Site icon Vistara News

Bigg Boss Kannada | ಸಾನ್ಯ ಮಾಡ್ತಿರೋದೆಲ್ಲ ಪ್ರ್ಯಾಂಕ್‌ ಅಂದ್ರೂ ನಂಬ್ತಾ ಇಲ್ಲ ರೂಪೇಶ್ ರಾಜಣ್ಣ!

Bigg Boss Kannada

ಬೆಂಗಳೂರು: ಈ ವಾರ ಬಿಗ್‌ ಬಾಸ್‌ನಲ್ಲಿ (Bigg Boss Kannada) ರೂಪೇಶ್‌ ರಾಜಣ್ಣ ಬಕ್ರಾ ಆಗುತ್ತಲೇ ಇದ್ದಾರೆ. ಪ್ರಶಾಂತ್‌ ಸಂಬರಗಿ ಮತ್ತು ಸಾನ್ಯ ಅಯ್ಯರ್‌ ಸೇರಿಕೊಂಡು ಕುರಿ ಮಾಡುತ್ತಿದ್ದಾರೆ. ಈ ಬಗ್ಗೆ ರೂಪೇಶ್‌ ರಾಜಣ್ಣ ಅವರಿಗೆ ದಿವ್ಯಾ ಉರುಡುಗ ಸತ್ಯಾಂಶ ಹೇಳಿದರೂ ರೂಪೇಶ್‌ ರಾಜಣ್ಣ ನಂಬುತ್ತಿಲ್ಲ. ಮನೆಯಲ್ಲಿ ರೂಪೇಶ್ ರಾಜಣ್ಣ ನಡೆದುಕೊಳ್ಳುತ್ತಿರುವ ರೀತಿಗೆ ಸಾನ್ಯ ಐಯ್ಯರ್ ಹಾಗೂ ಪ್ರಶಾಂತ್‌ ಬಿದ್ದು ಬಿದ್ದು ನಗುತ್ತಿದ್ದಾರೆ.

ರೂಪೇಶ್‌ ರಾಜಣ್ಣ ಅವರಿಗೆ ಸಾನ್ಯ ಇವತ್ತೂ ಕೂಡ ಬೆಂಕಿಗೆ ಸಂಬಂಧಪಟ್ಟಿದ್ದ, ಕೆಂಪು ಪದಾರ್ಥದ ಬಗ್ಗೆ ಕೆದಕಿ ಪ್ರ್ಯಾಂಕ್‌ ಮಾಡಲು ಮುಂದಾಗಿದ್ದಾರೆ. ಮತ್ತೆ ಬಕ್ರಾ ಆದ ರಾಜಣ್ಣ ಅವರು ಸಾನ್ಯ ಅವರಿಗೆ ʻನಿಮ್ಮ ಶಕ್ತಿ ಮೇಲೆ ನಂಬಿಕೆ ಇದೆʼ ಎಂದಿದ್ದಾರೆ.

ದಿವ್ಯಾ ಉರುಡುಗ ಅವರು ರೂಪೇಶ್‌ ರಾಜಣ್ಣ ಅವರಿಗೆ ಪ್ರ್ಯಾಂಕ್‌ ಬಗ್ಗೆ ಮಾತನಾಡಿದ್ದು ʻʻನಿಮಗೆ ಪ್ರ್ಯಾಂಕ್‌ ಮಾಡುತ್ತಿರುವುದು ಗೊತ್ತಿಲ್ಲ ಎನ್ನುವ ತರಹವೇ ಇರಿ. ನಾವೇ ಅವರಿಗೆ ಪ್ರ್ಯಾಂಕ್‌ ಮಾಡೋಣ. ಇಲ್ಲಿ ಮಾತನಾಡೋದು ಬೇಡ. ನೀವು ಅವರು ನಿಮಗೆ ಏನು ಪ್ರ್ಯಾಂಕ್‌ ಮಾಡುತ್ತರಲ್ಲ. ಅದು ನನಗೆ ಅವರಿಗೆ ಗೊತ್ತಿಲ್ಲದಾಗೆ ಹೇಳಿ. ಆಗ ನಾವಿಬ್ಬರೂ ಸೇರಿ ಅವರಿಗೇ ಪ್ರ್ಯಾಂಕ್‌ ಮಾಡೋಣ. ಅವರಿಗೆ ಟೆನ್ಷನ್‌ ಕೊಡೋಣ. ಆದರೆ ನೀವು ಅವರ ಜತೆ ಹೇಗಿದ್ದರೋ ಹಾಗೇ ಇರಿʼʼ ಎಂದಿದ್ದಾರೆ.

ಇದನ್ನೂ ಓದಿ | Bigg Boss Kannada | ʻನೀವು ಗುದ್ದಾಡೋದಾದ್ರೆ ಆನೆ ಜತೆ ಗುದ್ದಾಡಿʼ: ರೂಪೇಶ್‌ ರಾಜಣ್ಣ-ದೀಪಿಕಾ ವಾರ್‌!

