Site icon Vistara News

Bigg Boss Kannada | ಬಿಗ್‌ ಬಾಸ್‌ ಆಟ ಮುಗಿಸಿದ ಕಾವ್ಯಶ್ರೀ ಗೌಡ

Bigg Boss Kannada (Kavyashree Gowda eliminate)

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಸ್ಪರ್ಧಿಗಳಲ್ಲಿ ದಿನ ಕಳೆದಂತೆ ಟಫ್‌ ಕಾಂಪಿಟೇಶನ್‌ ಆಗುತ್ತಿದೆ. ಹಿಂದಿನ ವಾರ ವಿನೋದ್‌ ಗೊಬ್ಬರಗಾಲ ಅಳುತ್ತಲೇ ಮನೆಯಿಂದ ಹೊರ ನಡೆದಿದ್ದಾರೆ. ವಿನೋದ್‌ ಹೋದ ಬೆನ್ನಲ್ಲೆ ಕಾವ್ಯಶ್ರೀ ಗೌಡ ಔಟ್‌ ಆಗಿದ್ದಾರೆ. ನಿರೂಪಕಿಯಾಗಿ ವೃತ್ತಿ ಜೀವನ ಶುರು ಮಾಡಿದ್ದ ನಟಿ ಕಾವ್ಯಶ್ರೀ ಮಂಗಳಗೌರಿಯಾಗಿ ಮೋಡಿ ಮಾಡಿದ್ದರು.

ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ 17ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದರು. ಚನ್ನಪಟ್ಟಣ ಊರಿನವರಾದ ಇವರು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಪದಾರ್ಪಣೆ ಮಾಡಿದರು. ಮನೆಗೆ ಎಂಟ್ರಿ ಆಗುತ್ತಲೇ ಕಾವ್ಯಶ್ರೀ ಗೌಡ ಅವರ ಹೆಸರು ರೂಪೇಶ್‌ ಶೆಟ್ಟಿ ಅವರ ಜತೆ ತುಳಕು ಹಾಕಿಕೊಂಡಿತ್ತು. ಬಿಗ್‌ ಬಾಸ್‌ ಒಂದು ಟಾಸ್ಕ್‌ ಅನ್ನು ನೀಡಿದ್ದರು. ಎಂಟ್ರಿ ಆದ ಮೊದಲನೇ ವಾರ ಸ್ಪರ್ಧಿಗಳು ತಮಗೆ ಬೇಕಾದವರ ಜತೆ ಒಂದು ವಾರ ಹಗ್ಗ ಕಟ್ಟಿಕೊಂಡ ಅವರ ಜತೆಗೆ ಇರಬೇಕಿತ್ತು. ರೂಪೇಶ್‌ ಶೆಟ್ಟಿ ಮತ್ತು ಕಾವ್ಯಶ್ರೀ ಗೌಡ ಜತೆಯಾಗೇ ಇರುತ್ತಿದ್ದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮೇಲೆ ಸಾನ್ಯ ಅಯ್ಯರ್‌ ಮುನಿಸು : ʻರೂಪಿ ನೀನು ಸ್ಟ್ರಾಂಗ್ ಆಗಿರುʼ ಎಂದು ಹೇಳಿದ್ದೇಕೆ?

ಕಾವ್ಯಶ್ರೀ ಗೌಡ ಅವರು ಮನೆಯ ಕ್ಯಾಪ್ಟನ್‌ ಆಗಿಯೂ ನಿಭಾಯಿಸಿದ್ದಾರೆ. ಕ್ಯಾಮೆರಾ ಮುಂದೆ ಕಾವ್ಯಶ್ರೀ ಗೌಡ ಕ್ಯಾಪ್ಟನ್‌ ಆದ ಖುಷಿಗೆ ಕಣ್ಣೀರು ಹಾಕಿದ್ದರು. ಕಾವ್ಯಶ್ರೀ ಗೌಡ ಮಾತನಾಡಿ, ʻʻಮನೆಯಲ್ಲಿ ನನಗೆ ಸರಿಯಾಗಿ ಟಾಸ್ಕ್‌ ನಿಭಾಯಿಸುವುದಿಲ್ಲ ಎಂದು ಆಡಿಕೊಳ್ಳುತ್ತಿದ್ದರು. ಇದೀಗ ನನ್ನನ್ನು ನಾನು ಪ್ರೂವ್‌ ಮಾಡಿಕೊಂಡಿದ್ದೇನೆ. ಅವಕಾಶ ನೀಡಿದ ಬಿಗ್‌ ಬಾಸ್‌ಗೆ ಧನ್ಯವಾದʼʼಎಂದು ಹೇಳಿಕೊಂಡಿದ್ದರು.

ಎಲಿಮಿನೇಟ್‌ ಆದ ಎರಡು ವಾರಗಳ ಹಿಂದೆ ವಿನೋದ್‌ ಗೊಬ್ಬರಗಾಲ ಅವರು ಕಾವ್ಯಶ್ರೀ ಅವರನ್ನು ಎಲಿಮಿನೇಷನ್‌ನಿಂದ ಪಾರು ಮಾಡಿದ್ದರು. ಸಾನ್ಯ ಅಯ್ಯರ್, ವಿನೋದ್ ಗೊಬ್ಬರಗಾಲ, ಎಲಿಮಿನೇಷನ್ ನಂತರ ಇದೀಗ ಕಾವ್ಯಶ್ರೀ ಔಟ್ ಆಗಿದ್ದಾರೆ. ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕಾವ್ಯಶ್ರೀ ಅವರ ಬಿಗ್ ಬಾಸ್ ಆಟ ಕೊನೆಯಾಗಿದೆ‌.

ಇದನ್ನೂ ಓದಿ | Bigg Boss Kannada | ಈ ವಾರದ ಮನೆಯ ಕ್ಯಾಪ್ಟನ್‌ ರೂಪೇಶ್‌ ರಾಜಣ್ಣ: ಹೇಗಿತ್ತು ಕ್ಯಾಪ್ಟನ್ಸಿ ಟಾಸ್ಕ್‌ ಆಯ್ಕೆ?

Exit mobile version