Site icon Vistara News

Bigg Boss Kannada | ಮೊದಲ ದಿನವೇ ಬಿಸಿಬಿಸಿ ವಾತಾವರಣ: ಹಳೇ ಚಾಳಿ ಮುಂದುವರಿಸಿದ ಪ್ರಶಾಂತ್‌ ಸಂಬರಗಿ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಸೀಸನ್‌ 9 ಶನಿವಾರದಿಂದ ಶುರುವಾಗಿದೆ. ಮೊದಲ ದಿನವೇ ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ಕಿರಿಕ್‌ ಶುರು ಮಾಡಿದ್ದಾರೆ. ಈ ಹಿಂದಿನ ಬಿಗ್‌ ಬಾಸ್‌ ಸೀಸನ್‌ನಲ್ಲಿ ಕೂಡ ಅನೇಕರ ಜತೆ ಜಗಳ ಆಡಿಕೊಂಡು ತಮ್ಮ ವರಸೆಯನ್ನು ಪ್ರದರ್ಶಿಸಿದ್ದರು. ಇದೀಗ ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ. ಆರ್ಯವರ್ಧನ್‌ ಗುರೂಜಿ ವಿಚಾರದಲ್ಲಿ ಪ್ರಶಾಂತ್‌ ಸಂಬರಗಿ ಆಡಿದ ಮಾತುಗಳಿಂದ ಬಿಗ್‌ ಬಾಸ್ ಸ್ಪರ್ಧಿಗಳಿಗೆ ಸಖತ್‌ ಬೇಸರವುಟಾಗಿದೆ.

ಮೊದಲ ದಿನ ಏನೆಲ್ಲ ನಡೆಯಿತು ಎಂದು ಸಣ್ಣ ವಿಡಿಯೊ ತುಣುಕನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ. ಎಲ್ಲಾ ಸ್ಪರ್ಧಿಗಳು ಒಟ್ಟಾಗಿ ಕೂತು ಮಾತನಾಡಿಕೊಳ್ಳುತ್ತಿರುವಾಗ ʻʻನಾನು 10‌ ಲಕ್ಷ ಜನರಿಗೆ ಜ್ಯೋತಿಷ್ಯ ಹೇಳಿರಬಹುದುʼʼ ಎಂದು ಗುರೂಜಿ ಹೇಳಿದ್ದಾರೆ. ಅದಕ್ಕೆ ಪ್ರಶಾಂತ್‌ ಸಂಬರಗಿ ವಿರೋಧ ವ್ಯಕ್ತಪಡಿಸಿ ʻʻ10 ಲಕ್ಷ ಎಂದು ಏನೇನೋ ಹೇಳಬೇಡಿʼʼ ಎಂದಿದ್ದಾರೆ. ಅಲ್ಲಿಂದ ಇಬ್ಬರ ಮಧ್ಯೆ ಜಗಳ ಶುರುವಾಗಿದೆ.

ʻʻಗುರೂಜಿಯ ನಿಜವಾದ ಹೆಸರು ಆರ್ಯವರ್ಧನ್​ ಅಲ್ಲ. ನಿಜವಾದ ಹೆಸರು ಹೇಳಲಾ?’ ಎಂದು ಪ್ರಶಾಂತ್​ ಸಂಬರಗಿ ಸವಾಲು ಹಾಕಿದ್ದಾರೆ. ಈ ರೀತಿ ಪ್ರಶಾಂತ್‌ ಸಂಬರಗಿ ಮಾತನಾಡಿರುವುದು ಕೇಳಿ ಅವರ ವರ್ತನೆಯನ್ನು ಸ್ಪರ್ಧಿಗಳು ಖಂಡಿಸಿದ್ದಾರೆ. ಪ್ರಶಾಂತ್‌ ಸಂಬರಗಿ ವರ್ತನೆ ಬಗ್ಗೆ ನಟ ದರ್ಶ್‌ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ‘ʻಬಿಗ್​ ಬಾಸ್​ನಲ್ಲಿ ಇರುವಾಗ ಚೆನ್ನಾಗಿದ್ದು, ನಂತರ ಹೊರಬಂದ ಬಳಿಕ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರುʼ’ ಎಂದು ಪ್ರಶಾಂತ್‌ ಸಂಬರಗಿ ಕುರಿತು ಹೇಳಿದ್ದಾರೆ. ಇದಕ್ಕೆ ದಿವ್ಯಾ ಉರುಡುಗ ʻʻಹೌದು ಹಾಗೆ ಮಾಡುತ್ತಿರುತ್ತಾರೆʼʼ ಎಂದಿದ್ದಾರೆ. ಈ ಬಗ್ಗೆ ಪ್ರಶಾಂತ್‌ ಸಂಬರಗಿ ಇನ್ನೂ ಬದಲಾಗಿಲ್ಲ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 9ಕ್ಕೆ ಒಟ್ಟು 18 ಸ್ಪರ್ಧಿಗಳು ಮನೆಯನ್ನು ಪ್ರವೇಶಿಸಿದ್ದಾರೆ. ಅದರಲ್ಲಿ 9 ಜನರು ಹೊಸಬರು ಹಾಗೂ ಬಿಗ್‌ ಬಾಸ್‌ ಒಟಿಟಿಯಿಂದ ನಾಲ್ಕು ಜನರು, ಹಳೆಯ ಸೀಸನ್‌ಗಳಿಂದ ಐವರು ಮನೆಯನ್ನು ಪ್ರವೇಶಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಸೀಸನ್‌-9 : 18 ಸ್ಪರ್ಧಿಗಳ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ!

Exit mobile version