ರಾಜಣ್ಣ ಈ ಬಗ್ಗೆ ʻʻಅದು ಅವರು ಮಾಡುತ್ತಿರುವುದು ಪ್ರ್ಯಾಂಕ್‌ ಅಲ್ಲʼʼ ಎಂದಿದ್ದಾರೆ. ದಿವ್ಯಾ ಈ ಬಗ್ಗೆ ʻʻಅವರು ಮಾಡುತ್ತಿರುವುದು ಪ್ರ್ಯಾಂಕ್‌ ನಿಮಗೆ ಅರ್ಥ ಆಗುತ್ತಿಲ್ಲ. ಅವರಿಬ್ಬರು ಮಾತನಾಡುತ್ತಿರುವುದು ನಾನು ನೋಡಿದ್ದೆʼʼ ಎಂದಿದ್ದಾರೆ. ರೂಪೇಶ್‌ ರಾಜಣ್ಣ ತನಗಾದ ಬಗ್ಗೆ ವಿವರಿಸಿದ್ದಾರೆ. ದಿವ್ಯಾ ಮಾತನಾಡಿ ʻʻಅವರು ಒಂದು ಟ್ರಿಕ್‌ ಮಾಡಿದ್ದಾರೆ. ನಿಮ್ಮಂತ ದೊಡ್ಡ ಇಂಟರ್‌ನ್ಯಾಷನಲ್ ಬೊದ್ದು ಯಾರೂ ಇಲ್ಲʼʼ ಎಂದಿದ್ದಾರೆ.

ರೂಪೇಶ್‌ ರಾಜಣ್ಣ ಜತೆ ಜಗಳ ಆಡಿದ್ದಕ್ಕೆ ಅವರ ವಾಟರ್‌ ಬಾಟಲ್‌ ಅನ್ನು ಪ್ರಶಾಂತ್‌ ಸಂಬರಗಿ ಈ ಹಿಂದೆ ಬಚ್ಚಿಟ್ಟಿದ್ದರು. ಇದನ್ನು ಸಾನ್ಯರ ಮುಂದೆ ಪ್ರಶಾಂತ್‌ ಸಂಬರಗಿ ಹೇಳಿಕೊಂಡಿದ್ದರು. ಇದಕ್ಕೆ ಸಾನ್ಯ ಬಿದ್ದು ಬಿದ್ದು ನಕ್ಕಿದ್ದರು. ಬಾಟಲನ್ನು ದಿವ್ಯಾ ಉರುಡುಗ ಬೆಡ್ ಪಕ್ಕ ಅಡಗಿಸಿ ಇಟ್ಟಿದ್ದರು ಪ್ರಶಾಂತ್. ಸಾನ್ಯ ಐಯ್ಯರ್ ಅವರ ಬಳಿ ಬಾಟಲ್ ಎಲ್ಲಿದೆ ಎಂಬುದನ್ನು ಪ್ರಶಾಂತ್​ ಹೇಳಿದ್ದರು. ನಂತರ ಸಾನ್ಯಾ ಅವರು ಬಂದು ರೂಪೇಶ್ ರಾಜಣ್ಣ ಬಳಿ ಬಾಟಲ್ ಇರುವ ಜಾಗದ ಬಗ್ಗೆ ಮಾಹಿತಿ ನೀಡಿದರು. ಸಾನ್ಯ ಹೇಳಿದ ಜಾಗಕ್ಕೆ ಹೋಗಿ ನೋಡಿದಾಗ ಬಾಟಲ್ ಸಿಕ್ಕಿತು. ಆ ಒಂದು ಕ್ಷಣ ರೂಪೇಶ್ ರಾಜಣ್ಣ ನಡುಗಿ ಹೋಗಿದ್ದರು.

ನಂತರ ಬಾಳೆ ಹಣ್ಣಿನ ವಿಚಾರ ಬಂತು. ದೇವರ ಮೂರ್ತಿ ಪಕ್ಕದಲ್ಲಿ ಒಂದು ಬಾಳೆ ಹಣ್ಣಿದೆ. ಆ ಬಾಳೆ ಹಣ್ಣು ಒಳಗಿನಿಂದ ಐದು ಕಡೆಗಳಲ್ಲಿ ಕಟ್‌ ಆಗಿರುತ್ತದೆ. ನಿಮಗಾಗದ ಐದು ಜನರಿಗೆ ನೀಡಿ, ಅವರು ಸೋಲುತ್ತಾರೆ ಎಂದು ಸಾನ್ಯ ಅವರು ರೂಪೇಶ್ ಅವರಿಗೆ ಹೇಳಿದ್ದರು. ಅದರಂತೆ ರೂಪೇಶ್ ಅವರು ದೇವರ ಮೂರ್ತಿ ಬಳಿ ಇರುವ ಬಾಳೆ ಹಣ್ಣು ಪರೀಕ್ಷಿಸುತ್ತಾರೆ. ಸಾನ್ಯ ಹೇಳಿದೆ ಹಾಗೆಯೇ, ಬಾಳೆ ಹಣ್ಣು ಒಳಗಿನಿಂದ ಐದು ಕಡೆ ಕಟ್ ಆಗಿರುತ್ತದೆ. ಇದನ್ನು ಕಂಡು ರೂಪೇಶ್ ಆವಾಕ್ಕಾಗಿದ್ದರು.

ಇದನ್ನೂ ಓದಿ | Bigg Boss Kannada | ಒಟಿಟಿ ಸೀಸನ್‍‍ನ ಸೂಪರ್‌ ಹಿಟ್‌ ಟಾಸ್ಕ್‌ ನೀಡಿದ ಬಿಗ್‌ ಬಾಸ್‌: ಗಮ್ಮತ್ತು ಮಾಡಿದ್ರು ಸ್ಪರ್ಧಿಗಳು!

Exit mobile version