Site icon Vistara News

Bigg Boss Kannada | ಫಿನಾಲೆಗೆ ಇನ್ನು ಎರಡೇ ಹೆಜ್ಜೆ: ಮೆಟ್ಟಿಲು ಹತ್ತೋರು ಯಾರು? ಎಡವೋರು ಯಾರು? 

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಈಗಾಗಲೇ ಮುಕ್ತಾಯ ಹಂತಕ್ಕೆ ಬಂದಿದೆ. ಒಟಿಟಿ ಬಿಗ್‌ ಬಾಸ್‌ ಮುಕ್ತಾಯಕ್ಕೆ ಇನ್ನು ಎರಡೇ ವಾರ ಬಾಕಿ ಇದೆ. ಈ ವಾರ ರಾಕೇಶ್‌ ಅಡಿಗ, ಸಾನ್ಯ, ಸೋನು ಗೌಡ, ಜಶ್ವಂತ್‌, ನಂದಿನಿ ಮತ್ತು ಜಯಶ್ರೀ ನಾಮಿನೇಟ್‌ ಆಗಿದ್ದಾರೆ.

ರೂಪೇಶ್‌ ಶೆಟ್ಟಿ ಈಗಾಗಲೇ ಕ್ಯಾಪ್ಟನ್‌ಶಿಪ್‌ ಪಡೆದುಕೊಂಡಿದ್ದಾರೆ. ಮೂರನೇ ವಾರ ಹಾಗೂ ನಾಲ್ಕನೇ ವಾರ ‘ಬಿಗ್ ಬಾಸ್’ ಮನೆಯ ‘ಬಾಸ್’ ಆಗಿ ಹೊರಹೊಮ್ಮಿದ್ದಾರೆ. ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದು ಒಂದು ತಂಡಕ್ಕೆ ಜಯಶ್ರೀ ಅವರು ಕ್ಯಾಪ್ಟನ್‌ ಆಗಿದ್ದರು. ಈ ತಂಡಕ್ಕೆ ʻʻಪವರ್‌ ಸ್ಟಾರ್‌ʼʼ ಎಂದು ಹೆಸರು ನೀಡಲಾಗಿತ್ತು. ಇನ್ನೊಂದು ತಂಡಕ್ಕೆ ಅಕ್ಷತಾ ಕುಕ್ಕಿ ಕ್ಯಾಪ್ಟನ್‌ ಆಗಿದ್ದು ʻʻಜಿಂಗಿಲಕಾʼʼ ಎಂದು ಹೆಸರನ್ನು ನೀಡಲಾಗಿತ್ತು. ಎರಡೂ ತಂಡಗಳಲ್ಲಿ ಜಯಶ್ರೀ ಅವರ ತಂಡ ಈ ವಾರ ಗೆದ್ದಿದೆ. ಹಾಗೇ ಜಯಶ್ರೀ ಅವರಿಗೆ ಈ ವಾರ ಬೆಸ್ಟ್‌ ಪರ್‌ಫಾರ್ಮರ್‌ ಎಂಬ ಕ್ರೆಡಿಟ್‌ ಕೂಡ ಸಿಕ್ಕಿದೆ. ಆದರೆ ಈ ವಾರ ಸೋನು ಗೌಡ ಕಳಪೆ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ | Bigg Boss Kannada | ವೋಟ್‌ ಮಾಡಿರುವವರು ಫೇಕ್‌ ಅಂದ್ರು ಸೋನು: ಜಶ್ವಂತ್‌-ನಂದಿನಿ ನಡುವೆ ಬಿರುಕು!

ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿ ಸತತ ಎರಡು ಬಾರಿ ಬಾಸ್‌ ಪಟ್ಟವನ್ನು ಅಲಂಕರಿಸಿದ್ದಾರೆ. ಬಿಗ್‌ ಬಾಸ್‌ ಮನೆಯ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ರಾಕೇಶ್‌ ಅಡಿಗ ಅಡುಗೆ ಮಾಡಬೇಕು ಎಂದು ಜನ ವೋಟ್‌ ಹಾಕಿದ್ದರು. ಅದರಂತಯೇ ಅಡುಗೆಯ ಜವಾಬ್ದಾರಿಯನ್ನು ರಾಕೇಶ್‌ ಅಡಿಗ ಹೊರಬೇಕಾಯಿತು.

ಜಶ್ವಂತ್‌ ಮತ್ತು ನಂದಿನಿ ನಡುವೆ ಸಾನ್ಯ ವಿಚಾರವಾಗಿ ಭಿನ್ನಾಬಿಪ್ರಾಯ ಮೂಡಿಬಂದಿತ್ತು. ಹಲವು ಬಾರಿ ನಂದಿನಿ ಮತ್ತು ಜಶ್ವಂತ್‌ ಕಿತ್ತಾಡಿಕೊಂಡಿದ್ದರು. ನಂದಿನಿ ಅವರ ಮೇಲೆ ಈ ವಿಚಾರ ಪ್ರಭಾವ ಬೀರಿದ್ದು, ಜಶ್ವಂತ್‌ ಅವರು ಟಾಸ್ಕ್‌ನಲ್ಲಿ ಗಮನ ಕೊಡು ಎಂತಲೂ ಹೇಳಿದ್ದರು. ಆರ್ಯವರ್ಧನ್‌ ಗುರೂಜಿ ಅವರು ಟಾಸ್ಕ್‌ಗಳನ್ನು ನಿಭಾಯಿಸಿದ್ದು, ರಾಕೇಶ್‌ ಅಡುಗೆ ವಿಚಾರದಲ್ಲಿ ನೆರವಾಗಿದ್ದರು. ಟಾಸ್ಕ್‌ ವಿಚಾರಗಳಲ್ಲಿ ಸೈ ಎನಿಸಿಕೊಂಡಿರುವ ಸೋಮಣ್ಣ ಮಾಚಿಮಾಡ ಕೆಲವು ಬಾರಿ ಮಾತಿನ ಸಮರಗಳಿಗೂ ಸಾಕ್ಷಿಯಾಗುತ್ತಿದ್ದಾರೆ. ಇದೀಗ ನಾಮಿನೇಟ್‌ ಆದವರಲ್ಲಿ ಈ ವಾರ ಯಾರು ಮನೆಯಿಂದ ಹೊರಗೆ ಬರಲಿದ್ದಾರೆ ಎಂಬುದು ಕಿಚ್ಚನ ವೀಕೆಂಡ್‌ ಪಂಚಾಯಿತಿಯಲ್ಲಿ ರಿವೀಲ್‌ ಆಗಲಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್‌ ಮನೇಲಿ ಕಿಚ್ಚನದೇ ಧ್ಯಾನ: ಅಡುಗೆಯಲ್ಲಿ ಸೈ ಎನಿಸಿಕೊಳ್ತಾರಾ ರಾಕೇಶ್‌?

Exit mobile version