Site icon Vistara News

Bigg Boss Kannada | ರೂಪೇಶ್ ರಾಜಣ್ಣ ನೀರಿನ ಪಾಠಕ್ಕೆ ಪ್ರಶಾಂತ್‌ ಸಂಬರಗಿ ಗರಮ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) ಐದನೇ ದಿನಕ್ಕೆ ಕಾಲಿಟ್ಟಿದೆ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಹಾಗೂ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣನ ಮಧ್ಯೆ ಜಗಳಗಳು ದಿನೇ ದಿನೆ ತಾರಕಕ್ಕೇರುತ್ತಿದೆ. ಅರುಣ್‌ ಸಾಗರ್‌ ಈ ಹಿಂದೆ ಇವರಿಬ್ಬರನ್ನೂ ಒಟ್ಟಿಗೆ ಕೂರಿಸಲೇಬಾರದು ಎಂದು ವ್ಯಂಗ್ಯವಾಡಿದ್ದರು. ಆದರೂ ಮತ್ತೆ ಮನೆಯಲ್ಲಿ ನೀರಿನ ವಿಚಾರಕ್ಕೆ ಇವರಿಬ್ಬರ ಮಧ್ಯೆ ವಾಗ್ವಾದ ನಡೆದಿದೆ.

ʻʻಲೋಟವನ್ನು ತೊಳೆಯುವಾಗ ನೀರು ಹಾಗೇ ಬಿಟ್ಟಿರುತ್ತಾರೆ. ಟ್ಯಾಪ್‌ ಬಂದ್‌ ಮಾಡಿ ಲೋಟ ತೊಳೆಯುವದಿಲ್ಲʼʼ ಎಂದು ರೂಪೇಶ್‌ ರಾಜಣ್ಣ ಡೈನಿಂಗ್‌ ಟೇಬಲ್‌ನಲ್ಲಿ ಉಳಿದ ಸ್ಪರ್ಧಿಗಳ ಮುಂದೆ ಹೇಳಿದ್ದಾರೆ. ಆಗ ಸ್ಪರ್ಧಿಗಳು ʻʻಯಾರು ನೀರನ್ನು ವೇಸ್ಟ್‌ ಮಾಡುತ್ತಾರೆ ಅವರಿಗೆ ನೀವು ಹೇಳಿʼʼ ಎಂದು ಹೇಳಿದ್ದಾರೆ. ಅದಕ್ಕೆ ರೂಪೇಶ್‌ ಪ್ರತಿಕ್ರಿಯೆ ನೀಡಿ ʻʻಅವರ ಹೆಸರನ್ನು ಹೇಳಿದರೆ ಬೇರೆಯವರ ಮುಂದೆ ಅವಮಾನ ಮಾಡಿದಂತಾಗುತ್ತದೆʼʼ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್‌ ಸಂಬರಗಿ ಕುರ್ಚಿ ಮೇಲೆ ನಿಂತು ʻʻನೀವು ನೀತಿ ಪಾಠವನ್ನು ಎಲ್ಲರಿಗೂ ಹೇಳಲಿಕ್ಕೆ ಬರಬೇಡಿ. ಎಲ್ಲರೂ ನೀತಿಪಾಠವನ್ನು ಕಲಿತೇ ಬಂದಿರುವುದು ʼʼಎಂದಿದ್ದಾರೆ. ಇದಕ್ಕೆ ರೂಪೇಶ್‌ ರಾಜಣ್ಣ ʻʻನೀವು ನೀತಿ ಪಾಠ ಕಲಿತಿಲ್ಲ ಅನಿಸುತ್ತದೆʼʼ ಎಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಕಾವ್ಯಶ್ರೀ ಜತೆ ರೂಪೇಶ್‌ ಇದ್ದರೆ ಸಾನ್ಯಾಗೆ ಉರಿ ಅಂತೆ: ಭವಿಷ್ಯ ನುಡಿದ ಆರ್ಯವರ್ಧನ್‌!

ವಾಗ್ವಾದ ಮುಂದುವರಿಸಿದ ಪ್ರಶಾಂತ್‌ ʻʻಮತ್ತಿನ್ನೇನು ಇಲ್ಲಿ ತಮಟೆ ಹೊಡಕೊಂಡು ನೀರು ಉಳಿಸಿ ಎನ್ನುತ್ತೀರಾʼʼ ಎಂದಿದ್ದಾರೆ. ಅದಕ್ಕೆ ರೂಪೇಶ್‌ ಕೂಗಾಡಿ ʻʻನಿಮಗೆಲ್ಲ ಸರ್‌, ಯಾರು ನೀರು ವೇಸ್ಟ್‌ ಮಾಡುತ್ತಾರೋ ಅವರಿಗೆ ಹೇಳಿದ್ದುʼʼ ಎಂದಿದ್ದಾರೆ. ಪ್ರಶಾಂತ್‌ ಸಂಬರಗಿ ಮಾತನಾಡಿ, ʻʻಇಲ್ಲಿ ಎಲ್ಲರೂ ಒಳ್ಳೆಯ ಮನುಷ್ಯರೇ ಇರುವುದು. ಯಾರೂ ರಾಕ್ಷಸರಿಲ್ಲ. ಸಮಾಜವನ್ನು ತಿದ್ದುವವರು ಮೊದಲು ತಾನು ತಿದ್ದಿಕೊಳ್ಳಬೇಕುʼʼ ಎಂದು ರೂಪೇಶ್‌ಗೆ ವ್ಯಂಗ್ಯವಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ಗಳ ಜತೆ ಸ್ಪರ್ಧಿಗಳ ಮಧ್ಯೆ ಕೂಗಾಟ, ಮನಸ್ತಾಪಗಳು ಹೆಚ್ಚಾಗುತ್ತಿವೆ. ಆದರೆ, ಪ್ರತಿ ದಿನ ಪ್ರಶಾಂತ್‌ ಸಂಬರಗಿ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ಜಗಳ ಮಾತ್ರ ಕಡಿಮೆ ಆಗುತ್ತಿಲ್ಲ.

ಇದನ್ನೂ ಓದಿ | Bigg Boss Kannada | ಮೆದುಳಿಗೇ ಕೈ ಹಾಕಿದ್ದರೂ ಬಿಟ್ಟುಕೊಡದ ಹೆಣ್ಮಕ್ಕಳು: ಪ್ರಶಾಂತ್‌- ವಿನೋದ್‌ ಶಾಕ್‌!

Exit mobile version