Site icon Vistara News

Bigg Boss Kannada | ಈ ವಾರದ ಕೊನೆಯ ಟಾಸ್ಕ್‌ : ಬುದ್ಧಿಶಕ್ತಿ, ಶಕ್ತಿ ಪ್ರದರ್ಶನದ ನಡುವೆ ವಿಜೇತರಾದವರು ಯಾರು?

Bigg Boss kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada ) ಐದನೇ ದಿನಕ್ಕೆ ಕಾಲಿಟ್ಟಿದೆ. ಬಿಗ್‌ ಬಾಸ್‌ ನೀಡಿದ ಮೆದುಳಿನ ಟಾಸ್ಕ್‌ ಕೊನೆಯ ದಿನವಾಗಿದ್ದು ಪ್ರಶಾಂತ್‌ ಸಂಬರಗಿ ಟೀಮ್‌ ಮತ್ತೆ ಜಾಣ್ಮೆಯಿಂದ ಆಡಿದೆ.

ʻಕೈಲೇಸಾʼ ಎಂಬ ಟಾಸ್ಕ್‌ನ್ನು ಬಿಗ್‌ ಬಾಸ್‌ ನೀಡಿದ್ದು, ಕಲ್ಲನ್ನು ಒಡೆದು ಪೆಡೆಸ್ಟೆಲ್‌ ಮೇಲೆ ರಿಂಗ್‌ ಅನ್ನು ಇಡಬೇಕು. ಯಾರು ಮೊದಲು ರಿಂಗ್‌ ಇಡುತ್ತಾರೋ ಅವರು ವಿಜೇತರಾಗುತ್ತಾರೆ. ಈ ಟಾಸ್ಕ್‌ನಲ್ಲಿ ರೂಪೇಶ್‌ ರಾಜಣ್ಣ ಜೋಡಿ, ಮತ್ತು ವಿನೋದ್‌ ಗೊಬ್ಬರಗಾಲ ಜೋಡಿ ಮುಖಾಮುಖಿಯಾಗಿತ್ತು. ಹಾಗೂ ಅರುಣ್‌ ಸಾಗರ್ ಜೋಡಿ ಪಂದ್ಯ ಕಟ್ಟಬೇಕಿತ್ತು. ಆದರೆ ಅರುಣ್‌ ಸಾಗರ್‌, ರೂಪೇಶ್‌ ರಾಜಣ್ಣ ಜೋಡಿ ವಿನ್‌ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು. ಅದರ ಬದಲಾಗಿ ಪ್ರಶಾಂತ್‌ ಟೀಮ್‌ ವಿಜೇತವಾಗಿ ಹೊರಹೊಮ್ಮಿತು. ಪ್ರಶಾಂತ್‌ ಟೀಮ್‌ ಒಂದು ಅಂಕವನ್ನು ಪಡೆಯಿತು. ಅದೇ ರೀತಿ ಅರುಣ್‌ ಸಾಗರ್‌ ಜೋಡಿ ಸೋಲು ಕಂಡಿತು.

ಈ ಟಾಸ್ಕ್‌ನ ಫಲಿತಾಂಶವನ್ನು ಬಿಗ್‌ ಬಾಸ್‌ ಹೇಳಬೇಕಾದರೆ, ಅರುಣ್‌ ಸಾಗರ್‌ ಕಿರಿಕ್‌ ಮಾಡಿದರು. ಸ್ಪರ್ಧಿಗಳು ಇದರ ಬಗ್ಗೆ ಅಸಮಾಧಾನ ಹೊರಹಾಕಿದರು. ರೂಪೇಶ್‌ ಶೆಟ್ಟಿ ಈ ಬಗ್ಗೆ ಮಾತನಾಡಿ ಅರುಣ್‌ ಸಾಗರ್‌ ಫನ್‌ ಮಾಡುವಾಗ ನಗು ಬರುವುದಿಲ್ಲ. ಕೋಪ ಬರುತ್ತದೆ. ಅವರ ನಡವಳಿಕೆ ಹುಚ್ಚರ ತರ ಅನ್ನಿಸುತ್ತದೆ ಎಂದು ಹೇಳಿದ್ದಾರೆ. ಅನುಪಮಾ ಗೌಡ ಕೂಡ ʻʻಅರುಣ್‌ ಸಾಗರ್‌ಗೆ ಸೀನಿಯರ್‌ ಎಂಬ ಅಹಂಕಾರ ಬಂದು ಬಟ್ಟಿದೆʼʼ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | Bigg Boss kannada | ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ- ವಿನೋದ್‌ ಗೊಬ್ಬರಗಾಲ ಪಂದ್ಯ ಕಟ್ಟುವ ಪರಿಗೆ ಶಬ್ಬಾಸ್ ಗಿರಿ!

ಎರಡನೇ ಹಂತದಲ್ಲಿ ʻನನ್ನ ನೆನಪಿನ ಬಣ್ಣʼ ಎಂಬ ಟಾಸ್ಕ್‌ನ್ನು ಬಿಗ್‌ ಬಾಸ್‌ ನೀಡಿದ್ದರು. ಊಹೆಯನ್ನು ರೂಪೇಶ್‌ ಶೆಟ್ಟಿ ಟೀಮ್‌ ಮಾಡಿದರೆ, ಸಾನ್ಯ ಜೋಡಿ ಮತ್ತು ದೀಪಿಕಾ ದಾಸ್‌ ಜೋಡಿ ಆಡಬೇಕಿತ್ತು. ಈ ಟಾಸ್ಕ್‌ನಲ್ಲಿ ದೀಪಿಕಾ ದಾಸ್‌ ಟೀಮ್‌ ಗೆಲುವು ಕಂಡಿತು ಮತ್ತು ಒಂದು ಅಂಕವನ್ನು ಗಳಿಸಿತು. ರೂಪೇಶ್‌ ಶೆಟ್ಟಿ ಊಹೆ ಸರಿಯಾಗಿ ಮಾಡಿದ್ದಕ್ಕೆ ಅವರೂ ಒಂದು ಅಂಕ ಗಳಿಸಿಕೊಂಡರು.

ಈ ವಾರದ ಕೊನೆಯ ಟಾಸ್ಕ್‌ ಮೆದಳು ಮುಕ್ತಾಯಗೊಂಡಿದ್ದು. ಒಟ್ಟು ಫಲಿತಾಂಶವನ್ನು ಆರನೇ ದಿನ ಬಿಗ್‌ ಬಾಸ್‌ ಸಂಚಿಕೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ | Bigg Boss Kannada | ಅರುಣ್‌ ಸಾಗರ್‌ ವರ್ತನೆಗೆ ಸ್ಪರ್ಧಿಗಳ ಅಸಮಾಧಾನ; ನಡೆದದ್ದಾದರೂ ಏನು?

Exit mobile version