Site icon Vistara News

Bigg Boss Kannada | ಸೂಪರ್‌ ಸಂಡೇ ವಿತ್‌ ಸುದೀಪ್‌ ಜತೆ ಹರಿ ಕತೆ ಹೇಳಲು ಬರುತ್ತಿರೋರು ಯಾರು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಒಟಿಟಿ ಶೋನಲ್ಲಿ (Bigg Boss Kannada) ಮೊದಲ ವಾರ ಎಲಿಮಿನೇಷನ್‌ ರೌಂಡ್‌ನಲ್ಲಿ ಕಿರಣ್‌ ಯೋಗೇಶ್ವರ್‌ ಔಟ್‌ ಆಗಿದ್ದಾರೆ. ಇದೀಗ ಬಿಗ್‌ ಬಾಸ್‌ ಈ ಕುರಿತ ಪ್ರೋಮೊ ಹಂಚಿಕೊಂಡಿದೆ. ಕಿಚ್ಚನ ಜತೆ ಗೆಸ್ಟ್‌ ಆಗಿ ಹರಿ ಕತೆ ಹೇಳಲು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಬರುತ್ತಿದ್ದಾರೆ.

ಹರಿ ಕಥೆ ಅಲ್ಲ ಗಿರಿ ಕಥೆ ಸಿನಿಮಾ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಇದೀಗ ವೂಟ್‌ನಲ್ಲೂ ಲಭ್ಯವಿದೆ. ಇದರ ಬೆನ್ನಲ್ಲೆ ರಿಷಬ್ ಶೆಟ್ಟಿ ಅವರು ಬಿಗ್‌‌ ಬಾಸ್‌ನಲ್ಲಿ ಮೊದಲ ವಾರವೇ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಸುದೀಪ್‌ ಅವರು ರಿಷಬ್‌ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ರಿಷಬ್‌ಗೆ ಸುಳ್ಳು ಹೇಳಲು ಬರುವುದಿಲ್ಲವಂತೆ ಎಂದು ಸುದೀಪ್‌ ಕೇಳಿದರೆ, ನೋ ಎಂದು ಬೋರ್ಡ್‌ ತೋರಿಸಿ ನಕ್ಕಿದ್ದಾರೆ ರಿಷಬ್‌. ಹಲವಾರು ಸಂಗತಿಗಳ ಬಗ್ಗೆ ಸುದೀಪ್‌ ಅವರು ಇಲ್ಲಿ ರಿಷಬ್‌ ಅವರ ಕಾಲೆಳೆದಿದ್ದಾರೆ. ಭಾನುವಾರದ (ಆ.14) ಬಿಗ್‌ ಬಾಸ್‌ ಸಂಚಿಕೆಯಲ್ಲಿ ಇದು ಪ್ರಸಾರವಾಗಲಿದೆ.

ಮೊದಲ ವಾರದ ಎಲಿಮಿನೇಷನ್‌ ರೌಂಡ್‌ ಪ್ರಕ್ರಿಯೆ ಮುಗಿದಿದ್ದು, ಕಿರಣ್‌ ಯೋಗೇಶ್ವರ್‌ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಕಿರಣ್‌ಗೆ ಇತರ ಸ್ಪರ್ಧಿಗಳ ಜತೆ ಹೊಂದಿಕೊಳ್ಳಲು ಆಗುತ್ತಿಲ್ಲ ಹಾಗೂ ಕನ್ನಡ ಕೂಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ವೋಟ್‌ ಕಡಿಮೆ ಬಂದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಕಿರಣ್‌ ಔಟ್‌?

ಸಾನ್ಯಾ ಅಯ್ಯರ್​, ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್​ ಗೌಡ, ಅರ್ಜುನ್​ ರಮೇಶ್​, ಉದಯ್​ ಸೂರ್ಯ, ಸ್ಫೂರ್ತಿ ಗೌಡ, ಜಯಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್​ ಯೋಗೇಶ್ವರ್​ ನಾಮಿನೇಟ್​ ಆಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಸೋನು ಗೌಡ ಶೋಯಿಂದ ಹೊರಗೆ ಹೋಗಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಇದನ್ನೂ ಓದಿ | Bigg Boss Kannada | ಜಶ್ವಂತ್‌-ನಂದಿನಿ ಕಣ್ಣ ಕಣ್ಣ ಸಲಿಗೆ ಪುರಾಣ: ವಾರದ ಕತೆ ಕಿಚ್ಚನ ಜತೆ ಮಾತುಕತೆ!

Exit mobile version