Site icon Vistara News

Bigg Boss Kannada | ಬಿಗ್‌ಬಾಸ್‌ ಮನೆಯಿಂದ ಹೊರಗೆ ಬರಲಿದ್ದಾರಾ ಸ್ಫೂರ್ತಿ ಗೌಡ?

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಒಟಿಟಿ ಕನ್ನಡ (Bigg Boss Kannada ) ಎರಡನೇ ವಾರ ನಾಮಿನೇಷನ್‌ ಪ್ರಕ್ರಿಯೆ ಶುರುವಾಗಿದೆ. ಈ ವೀಕೆಂಡ್‌ನಲ್ಲಿ ಯಾರ್‌ ಔಟ್‌ ಆಗಲಿದ್ದಾರೆ? ಯಾರು ಸೇಫ್‌ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸ್ಫೂರ್ತಿ ಗೌಡ ಅಥವಾ ಅಕ್ಷತಾ ಕುಕ್ಕಿ ದೊಡ್ಮನೆಯಿಂದ ಆಚೆ ಬರಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಈಗಾಗಲೇ ಅರ್ಜುನ್‌ ರಮೇಶ್‌ ಮನೆಯಿಂದ ಹೊರಗೆ ಬಂದಿದ್ದಾರೆ.

ಈ ವಾರ ಸೋನುಗೌಡ, ರಾಕೇಶ್‌ ಅಡಿಗ, ಸೋಮಣ್ಣ ಮಾಚಿಮಾಡ, ನಂದಿನಿ ಹಾಗೂ ಅಕ್ಷತಾ ಕುಕ್ಕಿ , ಸಾನ್ಯ, ಜಯಶ್ರೀ ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದಾರೆ. ಹೆಚ್ಚಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಫೂರ್ತಿ ಗೌಡ ಔಟ್‌ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಬಿಗ್‌ ಬಾಸ್‌ ಮನೆಯಲ್ಲಿ ಎಂಟ್ರಿ ನೀಡುತ್ತಲೇ ಸ್ಫೂರ್ತಿ ಗೌಡ ತಾನು ಇರಿಟೇಟ್‌ ಮಾಡಿಕೊಂಡರೆ ಅತಿಯಾಗಿ ರಿಯಾಕ್ಟ್‌ ಮಾಡುತ್ತೇನೆ ಎಂದು ಹೇಳಿಕೊಂಡರು. ಸೋನು ಗೌಡ ಜತೆ ಯಾವಾಗಲೂ ಕಿರಕ್‌ ಮಾಡುತ್ತಿದ್ದ ಸ್ಫೂರ್ತಿ ಗೌಡ ಅವರು ರಾಕೇಶ್‌ ಜತೆ ಆಪ್ತತೆಯಿಂದ ಇರುತ್ತಿದ್ದರು.

ಇದನ್ನೂ ಓದಿ | Bigg Boss Kannada | ಹೆಬ್ಬುಲಿ ಗರ್ಜಿಸಲು ರೆಡಿ: ಇಲ್ಲಿದೆ ಬಿಗ್‌ ಬಾಸ್‌ ವೀಕೆಂಡ್‌ ಪಂಚ್‌!

ಸ್ಫೂರ್ತಿ ಗೌಡ ಹಾಗೂ ಸೋನು ಗೌಡ ಮಧ್ಯೆ ಮೊದಲನೇ ದಿನದಿಂದಲೇ ಇರಿಸುಮುರಿಸು ಪ್ರಾರಂಭವಾಗಿತ್ತು. ಅದೂ ಎರಡನೇ ದಿನವೂ ಮುಂದುವರಿದಿದ್ದು, “ಡವ್‌ ರಾಣಿ” ಎಂಬ ಪದ ರಾದ್ಧಾಂತವನ್ನೇ ಸೃಷ್ಟಿಸಿತ್ತು.

ಹಿಂದೊಮ್ಮೆ ಸೋನು ಗೌಡ ವಿಚಾರವಾಗಿ ರಾಕೇಶ್‌ ಅವರು ಸ್ಫೂರ್ತಿ ಗೌಡ ಅವರದ್ದೇ ತಪ್ಪು ಎಂಬ ಅರ್ಥದಲ್ಲಿ ಹೇಳಿದ್ದರೂ ಸ್ಫೂರ್ತಿ ಗೌಡ ಮಾತ್ರ ಅದಕ್ಕೆ ರಿಯಾಕ್ಟ್‌ ಮಾಡಿರಲಿಲ್ಲ. ʻನನ್ನ ಯೋಚನೆ ಮತ್ತು ನಿಮ್ಮ ಆಲೋಚನೆಗಳು ಒಂದೇ ಇದೆʼ ಎಂದು ಸ್ಫೂರ್ತಿ ಹೇಳಿದ್ದರು. ಇದೀಗ ಹಲವಾರು ಸನ್ನಿವೇಶಗಳು ಸ್ಫೂರ್ತಿ ಗೌಡ ಹಾಗೂ ರಾಕೇಶ್‌ ನಡುವೆ ಆಪ್ತತೆ ಬೆಳೆದಿರುವಂತೆ ತೋರಿಸುತ್ತಿತ್ತು.

ಬಿಗ್‌ಬಾಸ್‌ ವೇದಿಕೆಯಲ್ಲಿ ಸ್ಫೂರ್ತಿ ಗೌಡ ಮೊದಲ ದಿನವೇ ತಾನು ಏನೇ ಕೆಲಸ ಮಾಡಿದರೂ ಅರ್ಧಕ್ಕೆ ಓಡಿ ಬರುತ್ತೇನೆ ಎಂದು ಹೇಳಿಕೊಂಡಿದ್ದರು. ಸ್ಫೂರ್ತಿ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಇದರಿಂದ ಅರ್ಧಕ್ಕೆ ಓಡಿ ಬಂದಿದ್ದರು. ಇಂಜಿನಿಯರಿಂಗ್‌ ಕೂಡ ಅರ್ಧಕ್ಕೆ ತೊರೆದಿದ್ದಾರೆ. ಆದರೆ, ಇದೀಗ ಬಿಗ್‌ ಬಾಸ್‌ನಿಂದ ಅರ್ಧಕ್ಕೆ ಹೊರಕ್ಕೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Bigg Boss Kannada | ಹಾಸಿಗೆ Bigg Boss Kannada ಇದ್ದಷ್ಟು ಕಾಸು ಚಾಚು ಅಂದ್ರು ಸೋನು: ಜಾಗರಣೆ ಮಾಡ್ತಿರೋದ್ಯಾಕೆ?

Exit mobile version