Site icon Vistara News

Bigg Boss Kannada | ಈ ವಾರ ನಾಮಿನೇಟ್‌ ಆದ ಆರು ಸ್ಪರ್ಧಿಗಳು , ಯಾರವರು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 37ನೇ (Bigg Boss Kannada) ದಿನ ಆರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ನಾಮಿನೇಟ್‌ ಮಾಡಿದ ಬಳಿಕ ರೂಪೇಶ್‌ ಶೆಟ್ಟಿ ಮತ್ತು ಅನುಪಮಾ ನಡುವೆ ವಾದಗಳು ನಡೆದವು. ನೇಹಾ ಅವರು ಔಟ್‌ ಆದ ಕಾರಣ ಹೋಗುವಾಗ ಪ್ರಶಾಂತ್‌ ಸಂಬರಗಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು.

ಈ ವಾರ ಸಾನ್ಯ, ರೂಪೇಶ್‌ ರಾಜಣ್ಣ, ಆರ್ಯವರ್ಧನ್‌ ಗುರೂಜಿ ಮತ್ತು ದಿವ್ಯಾ ಉರುಡುಗ ನಾಮಿನೇಟ್‌ ಆಗಿದ್ದಾರೆ. ಕ್ಯಾಪ್ಟನ್‌ ಅನುಪಮಾ ಅವರು ರೂಪೇಶ್‌ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದರು. ಸಾನ್ಯ ವಿಚಾರಕ್ಕೆ ಮನೆಯಲ್ಲಿ ಕ್ಯಾಪ್ಟನ್‌ ಮತ್ತು ಅವರು ಮಾತನಾಡುವ ಟೋನ್‌ ಬಗ್ಗೆ ಸ್ಪರ್ಧಿಗಳು ಹೇಳಿಕೆ ನೀಡಿದರು. ರೂಪೇಶ್‌ ಶೆಟ್ಟಿ ಅವರು ಅನುಪಮಾ ನಾಮಿನೇಟ್‌ ಆಡಿದ ಕಾರಣವನ್ನು ಒಪ್ಪದೇ ತರ್ಕ ಮಾಡಿದರು. ರೂಪೇಶ್‌ ಶೆಟ್ಟಿ ಅವರು ʻʻಮನೆಯಲ್ಲಿ ಬೇರೆಯವರನ್ನು ನಾಮನೇಟ್‌ ಮಾಡಲು ಕಷ್ಟವಾಗಿ ನನ್ನನ್ನು ಮಾಡಿದಾಗಿತ್ತುʼʼಎಂದು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ | Bigg Boss Kannada | ಬೈಕ್‌ ಗಿಫ್ಟ್‌ ಕೊಡ್ತಾರಂತೆ ರೂಪೇಶ್‌ ಶೆಟ್ಟಿ: ವಿರಹ ವೇದನೆಯಲ್ಲಿ ಇದ್ದಾರಂತೆ ದಿವ್ಯಾ!

ರೂಪೇಶ್‌ ರಾಜಣ್ಣ ಅವರು ದೀಪಿಕಾ ದಾಸ್‌ ಮತ್ತು ದಿವ್ಯಾ ಉರುಡುಗ, ಸಾನ್ಯ ಅವರು ಆರ್ಯವರ್ಧನ್‌ ಮತ್ತು ಅರುಣ್‌ ಸಾಗರ್‌, ಆರ್ಯವರ್ಧನ್‌ ಅವರು ಸಾನ್ಯ ಮತ್ತು ದಿವ್ಯಾ ಉರುಡುಗ, ಕಾವ್ಯಶ್ರೀ ಅವರು ಸಾನ್ಯ ಮತ್ತು ದಿವ್ಯಾ, ಪ್ರಶಾಂತ್‌ ಅವರು ಸಾನ್ಯ ಮತ್ತು ರೂಪೇಶ್‌ ರಾಜಣ್ಣ, ದೀಪಿಕಾ ದಾಸ್‌ ಅವರು ರೂಪೇಶ್‌ ಶೆಟ್ಟಿ ಮತ್ತು ಸಾನ್ಯ, ರೂಪೇಶ್‌ ಶೆಟ್ಟಿ ಅವರು ಆರ್ಯವರ್ಧನ್‌ ಮತ್ತು ಕಾವ್ಯ, ದಿವ್ಯಾ ಉರುಡುಗ ಅವರು ಸಾನ್ಯ ಮತ್ತು ಆರ್ಯವರ್ಧನ್‌, ರಾಕೇಶ್‌ ಅವರು ರೂಪೇಶ್‌ ರಾಜಣ್ಣ ಮತ್ತು ಸಾನ್ಯ, ಅರುಣ್‌ ಸಾಗರ್‌ ಅವರು ಸಾನ್ಯ ಮತ್ತು ರೂಪೇಶ್‌ ರಾಜಣ್ಣ, ಅಮೂಲ್ಯ ಅವರು ರೂಪೇಶ್‌ ರಾಜಣ್ಣ ಮತ್ತು ಆರ್ಯವರ್ಧನ್‌ ಅವರನ್ನು ನಾಮಮಿನೇಟ್‌ ಮಾಡಿದರು.

ಇದನ್ನೂ ಓದಿ | Bigg Boss Kannada | ಮನೆಮಂದಿಗೆ ಚರ್ಚಿಸಿ ಎನ್ನಲು ಬಿಗ್ ಬಾಸ್‍ಗೆ ಭಯವಾಗಿದೆಯಂತೆ!

Exit mobile version