Site icon Vistara News

Bigg Boss Kannada | ಮನೆಯಲ್ಲಿ ಯಾರು ಬಂಗಾರ, ಯಾರು ಕಾಗೆ ಬಂಗಾರ: ಈ ಮೂವರು ಸೇಫ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರ (Bigg Boss Kannada) ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸ್ಪರ್ಧಿಗಳೊಂದಿಗೆ ಹಾಸ್ಯದ ಜತೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಶನಿವಾರ ಮೂವರು ಸ್ಪರ್ಧಿಗಳು ಸೇಫ್‌ ಆಗಿದ್ದಾರೆ. ಹಾಗೇ ಕಿಚ್ಚ ಸುದೀಪ್‌ ಮನೆಯಲ್ಲಿ ಬಂಗಾರ ಯಾರು ಕಾಗೆ ಬಂಗಾರ ಯಾರು ಎಂಬುದು ಸ್ಪರ್ಧಿಗಳಲ್ಲಿ ಪ್ರಶ್ನಿಸಿದ್ದಾರೆ.

‘ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಲು ಮೂರನೇ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ದರ್ಶ್, ದಿವ್ಯಾ ಉರುಡುಗ, ಮಯೂರಿ, ವಿನೋದ್, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ಅನುಪಮಾ ಗೌಡ ಹಾಗೂ ಅಮೂಲ್ಯ ಗೌಡ ನಾಮಿನೇಟ್ ಆಗಿದ್ದರು. ಈ ಪೈಕಿ ಅಮೂಲ್ಯ ಗೌಡ, ಅನುಪಮಾ ಗೌಡ ಹಾಗೂ ದೀಪಿಕಾ ದಾಸ್‌ ಸೇಫ್‌ ಆಗಿದ್ದಾರೆ. ಹಾಗೇ ಈ ವಾರದ ಅತ್ಯುತ್ತಮ ಪ್ರದರ್ಶನ ಮತ್ತು ಕ್ಯಾಪ್ಟನ್‌ ಆಗಿ ದೀಪಿಕಾ ದಾಸ್‌ ಹೊರಹೊಮ್ಮಿದ್ದಾರೆ.

ಕಾವ್ಯಶ್ರೀ ಮನೆಯಲ್ಲಿ ಬಂಗಾರ ಅರುಣ್‌ ಸಾಗರ್‌, ಕಾಗೆ ಬಂಗಾರ ಆರ್ಯವರ್ಧನ್‌ ಗುರೂಜಿ ಎಂದರು. ರಾಕೇಶ್‌ ಬಂಗಾರ ಎಂದು ಕಾವ್ಯ ಅಂದರೆ, ಕಾಗೆ ಬಂಗಾರ ಎಂದು ಆರ್ಯವರ್ಧನ್‌ ಎಂದರು. ವಿನೋದ್‌ ಬಂಗಾರ-ಅರುಣ್‌ ಸಾಗರ್‌, ಕಾಗೆ ಬಂಗಾರ-ಆರ್ಯವರ್ಧನ್‌, ದೀಪಿಕಾ ಬಂಗಾರ ಎಂದು ಅರುಣ್‌ ಸಾಗರ್‌ ಕಾಗೆ ಬಂಗಾರ ಎಂದು ಆರ್ಯವರ್ಧನ್‌ ಎಂದರು. ರಾಕೇಶ್‌ ಬಂಗಾರ ಎಂದು ಅರುಣ್‌ ಸಾಗರ್‌, ಕಾಗೆ ಬಂಗಾರ-ಪ್ರಶಾಂತ್‌ ಸಂಬರಗಿ, ರೂಪೇಶ್‌ ರಾಜಣ್ಣ ಬಂಗಾರ ಎಂದು ರಾಕೇಶ್‌, ಕಾಗೆ ಬಂಗಾರ ಎಂದು ರೂಪೇಶ್‌ ರಾಜಣ್ಣ ಹೇಳಿದರು.

ಇದನ್ನೂ ಓದಿ |Bigg Boss Kannada | ಪ್ರಶಾಂತ್‌-ರೂಪೇಶ್‌ ಮಾತಿನ ಚಕಮಕಿ: ಅವರವರ ಭಾವಕ್ಕೆ ಅವರವರ ವಾದ, ಯಾವುದು ಸರಿ?

ಬಂಗಾರ ಎಂದು ಅರುಣ್‌ ಸಾಗರ್‌, ಕಾಗೆ ಬಂಗಾರ ಎಂದು ಪ್ರಶಾಂತ್‌ ಎಂದರು. ಅನುಪಮಾ ಬಂಗಾರ ಎಂದು ಅರುಣ್‌ ಸಾಗರ್‌, ಕಾಗೆ ಬಂಗಾರ-ಪ್ರಶಾಂತ್‌ ಸಂಬರಗಿ, ಅಮೂಲ್ಯ ಬಂಗಾರ ಎಂದು ದಿವ್ಯಾ ಉರುಡುಗ ಎಂದರೆ ಕಾಗೆ ಬಂಗಾರ-ಪ್ರಶಾಂತ್‌ ಸಂಬರಗಿ, ಮಯೂರಿ ಬಂಗಾರ ಎಂದು ರಾಕೇಶ್‌, ಕಾಗೆ ಬಂಗಾರ ಎಂದು ಆರ್ಯವರ್ಧನ್‌, ಪ್ರಶಾಂತ್‌ ಬಂಗಾರ ಅರುಣ್‌ ಸಾಗರ್‌ ಕಾಗೆ ಬಂಗಾರ ಎಂದು ಹೇಳಿದರು. ನೇಹಾ ಬಂಗಾರ ಎಂದು ರಾಕೇಶ್‌ ಕಾಗೆ ಬಂಗಾರ ಎಂದು ಪ್ರಶಾಂತ್‌ ಹೇಳಿದರು. ಅರುಣ್‌ ಸಾಗರ್‌ ಬಂಗಾರ ಎಂದು ರಾಕೇಶ್‌ ಹೇಳಿದರೆ ಕಾಗೆ ಬಂಗಾರ ಎಂದು ರೂಪೇಶ್‌ ಶೆಟ್ಟಿ ಹೇಳಿದರು. ಸಾನ್ಯ ಬಂಗಾರ ಎಂದು ಕಾವ್ಯ ಹೇಳಿದರೆ, ಕಾಗೆ ಬಂಗಾರ ಎಂದು ಆರ್ಯವರ್ಧನ್‌ ಹೇಳಿದರು. ಆರ್ಯವರ್ಧನ್‌ ಬಂಗಾರ ಎಂದು ಪ್ರಶಾಂತ್‌ ಎಂದರೆ, ಕಾಗೆ ಬಂಗಾರ ಎಂದು ಕಾವ್ಯಶ್ರೀಗೆ ಹೇಳಿದರು. ಹೆಚ್ಚಾಗಿ ಸ್ಪರ್ಧಿಗಳಲ್ಲಿ ಪ್ರಶಾಂತ್‌ ಸಂಬರಗಿ ಮತ್ತು ಆರ್ಯವರ್ಧನ್‌ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ| Bigg Boss Kannada | ಮನೆಯ ಕ್ಯಾಪ್ಟನ್‌ ರೂಮ್‌ ಪಿಕ್ನಿಕ್‌ ಸ್ಪಾಟ್‌ ಅಲ್ಲ: ರೂಪೇಶ್‌, ಸಾನ್ಯ, ಗುರೂಜಿಗೆ ಕಿಚ್ಚ ಎಚ್ಚರಿಕೆ!

Exit mobile version