Site icon Vistara News

Bigg Boss kannada | ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ- ವಿನೋದ್‌ ಗೊಬ್ಬರಗಾಲ ಪಂದ್ಯ ಕಟ್ಟುವ ಪರಿಗೆ ಶಬ್ಬಾಸ್ ಗಿರಿ!

Bigg Boss kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9 (Bigg Boss kannada) ನಾಲ್ಕನೇ ದಿನಕ್ಕೆ ಸಮಸ್ಯೆ ಬಗೆ ಹರಿಸುವ ಟಾಸ್ಕ್‌ ಅನ್ನು ಮತ್ತು ನೆನಪಿನ ಶಕ್ತಿ ಟಾಸ್ಕ್‌ಗಳನ್ನು ಬಿಗ್‌ ಬಾಸ್‌ ನೀಡಿದ್ದರು. ಅದರಲ್ಲಿ ಗಂಟಿನ ನಂಟು ಟಾಸ್ಕ್‌ ಮತ್ತು ಸರಿ ತಪ್ಪು ಟಾಸ್ಕ್‌ ಅನ್ನು ನೀಡಿತ್ತು. ಇಂದಿನ ಟಾಸ್ಕ್‌ನಲ್ಲಿಯೂ ಪ್ರಶಾಂತ್‌ ಸಂಬರಗಿ-ವಿನೋದ್‌ ಗೊಬ್ಬರಗಾಲ ಟಾಸ್ಕ್‌ನಲ್ಲಿ ಆಡುವ ಪರಿಗೆ ಸ್ಪರ್ಧಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸರಿ ತಪ್ಪು ಟಾಸ್ಕ್‌ನಲ್ಲಿ ಪ್ರಶಾಂತ್‌ ಜೋಡಿ ಪಂದ್ಯ ಕಟ್ಟಿದ್ದರೆ, ರೂಪೇಶ್‌ ಶೆಟ್ಟಿ ಜೋಡಿ ಮತ್ತು ಮಯೂರಿ ಜೋಡಿ ಫಿಲ್ಡ್‌ಗೆ ಇಳಿದಿತ್ತು. ಆದರೆ ಈ ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ ಗೆದ್ದು ಒಂದು ಅಂಕವನ್ನು ಪಡೆದರು. ಅದರೇ ರೀತಿ ಗಂಟಿನ ನಂಟು ಟಾಸ್ಕ್‌ನಲ್ಲಿ ಮೊದಲನೇ ರೌಂಡ್‌ನಲ್ಲಿ ಅನುಪಮಾ ಜೋಡಿ ಸೋತಿದ್ದರೆ ಅರುಣ್‌ ಸಾಗರ್‌ ಜೋಡಿ ಗೆದ್ದಿತು. ಆದರೆ ಪ್ರಶಾಂತ್‌ ಸಂಬರಗಿ ಅಂಕವನ್ನು ಕಳೆದುಕೊಂಡಿದ್ದರೆ. ಅರುಣ್‌ ಸಾಗರ್‌ ಜೋಡಿ ಒಂದು ಅಂಕವನ್ನು ಪಡೆದುಕೊಂಡರು. ಎರಡನೇ ಬಾರಿ ಇದೇ ಟಾಸ್ಕ್‌ನಲ್ಲಿ ಅನುಪಮಾ ಜೋಡಿ ದಿವ್ಯಾ ದಾಸ್‌ ವಿರುದ್ಧ ಗೆದ್ದಿದ್ದಾರೆ. ಹಾಗೇ ಪ್ರಶಾಂತ್‌ ಸಂಬರಗಿ ಜೋಡಿ ಕೂಡ ಒಂದು ಅಂಕವನ್ನು ಪಡೆದಿದ್ದಾರೆ.

ಇದನ್ನೂ ಓದಿ | Bigg Boss Kannada | ಕಾವ್ಯಶ್ರೀ ಜತೆ ರೂಪೇಶ್‌ ಇದ್ದರೆ ಸಾನ್ಯಾಗೆ ಉರಿ ಅಂತೆ: ಭವಿಷ್ಯ ನುಡಿದ ಆರ್ಯವರ್ಧನ್‌!

ಇವತ್ತಿನ ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ವಿಚಾರಕ್ಕೆ ಬಂದರೆ ಅನುಪಮಾ ತಂಡ ಮತ್ತು ಪ್ರಶಾಂತ್‌ ಸಂಬರಗಿ ಅವರ ಲೆಕ್ಕಾಚಾರ ವಿನ್‌ ಆಗಿತ್ತು. ಸ್ಪರ್ಧಿಗಳು ಕೂಡ ಪ್ರಶಾಂತ್‌ ಸಂಬರಗಿ ಜೋಡಿ ಪಂದ್ಯ ಕಟ್ಟುವ ಜಾಣ್ಮೆಗೆ ಶಬ್ಬಾಸ್‌ ಎನ್ನುತ್ತಿದ್ದಾರೆ. ಸತತ ನಾಲ್ಕನೇ ದಿನವೂ ಉತ್ತಮ ಪ್ರದರ್ಶನ ತೋರಿದ್ದಾರೆ ಪ್ರಶಾಂತ್‌ ಟೀಮ್‌.

ಇದನ್ನೂ ಓದಿ | Bigg Boss Kannada | ಸ್ಪರ್ಧಿಗಳ ಜತೆ ರೂಪೇಶ್‌ ರಾಜಣ್ಣ ವಿನಾಕಾರಣ ಜಗಳ

Exit mobile version