Site icon Vistara News

Bigg Boss Kannada | ಬಿಗ್‌ ಬಾಸ್‌ ಒಟಿಟಿಯಲ್ಲಿ ಮೋಡಿ ಮಾಡಿದ್ದ ಸಾನ್ಯ-ರೂಪೇಶ್‌ ಎಂಟ್ರಿ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 9ಗೆ (Bigg Boss Kannada) ಒಂಬತ್ತನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿ ಟಾಪ್‌ 4ರ ಸಾನ್ಯ ಅಯ್ಯರ್‌ ಎಂಟ್ರಿ ಕೊಟ್ಟಿದ್ದಾರೆ. ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟ ದಿನದಿಂದಲೂ ಸಾನ್ಯ ಅಯ್ಯರ್ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗೇ ಒಟಿಟಿ ಸೀಸನ್‌ ವಿನ್ನರ್‌ ರೂಪೇಶ್‌ ಶೆಟ್ಟಿ 10ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ.

ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಜಶ್ವಂತ್ ಬೋಪಣ್ಣ ಹಾಗೂ ನಂದಿನಿ ಜೊತೆಗೆ ಸಾನ್ಯ ಅಯ್ಯರ್ ಆತ್ಮೀಯವಾಗಿದ್ದರು. ರೂಪೇಶ್ ಶೆಟ್ಟಿ ಜೊತೆಗೆ ಸಾನ್ಯ ಅಯ್ಯರ್ ಸ್ನೇಹದಿಂದ ‘ಬಿಗ್ ಬಾಸ್’ ಮನೆಯೊಳಗೆ ಗುಸುಗುಸು ಆರಂಭವಾಯ್ತು. ಆನಂತರ ಜಶ್ವಂತ್ ಬೋಪಣ್ಣ ಜೊತೆಗೆ ಸಾನ್ಯ ಅಯ್ಯರ್ ಆತ್ಮೀಯವಾಗಿದ್ದದ್ದು ನಂದಿನಿ ಬೇಸರಕ್ಕೆ ಕಾರಣವಾಗಿತ್ತು. ಸಾನ್ಯ ೫ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಒಟಿಟಿ ಮನೆ ಪ್ರವೇಶಿಸಿದ್ದರು. ಸಾನ್ಯ ಅಯ್ಯರ್‌ ಜ್ಯೂನಿಯರ್‌ ಪುಟ್ಟಗೌರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ʼಎಂಟನೇ ತರಗತಿವರೆಗೆʼ ಚಿತ್ರದಲ್ಲಿ ಸಾನ್ಯ ಅಯ್ಯರ್‌ ನಟಿಸಿದ್ದರು. ಬಳಿಕ ನಟನೆಯಲ್ಲಿ ಸ್ವಲ್ಪ ಗ್ಯಾಪ್‌ ಪಡೆದುಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಏಳನೇ ಸ್ಪರ್ಧಿಯಾಗಿ ಪ್ರಶಾಂತ್‌ ಸಂಬರಗಿ ಪ್ರವೇಶ: ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಎಂಟ್ರಿ!

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ ಪಡೆಯುತ್ತಿರುವ ಇವರು, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಿರೂಪಣೆಯ ಸೂಪರ್‌ ಮಿನಿಟ್‌ ಶೋನಲ್ಲಿಯೂ ಭಾಗಿಯಾಗಿದ್ದರು. ಆರಾರೋ..ನೀಯಾರೋ ಆಲ್ಬಂ ಸಾಂಗ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಗುಲಾಬ್‌ ಜಾಮೂನ್‌ ಎಂಬ ಮೈಕ್ರೋ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ತಾಯಿ ದೀಪಾ ಅಯ್ಯರ್‌ ಕೂಡ ನಟಿಯಾಗಿದ್ದಾರೆ. ‘ಡ್ಯಾನ್ಸಿಂಗ್ ಸ್ಟಾರ್ಸ್‌’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಆಧ್ಯಾತ್ಮಿಕ ನೆಲೆಯನ್ನು ತುಂಬಾ ಇಷ್ಟ ಪಡುತ್ತಾರಂತೆ ನಟಿ ಸಾನ್ಯ.

ಹತ್ತನೇ ಸ್ಪರ್ಧಿಯಾಗಿ ರೂಪೇಶ್‌ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟ, ನಿರ್ದೇಶಕ ಮತ್ತು ಖಾಸಗಿ ಎಫ್‌ಎಂ ವಾಹಿನಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ರೂಪೇಶ್‌ ಶೆಟ್ಟಿ ಬಿಗ್‌ ಬಾಸ್‌ ಮನೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಮೂಲತಃ ಕಾಸರಗೋಡಿನವರಾದ ರೂಪೇಶ್‌ ಮಂಗಳೂರಿನವರು. ಮಂಗಳೂರಿನ ನಮ್ಮ ಟಿವಿ ಎಂಬ ಚಾನೆಲ್‌ನಿಂದ ನಿರೂಪಕರಾಗಿದ್ದರು. ಬಳಿಕ ತುಳು ಚಿತ್ರರಂಗಕ್ಕೆ ಪ್ರವೇಶ ಕೊಟ್ಟಿದ್ದರು. 2015ರಲ್ಲಿ ಡೇಂಜರ್‌ ಜೋನ್‌ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಹೆಸರು ಪಡೆದರು. ನಂತರ ಐಸ್‌ಕ್ರೀಮ್‌, ಪಿಶಾಚಿ-2, ನಿಶ್ಯಬ್ದ ಮತ್ತು ಸ್ಮೈಲ್‌ ಎಂಬ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. 2018ರಲ್ಲಿ ನಾಯಕನಾಗಿ ನಟಿಸಿದ ತುಳುವಿನ ಅಮ್ಮೆರ್‌ ಪೊಲೀಸ್‌ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಪಡೆಯಿತು. 2019ರಲ್ಲಿ ನಿರ್ದೇಶನಕ್ಕೆ ಇಳಿದು ಗಿರ್ಗಿಟ್‌ ತುಳು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಇತ್ತೀಚೆಗಷ್ಟೇ ಗೋವಿಂದ ಗೋವಿಂದ ಎಂಬ ಚಿತ್ರದಲ್ಲಿ ನಟಿಸಿದ್ದರು. ಒಟಿಟಿ ಸೀಸನ್‌ನಲ್ಲಿ ರೂಪೇಶ್‌ ಶೆಟ್ಟಿ ಜನಮೆಚ್ಚಿದ ನಾಯಕನಾಗಿ ಹೊರಹೊಮ್ಮಿದ್ದು 5 ಲಕ್ಷ ರೂ. ಗೆದ್ದಿದ್ದಾರೆ.

ಇದನ್ನೂ ಓದಿ | Bigg Boss Kannada | ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ, ಆರನೇ ಸ್ಪರ್ಧಿಯಾಗಿ ದರ್ಶ್‌ ಚಂದ್ರಪ್ಪ ಎಂಟ್ರಿ!

Exit mobile version