ಮಾಡುತ್ತೇವೆ. ಅವಳು ನನ್ನ ತರಹ ಸೈಕ್‌ ಆಗಿ ಕೆಲವೊಮ್ಮೆ ಯೋಚನೆ ಮಾಡುತ್ತಾಳೆʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಒಗ್ಗಟ್ಟಿನ ಟಾಸ್ಕ್‌ನಲ್ಲಿ ಮನಸುಗಳ ಒಡಕು: ಅರುಣ್‌ ಸಾಗರ್‌ ಮಾತಿಗೆ ಕಣ್ಣೀರಿಟ್ಟ ನೇಹಾ!

Exit mobile version