Site icon Vistara News

Bigg Boss Kannada | ಕಾವ್ಯಶ್ರೀ ಜತೆ ರೂಪೇಶ್‌ ಇದ್ದರೆ ಸಾನ್ಯಾಗೆ ಉರಿ ಅಂತೆ: ಭವಿಷ್ಯ ನುಡಿದ ಆರ್ಯವರ್ಧನ್‌!

Bigg Boss Kannada

ಬೆಂಗಳೂರು : ಒಟಿಟಿಯಲ್ಲಿ ರೂಪೇಶ್ ಶೆಟ್ಟಿ ಜತೆಗೆ ಸಾನ್ಯಾ ಅಯ್ಯರ್ ಸ್ನೇಹದಿಂದ ‘ಬಿಗ್ ಬಾಸ್’ ಮನೆಯೊಳಗೆ ಗುಸುಗುಸು ಆರಂಭವಾಯ್ತು. ಸಾನ್ಯ ಕಿಚ್ಚ ಸುದೀಪ್‌ ಮುಂದೆ ಸಾನ್ಯ ಶೆಟ್ಟಿ ಎಂದು ಕೇಳಲು ಇಷ್ಟವಾಗುತ್ತದೆ ಎಂದು ಹೇಳಿಕೊಂಡಿದ್ದರು. ಇದೀಗ ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ರೂಪೇಶ್‌-ಸಾನ್ಯ ವಿಚಾರವಾಗಿ ಗುಸು ಗುಸು ಶುರುವಾಗಿದೆ. ಕಾವ್ಯಶ್ರೀ ಜತೆ ಆರ್ಯವರ್ಧನ್‌ ಮಾತನಾಡಿ ʻʻರೂಪೇಶ್‌ ಹುಡುಗಿಯರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಅವನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆʼʼ ಎಂದಿದ್ದಾರೆ.

ಕಾವ್ಯಶ್ರೀ ಮತ್ತು ರೂಪೇಶ್‌ ಶೆಟ್ಟಿ ಒಂದು ಟೀಂ ಎನ್ನುವುದು ಗೊತ್ತಿದೆ. ಇದೀಗ ಒಟ್ಟಿಗೆ ಇರುವುದನ್ನು ನೋಡಿ ಆರ್ಯವರ್ಧನ್‌ ಗುರೂಜಿ ಸಾನ್ಯಾ ಮತ್ತು ರೂಪೇಶ್‌ನನ್ನು ಕಾಲೆಳೆದಿದ್ದಾರೆ. ನೇಹಾ ಮತ್ತು ಕಾವ್ಯಶ್ರೀ ಮುಂದೆ ʻʻಕಾವ್ಯಶ್ರಿ ಅವರೆ ನಿಮ್ಮನ್ನು ರೂಪೇಶ್‌ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವನನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಸಾನ್ಯ ಮಾತ್ರ ಉರ್ಕೋತ್ತಿದ್ದಾರೆ. ನಿಮ್ಮಲ್ಲಿ ಮಗ್ದತೆ ಇದೆ. ಸಿರಿಯಲ್‌ ಅಲ್ಲಿ ಅಳುವ ಸೀನ್‌ ಇಲ್ಲಿಯೂ ನಡೆಯುತ್ತೆ. ಆದರೆ ಅಳ್ತಾ ಇರೋರು ಬೇರೆʼʼಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾವ್ಯಶ್ರೀ ಗೌಡ ʼʼರೂಪೇಶ್‌ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸಾನ್ಯಾರನ್ನು ನಾನು ಕೂಡ ಗಮನಿಸಿದೆʼʼಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ಚಿಂತೆ ಇಲ್ಲದ ನವಾಜ್‍ಗೆ ಸಂತೆಯಲ್ಲೂ ನಿದ್ದೆ: ಅರುಣ್‌ ಸಾಗರ್‌ ಬುದ್ಧಿಮಾತು ಹೇಳಿದ್ದೇನು?

ಇನ್ನೂ ರೂಪೇಶ್‌ ಮತ್ತು ರಾಕೇಶ್‌ ಕೂಡ ಆರ್ಯವರ್ಧನ್‌ ಬಗ್ಗೆ ಮಾತನಾಡಿಕೊಂಡಿದ್ದು. ʻʻಆರ್ಯವರ್ಧನ್‌ ಅವರು ನಮ್ಮ ಜತೆ ಸೇರುತ್ತಿಲ್ಲ. ಒಟಿಟಿ ಸೀಸನ್‌ ಅಲ್ಲೇ ನಮ್ಮ ಜತೆ ಮಿಂಗಲ್‌ ಆಗಿದ್ದರುʼʼಎಂದರು. ಸಾನ್ಯಾ ಕೂಡ ಲಿವಿಂಗ್‌ ಏರಿಯಾದಲ್ಲಿ ಗುರೂಜಿ ಮಾತನಾಡುತ್ತಿಲ್ಲ ಎಂದು ಗುರೂಜಿ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಒಟಿಟಿಯಲ್ಲಿ ರೂಪೇಶ್ ಶೆಟ್ಟಿ ಜತೆಗೆ ಸಾನ್ಯ ಅಯ್ಯರ್ ಸ್ನೇಹದಿಂದ ‘ಬಿಗ್ ಬಾಸ್’ ಮನೆಯೊಳಗೆ ಗುಸುಗುಸು ಆರಂಭವಾಯ್ತು. ಆನಂತರ ಜಶ್ವಂತ್ ಬೋಪಣ್ಣ ಜತೆಗೆ ಸಾನ್ಯ ಅಯ್ಯರ್ ಆತ್ಮೀಯವಾಗಿದ್ದದ್ದು ನಂದಿನಿ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಸೀಸನ್‌ 9ರಲ್ಲಿ ಕಾವ್ಯಶ್ರೀ ಮತ್ತು ರೂಪೇಶ್‌ ಶೆಟ್ಟಿ ಜೋಡಿ ಬಗ್ಗೆ ಸಾನ್ಯ ಕುರಿತಾಗಿ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ | Bigg Boss Kannada | ಕನ್ನಡಕ್ಕಾಗಿ ಹೋರಾಟ, ರೂಪೇಶ್‌-ಪ್ರಶಾಂತ್‌ ಕಾದಾಟ!

Exit mobile version