Site icon Vistara News

Bigg Boss Kannada | ನಂದು-ಜಶ್ವಂತ್‌ ಬ್ರೇಕಪ್‌ಗೆ ಸಾನ್ಯ ಕಾರಣ: ನೆಟ್ಟಿಗರಿಂದ ಖಡಕ್ ಕ್ಲಾಸ್

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ (Bigg Boss Kannada) ಒಟಿಟಿ ಖ್ಯಾತಿಯ ನಂದು-ಜಶ್ವಂತ್‌ ಬ್ರೇಕಪ್‌ ಆಗಿರುವ ವಿಚಾರ ಸ್ವತಃ ನಂದು ಪೋಸ್ಟ್‌ ಮೂಲಕ ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಸಾನ್ಯ ಅಯ್ಯರ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂದು, ಜಶ್ವಂತ್ ಬ್ರೇಕಪ್‌ಗೆ ಸಾನ್ಯನೇ ಕಾರಣ ಎಂದು ನೆಟ್ಟಿಗರು ದೂರುತ್ತಿದ್ದಾರೆ.

ಬಿಗ್‌ ಬಾಸ್‌ ಒಟಿಟಿಯಲ್ಲಿ (Bigg Boss Kannada) ಜಶ್ವಂತ್‌ ಮತ್ತು ನಂದು ಪ್ರೇಮ ಪಕ್ಷಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಅವರಿಬ್ಬರ ಪ್ರೇಮದ ರೆಕ್ಕೆ ಕಟ್‌ ಆಗಿದೆ. ತಮ್ಮಿಬ್ಬರಿಗೂ ಬ್ರೇಕಪ್‌ ಆಗಿದೆ ಎಂಬ ಸಂಗತಿಯನ್ನು ನಂದು ಪರೋಕ್ಷವಾಗಿ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಜಶ್ವಂತ ಸ್ಷಷ್ಟನೆ ಕೊಟ್ಟಿಲ್ಲ. ಒಟಿಟಿ ಸೀಸನ್‌ ನಲ್ಲಿ ಮೊದಲು ನಂದಿನಿ ಹಾಗೂ ಜಶ್ವಂತ್‌ರನ್ನ ಸಿಂಗಲ್ ಕಂಟೆಸ್ಟೆಂಟ್‌ ಆಗಿ ‘ಬಿಗ್ ಬಾಸ್’ ಪರಿಗಣಿಸಿದ್ದರು. ಆದರೆ ಬರುಬರುತ್ತ ಸಾನ್ಯ ಹಾಗೂ ಜಶ್ವಂತ್‌ ಕ್ಲೋಸ್‌ ಆಗಿದ್ದರು. ನಂದು ಕೂಡ ಪೊಸೆಸಿವ್‌ನೆಸ್‌ನಿಂದಾಗಿ ಸಾಕಷ್ಟು ಬಾರಿ ಈ ಚರ್ಚೆಗಳನ್ನು ಮಾಡಿದ್ದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಭಾವುಕ!

ನಂದು ಪೋಸ್ಟ್‌ನಲ್ಲಿ ಹೇಳಿದ್ದೇನು?
ಕೆಲವು ದಿನಗಳ ಹಿಂದೆ ನಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಜಶ್ವಂತ್ ಅವರು ನಂದು ಹುಟ್ಟುಹಬ್ಬಕ್ಕೆ ವಿಶ್ ಕೂಡ ಮಾಡಿಲ್ಲ ಎಂಬ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ಒಟಿಟಿ ಸ್ಪರ್ಧಿ ನಂದು ಉತ್ತರ ಕೊಟ್ಟಿದ್ದಾರೆ.

ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ನಂದು, ʻʻಜಶ್ವಂತ್‌ ಮತ್ತು ನಾನು ಒಟ್ಟಿಗೆ ಇದ್ದೆವು. ಜತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ದೆವು. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್ ಅಪ್ ಮಾಡಬಾರದು ಎಂದು ಯೋಚಿಸಿದ್ದೆ, ಆದರೆ ಸಂಬಂಧ ಅಂತ್ಯಗೊಳ್ಳುವ ಸಮಯದಲ್ಲಿ ಪರಿಸ್ಥಿತಿ ಬೇರೆಯದ್ದೇ ಆಗಿತ್ತು. ತನಗೆ ಸ್ವಲ್ಪ ಸಮಯ ಬೇಕು ಎಂದು ಜಶ್ವಂತ್‌ ಕೇಳಿಕೊಂಡಾಗ ಅವನ ಖುಷಿ ಮತ್ತು ಆಯ್ಕೆಯನ್ನು ನಾನು ಗೌರವಿಸಿದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೇನೆ. ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು” ಎಂದು ನಂದು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಜಶ್ವಂತ್‌ಗೆ ಏನೂ ಹೇಳಬೇಡಿ, ಸಮಯ ಬಂದಾಗ ಅವನು ಏನು ಎಂಬುದನ್ನು ಅವನೇ ಪ್ರೂವ್ ಮಾಡುತ್ತಾನೆ. ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲ ಎಂದು ಬೇಸರ ಆಗುವುದಿಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್‌ ಆಗಿ ನಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ನಂದು-ಅವನದ್ದು ಏನೂ ಇಲ್ಲ ಎಂದ ನಂದು; ಜಶ್ವಂತ್‌ ಜತೆಗಿನ ಬ್ರೇಕಪ್‌ ಬಗ್ಗೆ ಏನಂದ್ರು?

Exit mobile version