Site icon Vistara News

Bigg Boss Kannada | ಸನ್ನೆ ಭಾಷೆ ಮಾತಾಡ್ತಾರೆ ರೂಪೇಶ್‌-ಸಾನ್ಯ; ದರ್ಶ್‌ಗೆ ಆರ್ಯವರ್ಧನ್‌ ಫುಲ್ ಟ್ಯೂಷನ್!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಮೊದಲ ವೀಕೆಂಡ್‌ ಪಂಚಾಯಿತಿಯಲ್ಲಿ ಅನೇಕ ವಿಚಾರಗಳ ಬಗ್ಗೆ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. ಅರುಣ್‌ ಸಾಗರ್‌ ಮೊದಲಿಗೆ ಮಯೂರಿ ತರಹ ಮಿಮಿಕ್ರಿ ಮಾಡಿ ತೋರಿಸಿದರು. ಆನಂತರ ರೂಪೇಶ್‌ ಶೆಟ್ಟಿ ಮತ್ತು ಸಾನ್ಯ ನಡುವಿನ ಸಂಭಾಷಣೆಯ ಮಿಮಿಕ್ರಿಯನ್ನೂ ಕೂಡ ತೋರಿಸಿದರು. ಆಗ ಕಾವ್ಯಶ್ರೀ ಗೌಡ ಹೊಸ ಸತ್ಯವೊಂದನ್ನು ರಿವೀಲ್‌ ಮಾಡಿದ್ದಾರೆ.

ಕಾವ್ಯಶ್ರೀ ಮಾತನಾಡಿ ʻರೂಪೇಶ್‌ ಮತ್ತು ಸಾನ್ಯ ಅವರದ್ದೇ ಆದ ಒಂದು ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆʼ ಎಂದು ಹೇಳಿದರು. ಕಿಚ್ಚ ಸುದೀಪ್‌ ಯಾವ ಭಾಷೆ ಎಂದು ಕೇಳಿದಾಗ, ಅರುಣ್‌ ಸಾಗರ್‌ ಮಾಡಿ ತೋರಿಸಿ ನಗೆಗಡಲಲ್ಲಿ ತೇಲಿಸಿದರು. ಅದೇ ರೀತಿ ಸಾನ್ಯಗೂ ಕಿಚ್ಚ ಸುದೀಪ್‌ ಟ್ಯಾಗ್‌ ವಿಚಾರವಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಸಾನ್ಯ ಕಲಾವಿದ ಎಂಬ ಟ್ಯಾಗ್‌ ಅನ್ನು ನೀಡುವಾಗ ಕುತಂತ್ರಿ ಎಂಬ ಅರ್ಥದಲ್ಲಿ ಹೇಳಿದ್ದರು. ಅದಕ್ಕೆ ಸುದೀಪ್‌, ಕಲಾವಿದ ಅದು ಪಾಸಿಟಿವ್‌ ಆಗಿತ್ತು. ಬೇರೆ ಅರ್ಥದಲ್ಲಿ ನೀವು ಊಹಿಸಿ ಕೊಟ್ಟಿರುವುದು. ಬಿಗ್‌ ಬಾಸ್‌ ಆ ಅರ್ಥದ ಟ್ಯಾಗ್‌ ನೀಡಿರಲಿಲ್ಲ ಎಂದಿದ್ದಾರೆ. ನಂತರ ಸಾನ್ಯ ಮಾತನಾಡಿ ʻʻಕುತಂತ್ರಿ ಆದವರು ಕಲಾವಿದರೆ ʼʼಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ನಂತರ ಸುದೀಪ್‌ ಪ್ರತಿಕ್ರಿಯೆ ನೀಡಿ ʻʻಒಳ್ಳೆಯದರ ಪಕ್ಕ ಎರಡು ಕೆಟ್ಟ ಲೈನ್‌ ಹೇಳಿದರೆ, ಕೆಟ್ಟದ್ದೇ ಹೈಲೈಟ್‌ ಆಗುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಿʼʼ ಎಂದಿದ್ದಾರೆ. ʻʻನನಗೆ ಅರ್ಥವಾಯ್ತುʼʼ ಎಂದು ಸಾನ್ಯ ತಪ್ಪು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ವಾರದ ಕತೆ ಕಿಚ್ಚನ ಜತೆ; ಮೊದಲನೇ ವಾರ ಮನೆಯಿಂದ ಯಾರು ಔಟ್‌?

