Site icon Vistara News

Bigg Boss Kannada | ಬಿಗ್ ಬಾಸ್ ಒಟಿಟಿ ಫಿನಾಲೆಗೆ ಇವರೇ ಅರ್ಹರೆಂದ ಎಲಿಮಿನೇಟ್‌ ಸ್ಪರ್ಧಿಗಳು!

Bigg Boss kannada

ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ (Bigg Boss Kannada) ಸೀಸನ್‌ ಪಯಣ ಕೊನೇ ಘಟ್ಟ ತಲುಪಿದ್ದು, ಫೈನಲಿಸ್ಟ್‌ಗಳು ಯಾರು ಎಂಬ ಚರ್ಚೆ ಶುರುವಾಗಿದೆ. ಈಗ ಈ ವಿಚಾರವಾಗಿ ಬಿಗ್‌ ಬಾಸ್‌ ಮನೆಯ ಎಲಿಮಿನೇಟ್‌ ಸದಸ್ಯರು ಮಾತನಾಡಿದ್ದು, ಅಂತಿಮವಾಗಿ ಯಾರು ಇರಲಿದ್ದಾರೆ? ಯಾರು ಟ್ರೋಫಿ ಗೆಲ್ಲಬಹುದು ಎಂಬ ತಮ್ಮದೇ ಲೆಕ್ಕಾಚಾರವನ್ನು ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ಎಲಿಮಿನೇಟ್ ಆಗಿರುವ ನಟಿ ಮತ್ತು ನಿರ್ಮಾಪಕಿ ಚೈತ್ರಾ ಹಳ್ಳಿಕೇರಿ ಮಾತನಾಡಿ ʻʻಸೋಮಣ್ಣ ಸ್ವತಂತ್ರವಾಗಿ ಆಡುತ್ತಿದ್ದಾರೆ. ಜತೆಗೆ ಉತ್ತಮವಾಗಿ ಟಾಸ್ಕ್‌ ನಿಭಾಯಿಸುತ್ತಿದ್ದಾರೆ. ಅವರ ಗೆಲುವಿಗೆ ಅಪಾರ ಅವಕಾಶವಿದೆ. ಹಾಗೇ ರಾಕೇಶ್‌ ಕೂಡ ಇಡೀ ಶೋದಲ್ಲಿ ಸ್ಥಿರವಾಗಿ ಉಳಿದಿದ್ದಾರೆ. ನನ್ನ ಪ್ರಕಾರ ಅದೇ ಅವರ ದೊಡ್ಡ ಶಕ್ತಿಯಾಗಿದೆʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಸೋಮಣ್ಣಗೆ ಆರ್ಯವರ್ದನ್‌ ಸವಾಲ್‌: ಕಥೆ ಹೇಳುತ್ತಿವೆ ಪೋಟೋಗಳು!

ಚೈತ್ರಾ ಹಳ್ಳಿಕೇರಿ

ಬಿಗ್ ಬಾಸ್ ಮನೆಯಿಂದ ಹೊರಬಿದ್ದವರಲ್ಲಿ ಮೊದಲಿಗರಾದ ರೂಪದರ್ಶಿ ಮತ್ತು ನಟಿ ಕಿರಣ್ ಯೋಗೇಶ್ವರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, “ರಾಕೇಶ್ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. ಏಕೆಂದರೆ, ಅವರು ತುಂಬಾ ಸ್ಮಾರ್ಟ್ ಮತ್ತು ತಮ್ಮ ಆಟದಲ್ಲಿ ಚೆನ್ನಾಗಿದ್ದಾರೆ. ಸ್ಪರ್ಧೆಯ ವಿಷಯದಲ್ಲಿ ತುಂಬಾ ಚುರುಕು. ಸಾನಿಯಾ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಅವರಿಗೆ ಆಟದಲ್ಲಿ ಒಳ್ಳೆಯ ಹೋಲ್ಡ್‌ ಇದೆ” ಎಂದು ಹೇಳಿದ್ದಾರೆ.

ಕಿರಣ್ ಯೋಗೇಶ್ವರ್

ಅಕ್ಷತಾ ಕುಕ್ಕಿ ತಮ್ಮ ಮನದಾಳವನ್ನು ವ್ಯಕ್ತಪಡಿಸಿದ್ದು, “ಬಿಗ್‌ ಬಾಸ್‌ ಮನೆಯಲ್ಲಿ ಗೆಲ್ಲಲು ರಾಕೇಶ್‌ಗೆ ತುಂಬಾ ಅರ್ಹತೆ ಇದೆ. ಅವರು ಆಟದ ವಿಷಯ ಬಂದಾಗ ಶೇಕಡಾ 100ಕ್ಕಿಂತ ಹೆಚ್ಚು ಒತ್ತು ನೀಡುವುದರಿಂದ ಅವರೇ ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ, ಅವರು ಮನೆಯಲ್ಲಿ ಅತ್ಯಂತ ಅರ್ಹ ಅಭ್ಯರ್ಥಿ” ಎಂದಿದ್ದಾರೆ.

ಅಕ್ಷತಾ ಕುಕ್ಕಿ

ನಗುಮುಖದ ಹುಡುಗಿ, ಸ್ಫೂರ್ತಿ ಗೌಡ ಮಾತನಾಡಿ “ರೂಪೇಶ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ, ಅವರು ಪ್ರಬಲ ಸ್ಪರ್ಧಿಯಾಗಿದ್ದು, ಒಳ್ಳೆಯ ಮನುಷ್ಯನೂ ಆಗಿದ್ದಾರೆ. ರಾಕೇಶ್ ಕೂಡಾ ತಮ್ಮ ಆಟವನ್ನು ಬಹಳ ಚುರುಕಾಗಿ ಆಡುತ್ತಿರುವುದರಿಂದ ಅವರೂ ವಿಜೇತರಾಗಬೇಕೆಂದು ನಾನು ಹಾರೈಸುತ್ತೇನೆ” ಎಂದು ಹೇಳಿದ್ದಾರೆ.

ಸ್ಪೂರ್ತಿ ಗೌಡ

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಆರ್ಯವರ್ಧನ್ ಗುರೂಜಿದೇ ಹವಾ! ಇಲ್ಲಿವೆ ವಿಶಿಷ್ಟ ಫೋಟೊಗಳು

Exit mobile version