Site icon Vistara News

Bigg Boss Kannada | ಸಾನ್ಯ ನೇರವಾಗಿ ನಾಮಿನೇಟ್‌ ಮಾಡಿದ್ದಕ್ಕೆ ಆರ್ಯವರ್ಧನ್‌ ಫುಲ್‌ ಗರಂ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಐದನೇ ವಾರ ಆರ್ಯವರ್ಧನ್‌ ಗುರೂಜಿ ನೇರವಾಗಿ ನಾಮಿನೇಟ್‌ ಆಗಿದ್ದಾರೆ. ಉಳಿದ ಸ್ಪರ್ಧಿಗಳು ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಆರ್ಯವರ್ಧನ್‌ ಗುರೂಜಿ ಬಿಟ್ಟು ಉಳಿದ ಸದಸ್ಯರನ್ನು ನಾಮಿನೇಟ್‌ ಮಾಡಿದ್ದರು. ಕ್ಯಾಪ್ಟನ್‌ ಸಾನ್ಯ ಕೊನೆಯಲ್ಲಿ ಆರ್ಯವರ್ಧನ್‌ ಅವರನ್ನು ನಾಮಿನೇಟ್‌ ಮಾಡಿದ್ದಾರೆ. ಇದರಿಂದಾಗಿ ಆರ್ಯವರ್ಧನ್‌ ಗುರೂಜಿ ಅಸಮಾಧಾನ ಹೊರಹಾಕಿದ್ದಾರೆ.

ಆರ್ಯವರ್ಧನ್‌ ಗುರೂಜಿ ನಾಮಿನೇಷನ್‌ ಆದ ಬಳಿಕ ʻʻನನಗೆ ತುಂಬಾ ದುಃಖವಾಗುತ್ತಿದೆ. ಸೇಡಿಗೆ ಸೇಡಾಗಿ, ಸವಾಲಾಗಿ ಇಲ್ಲಿ ಬದುಕಬೇಕು. ನಾನೂ ಕೂಡ ಗೆಲ್ಲಲು ಬಂದಿದ್ದೇನೆ. ಕರ್ನಾಟಕದ ಜನತೆ ನನಗೆ ವೋಟ್‌ ಹಾಕಬೇಕು. ನನ್ನ ಕಣ್ಣ ಮುಂದೆ ನಾನು ನಾಮಿನೇಟ್‌ ಆದೆ. ನಾನು ಗೆಲ್ಲಲೇಬೇಕುʼʼಎಂದು ಎಲ್ಲ ಸದಸ್ಯರ ಮುಂದೆ ಶಪಥ ಮಾಡಿದರು.

ಪ್ರಶಾಂತ್‌ ಸಂಬರಿಗೆ ಹಾಗೂ ನೇಹಾ ಮುಂದೆ ಆರ್ಯವರ್ಧನ್‌ ಮನೆಯಲ್ಲಿ ಉಳಿದುಕೊಳ್ಳುವುದರ ಬಗ್ಗೆ ತಮಗಿರುವ ಆಸೆ ಬಗ್ಗೆ ವ್ಯಕ್ತಪಡಿಸಿದರು. ʻʻಇನ್ನೂ ಹತ್ತು ವಾರ ಬಿಗ್‌ ಬಾಸ್‌ ನನಗೆ ಮನೆ. ನಾನು ಉಳಿದುಕೊಳುತ್ತೇನೆ. ಮಗಳು ಆಸೆ ಪಟ್ಟಂತೆ ಇರುತ್ತೇನೆʼʼ ಎಂದರು.

ಆರ್ಯವರ್ಧನ್‌, ರೂಪೇಶ್‌, ಸಾನ್ಯ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ಆರ್ಯವರ್ಧನ್‌ ಬೇಸರ ವ್ಯಕ್ತ ಪಡಿಸಿದರು. ಸಾನ್ಯ ಅವರು ಆರ್ಯವರ್ಧನ್‌ಗೆ ಮಾತನಾಡಿ ʻʻನಾನು ಮಾತ್ರ ನಾಮಿನೇಟ್‌ ಮಾಡಿದ್ದೇನೆ ಎಂಬ ಕಾರಣಕ್ಕೆ , ನೀವು ಏನೂ ತಪ್ಪೇ ಮಾಡಿಲ್ಲ ಎಂದು ಅರ್ಥನಾʼʼಎಂದು ಕೇಳಿದ್ದಾರೆ. ಆರ್ಯವರ್ಧನ್‌ ಪ್ರತಿಕ್ರಿಯೆ ನೀಡಿ ʻʻತಪ್ಪು ಇಲ್ಲ ಅಂತಲ್ಲ. ಇರತ್ತೆ. ತಪ್ಪು ಎಲ್ಲ ಸಿಗುತ್ತೆ. ಆದರೆ ಬೇಜಾರಗತ್ತೆʼʼಎಂದು ಹೇಳಿದ್ದಾರೆ.

ಈ ಹಿಂದೆ ಆರ್ಯವರ್ಧನ್‌ ಗುರೂಜಿ ಅವರು ರೂಪೇಶ್‌ ಶೆಟ್ಟಿ ಮುಂದೆ ಬಿಗ್‌ ಬಾಸ್‌ ಮನೆಯಲ್ಲಿ ಉಳಿಯಲು ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಲಕ್ಷುರಿ ಬಜೆಟ್‍ನಲ್ಲಿ ಲಕ್ಷುರಿ ಜಗಳ: ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ!

Exit mobile version