ಇದನ್ನೂ ಓದಿ | Bigg Boss Kannada | ವಾರದ ಕತೆ ಕಿಚ್ಚನ ಜತೆ; ಮೊದಲನೇ ವಾರ ಮನೆಯಿಂದ ಯಾರು ಔಟ್‌?

ಆರ್ಯವರ್ಧನ್‌ ಮುಂಚಿನಂತೆ ಇಲ್ಲ!
ಆರ್ಯವರ್ಧನ್‌ ಒಟಿಟಿಗಿಂತ ಈಗ ಏನಾದರೂ ಬದಲಾವಣೆ ಆಗಿದ್ದಾರಾ? ಎಂದು ರಾಕೇಶ್‌ ಬಳಿ ಸುದೀಪ್‌ ಕೇಳಿದರು. ರಾಕೇಶ್‌ ಪ್ರತಿಕ್ರಿಯೆ ನೀಡಿ ʻʻತುಂಬಾ ಬದಲಾವಣೆ ಆಗಿದ್ದಾರೆ. ಎಲ್ಲರ ಜತೆ ಬೆರೆಯುತ್ತಿದ್ದಾರೆ. ʼʼಎಂದರು. ನಂತರ ದರ್ಶ್‌ಗೆ ಕಿಚ್ಚ ಸುದೀಪ್‌ ʻʻಆರ್ಯವರ್ಧನ್‌ ನಿಮಗೆ ಏನು ಹೇಳಿಕೊಟ್ಟರು?ʼʼ ಎಂದು ಕೇಳಿದರು.
ಪ್ರತಿಕ್ರಿಯೆ ನೀಡಿದ ದರ್ಶ್‌, ʻʻನೀನು ಚೆನ್ನಾಗಿದ್ದೀಯಾ. ನಿನಗೆ ಹುಡುಗೀರು ಬೀಳುತ್ತಾರೆ. ಕ್ಯಾಚ್‌ ಹಾಕೊಂಡ್ರೆ ತುಂಬಾ ದಿನ ಬರುತ್ತಿಯಾ ಎಂದು ಹೇಳಿದ್ದುಂಟುʼʼಎಂದರು. ಅದಾದ ನಂತರ ಕಿಚ್ಚ ಸುದೀಪ್‌ ʻʻಅದಾದ ಮೇಲೆ ಹಂಗೆ ಕೈ ಕೊಡ್ತಾರೆ ಅಂದ್ರು ಅಲ್ವಾʼʼ ಎಂದು ಆರ್ಯವರ್ಧನ್‌ ಕಾಲೆಳಿದಿದ್ದಾರೆ.

ಇದೇ ವಿಚಾರಕ್ಕೆ ಕಾವ್ಯಶ್ರೀ ಮಾತನಾಡಿ ʻʻನನಗೂ ರೂಪೇಶ್‌ ಮತ್ತೆ ಸಾನ್ಯ ಜತೆ ಇದ್ದಾಗ, ನೀನು ಬಿಟ್ಟುಕೊಡಬೇಡ. ಉರ್ಸ್‌ಬೇಕುʼʼ ಎಂದು ಹೇಳಿಕೊಟ್ಟಿದ್ದಾರೆ ಎಂದರು. ಅದಕ್ಕೆ ರೂಪೇಶ್‌ ಮಾತನಾಡಿ ʻʻಇಬ್ಬರಲ್ಲಿ ನಂಗೆ ಕನ್‌ಫ್ಯೂಸ್‌ ಆಗಿದೆʼʼ ಎಂದರು. ಅದಕ್ಕೆ ಸುದೀಪ್‌ ಪ್ರತಿಕ್ರಿಯೆ ನೀಡಿ ʻʻಆರ್ಯವರ್ಧನ್‌ ಈಗಷ್ಟೇ ಸೊಲ್ಯೂಷನ್‌ ಕೊಟ್ಟರು ಅಲ್ವಾ?ʼʼ ಎಂದು ಕೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ಈ ಮೂರು ಸ್ಪರ್ಧಿಗಳು ಸೇಫ್‌ : ನಾಯಕ ಜೋಕರ್‌ ಆಗಬಾರದು ಎಂದು ಕಿಚ್ಚ ಹೇಳಿದ್ದು ಯಾರಿಗೆ?

Exit mobile version