Site icon Vistara News

Bigg Boss Kannada | ಕಪ್‌ ಇಲ್ಲ ಅಂದ್ರೂ ಎಷ್ಟೋ ಹೃದಯ ಗೆದ್ದಿದ್ಯಾ ರಾಕಿ ಎಂದ ಪ್ರೇಕ್ಷಕರು!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada ) ರೂಪೇಶ್‌ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಒಟಿಟಿ ಸೀಸನ್‌ನಲ್ಲಿಯೂ ವಿನ್ನರ್‌ ಆಗಿದ್ದ ರೂಪೇಶ್‌ ಶೆಟ್ಟಿ, ಇದೀಗ ಟಿವಿ ಸೀಸನ್‌ನಲ್ಲಿಯೂ ಬಿಗ್‌ ಬಾಸ್‌ ಕಿರೀಟ್‌ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಇದೀಗ ʻರಾಕೇಶ್‌ ಅಡಿಗ ವಿನ್‌ ಆಗಬೇಕಿತ್ತುʼ ಎಂದು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾ ಮೂಲಕ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಬಿಗ್​ ಬಾಸ್​ 9ನೇ ಸೀಸನ್​ನ ವಿನ್ನರ್​ ರೂಪೇಶ್‌ ಶೆಟ್ಟಿ ಒಟ್ಟು 60 ಲಕ್ಷ ರೂ. ನಗದು ಬಹುಮಾನ ಮತ್ತು ಒಂದು ಆಕರ್ಷಕ ಟ್ರೋಫಿ ಅವರ ಕೈ ಸೇರಿದೆ. ನಟ ರಾಕೇಶ್​ ಅಡಿಗ ರನ್ನರ್​ ಅಪ್​ ಆಗಿದ್ದಾರೆ. ಒಂದು ವರ್ಗದ ಪ್ರೇಕ್ಷಕರಿಗೆ ಇದು ಬೇಸರ ಮೂಡಿಸಿದೆ. ‘ರಾಕೇಶ್​ ಅಡಿಗ ಅವರೇ ಬಿಗ್​ ಬಾಸ್​ ವಿನ್ನರ್​ ಆಗಬೇಕಿತ್ತು. ಕಪ್‌ ಇಲ್ಲ ಅಂದ್ರೂ ಎಷ್ಟೋ ಹೃದಯ ಗೆದ್ದಿದ್ಯಾ ರಾಕಿʼʼ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ದೀಪಿಕಾ ದಾಸ್‌ ಔಟ್‌: ಮೂರನೇ ರನ್ನರ್ ಅಪ್!

ರಾಕೇಶ್​ ಅಡಿಗ ಮತ್ತು ರೂಪೇಶ್​ ಶೆಟ್ಟಿ ಅವರು ಸಮನಾಗಿ ಫೈಟ್​ ನೀಡುತ್ತಾ ಬಂದಿದ್ದರು. ಇಬ್ಬರೂ ಕೂಡ ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ನಿಂದ ಟಿವಿ ಸೀಸನ್​ ತನಕ ಬಂದಿದ್ದಾರೆ. 140 ದಿನಗಳ ಜರ್ನಿಯನ್ನು ಪೂರೈಸಿದ್ದಾರೆ. ಗೆದ್ದಿರುವ ರೂಪೇಶ್​ ಶೆಟ್ಟಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವರ ಸಿನಿಮಾ ಜರ್ನಿಗೆ ಶುಭವಾಗಲಿ ಎಂದು ಹಾರೈಸಲಾಗುತ್ತಿದೆ. ʻಯಾರೇ ಕೂಗಾಡಲಿʼ, ʻನಂದ ಗೋಕುಲʼ ʻಮಂದಹಾಸʼ, ʻʻಪ್ರೀತಿಯಿಂದ ʼಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಕೇಶ್‌ ಅಡಿಗ.

ಇದನ್ನೂ ಓದಿ | Bigg Boss Kannada | ಕರಾವಳಿ ಕುವರ ರೂಪೇಶ್‌ ಶೆಟ್ಟಿ ಮುಡಿಗೆ ಬಿಗ್‌ಬಾಸ್‌ ಕಿರೀಟ

Exit mobile version