Site icon Vistara News

Bigg Boss Kannada | ಭಾನುವಾರವೂ ಕಿಚ್ಚ ಸುದೀಪ್‌ ಗೈರು: ಈ ವಾರ ನೋ ಎಲಿಮಿನೇಷನ್‌?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ನಲ್ಲಿ (Bigg Boss Kannada) ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ ಅವರ ನಿರೂಪಣೆಯನ್ನು ಕಣ್ತುಂಬಿಸಿಕೊಳ್ಳುವ ಅದೆಷ್ಟೋ ವೀಕ್ಷಕರು ಇದ್ದಾರೆ. ಆದರೆ ಈ ವಾರ ಬಿಗ್‌ ಬಾಸ್‌ ನೋಡುಗರಿಗೆ ನಿರಾಸೆ ಉಂಟಾಗಿದೆ. ಶನಿವಾರ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಗೈರಾಗಿದ್ದರು. ಕಿಚ್ಚ ಸುದೀಪ್‌ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆಂದು ವಿದೇಶಕ್ಕೆ ಹಾರಿದ್ದಾರೆ. ಈ ನಿಟ್ಟಿನಲ್ಲಿ ʻವಾರದ ಕಥೆ ಕಿಚ್ಚನ ಜತೆʼಯಲ್ಲಿ ಸುದೀಪ್‌ ಗೈರಾಗಲಿದ್ದಾರೆ. ಈ ವಾರ ಎಲಿಮಿನೇಷನ್‌ ಪ್ರಕ್ರಿಯೆಯನ್ನು ಹಳೆಯ ಮೆಥಡ್‌ನಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರತಿ ಶುಕ್ರವಾರ ಕಳಪೆ ಹಾಗೂ ಅತ್ಯುತ್ತಮ ಪ್ರಕ್ರಿಯೆ ಬಿಗ್‌ ಬಾಸ್‌ ಮನೆಯಲ್ಲಿ ನಡೆದಿರುತ್ತಿತ್ತು. ಆದರೆ ಈ ವಾರ ಶನಿವಾರ ನಡೆದಿದೆ. ಕೋವಿಡ್‌ ಸಮಯದಲ್ಲಿ ಕೆಲ ವಾರ ಸುದೀಪ್‌ ಬಿಗ್‌ ಬಾಸ್‌ಗೆ ಬಂದಿರಲಿಲ್ಲ. ಆ ಸಮಯದಲ್ಲಿ ವಿವಿಧ ಟಾಸ್ಕ್‌ಗಳನ್ನು ನೀಡಿ ಎಲಿಮಿನೇಷನ್‌ ಪ್ರಕ್ರಿಯೆ ನಡೆಸಲಾಗಿತ್ತು. ಈ ಬಾರಿ ಕೂಡ ಬಿಗ್‌ ಬಾಸ್‌ ಮನೆಯಲ್ಲಿ ಅದೇ ರೀತಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಈ ವಾರ ಎಲಿಮಿನೇಷನ್‌ ಕೂಡ ಇಲ್ಲ ಎಂಬ ಮಾತುಗಳು ಇದೆ.

ಇದನ್ನೂ ಓದಿ | Bigg Boss Kannada | ಇನ್ನೆರಡು ವಾರದಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ: ಪ್ರವೇಶಿಸಲಿದ್ದಾರಾ ಪ್ರವೀಣರು?

ಈ ವಾರ ಮಯೂರಿ, ಆರ್ಯವರ್ಧನ್‌ ಗುರೂಜಿ, ಪ್ರಶಾಂತ್‌ ಸಂಬರಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯ, ರೂಪೇಶ್‌ ಶೆಟ್ಟಿ, ಕಾವ್ಯಶ್ರೀ, ದಿವ್ಯಾ ಉರುಡುಗ ನಾಮಿನೇಷನ್‌ ಲಿಸ್ಟ್‌ನಲ್ಲಿದ್ದಾರೆ. ಈ ವಾರ ಯಾರು ಹೊರಗೆ ಹೋಗಲಿದ್ದಾರೆ ಅಥವಾ ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಕ್ಯಾನ್ಸಲ್ ಆಗಲಿದೆಯಾ ಎಂಬುದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಸಾನ್ಯ ಕುರಿತು ಮನೆಯಲ್ಲಿ ಗುಸು ಗುಸು: ಅರುಣ್‌ ಸಾಗರ್‌ ಹೇಳೋದೇನು?

Exit mobile version