Site icon Vistara News

Bigg Boss Kannada | ವೈದ್ಯ ಲೋಕವೇ ವಿಸ್ಮಯ ಪಡುವ ಔಷಧ ಹೇಳಿದ್ದಾರೆ ಸೋನು: ನೆಗಡಿ ಬಂದ್ರೆ ಏನು?

Bigg Boss Kannada

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೋಲ್‌ ಹಾಗೂ ಹೆಚ್ಚು ಫಾಲೊವರ್ಸ್‌ ಹೊಂದಿರುವ ಸೋನು ಗೌಡ ಬಿಗ್‌ ಬಾಸ್‌ ಒಟಿಟಿ ಕನ್ನಡದಲ್ಲಿ (Bigg Boss Kannada) ಹೈಲೈಟ್‌ ಆಗುತ್ತಿದ್ದಾರೆ. ಎಲ್ಲರ ಜತೆ ಬೆರೆತು ಆಟವನ್ನು ಮುಂದುವರಿಸುತ್ತಿದ್ದಾರೆ. ಇದೀಗ ಸೋನು ಗೌಡಗೆ ಕಿಚ್ಚ ಸುದೀಪ್‌ ವಿಕೆಂಡ್‌ನಲ್ಲಿ ಮಾತನಾಡಿಸಿದ್ದಾರೆ.

ಮೊದಲ ವಾರವೇ ಸ್ಪರ್ಧಿಗಳು ಪ್ರೇಕ್ಷಕರನ್ನು ಗೆಲ್ಲುವ ಸವಾಲಿತ್ತು. ಮೊದಲ ದಿನವೇ ಸೋನು ಗೌಡ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುವಾಗ ಬಾತ್‌ರೂಮ್‌ ಹುಡುಕುವಲ್ಲಿ ವಿಫಲರಾಗಿದ್ದರು. ಇದೇ ವಿಚಾರವನ್ನು ಕಿಚ್ಚ ಸುದೀಪ್‌ ಮಾತುಕತೆಯಲ್ಲಿ ನೆನಪಿಸಿದ್ದಾರೆ. ʻʻಸೋನು ಗೌಡ ಅವರೇ ಬಾತ್‌ ರೂಮ್‌ಗೆ ಹೋಗಬೇಕು ಎಂದು ನೀವು ಒದ್ದಾಡುತ್ತಿದ್ದೀರಿ? ಕೊನೆಗೆ ಸಿಕ್ಕಿತಾ?ʼʼ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸೋನು ಗೌಡ ʻʻಈ ಮನೆಯಲ್ಲಿ ಬಾತ್‌ ರೂಮ್‌ ಇಲ್ಲವೇನೋ ಎಂದುಕೊಂಡೆʼʼಎಂದು ಉತ್ತರಿಸಿ ನಕ್ಕಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್‌ ಮನೆಯಲ್ಲಿ ನಡೆದ ಅದ್ಧೂರಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

ಗಂಟಲು ನೋವಿನ ಕುರಿತು ಕಿಚ್ಚ ಸುದೀಪ್‌ ಪ್ರಸ್ತಾಪಿಸಿದ್ದು, ʻʻನೀವು ಹೊರಗಡೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದೀರಿʼʼ ಎಂದರು. ಯಾವ ರೀತಿ ಎಂದು ಸೋನು ಗೌಡ ಕೇಳಿದಾಗ ʻʻಟ್ರೋಲ್‌ ಅಂತೂ ಅಲ್ಲʼʼ ಎಂದರು. “ಗಂಟಲು ನೋವಿಗೆ ನೀವು ಹೊಸ ಔಷಧ ಕಂಡು ಹಿಡಿದಿದ್ದೀರಿ. ಇಡೀ ವೈದ್ಯ ಲೋಕವೇ ಶೇಕ್‌ ಆಗಿದೆʼʼ ಎಂದು ಸುದೀಪ್‌ ಕಾಲೆಳೆದರು.

ʻʻನಮ್ಮ ಮನೆಯಲ್ಲಿ ಗಂಟಲು ನೋವು ಬಂದರೆ ನಾಟಿ ಕೋಳಿ ಮೊಟ್ಟೆಗೆ ತುಂಬ ಉಪ್ಪು ಖಾರ ಹಾಕಿ ಫ್ರೈ ಮಾಡಿ ಕೊಡುತ್ತಾರೆʼʼ ಎಂದು ಸೋನು ಹೇಳಿದಾಗ ಎಲ್ಲರೂ ಬಿದ್ದುಬಿದ್ದು ನಕ್ಕರು!

ಇದನ್ನೂ ಓದಿ | Bigg Boss Kannada | ಒಬ್ಬರು ಕೆಲಸ ಅಂತ ಜಾರಿಕೊಳ್ತಾರೆ! ಇನ್ನೊಬ್ಬರು ತೊಂದರೆಗೆ ಸಿಕ್ಕಿಹಾಕಿಕೊಳ್ತಾರೆ!

Exit mobile version