Site icon Vistara News

Bigg Boss Kannada | ಲೂಸ್‌ ಟಾಕ್‌, ಅಪ್ಪುಗೆ; ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಹೊರಗೆ?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಒಟಿಟಿಯಲ್ಲಿ (Bigg Boss Kannada) ಈ ವಾರಾಂತ್ಯದಲ್ಲಿ ʻವಾರದ ಕಥೆ ಕಿಚ್ಚನ ಜೊತೆʼ ವೀಕೆಂಡ್‌ ಪಂಚಾಯಿತಿಯಲ್ಲಿ ಯಾರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ವಾರ ಸೋಮಣ್ಣ ಮಾಚಿ ಮಾಡ, ಉದಯ್‌ ಸೂರ್ಯ ,ಚೈತ್ರಾ, ರೂಪೇಶ್‌ ಶೆಟ್ಟಿ ಮತ್ತು ಅಕ್ಷತಾ ಕುಕ್ಕಿ, ಜಯಶ್ರೀ, ಆರ್ಯವರ್ಧನ್‌ ಗುರೂಜಿ ನಾಮಿನೇಟ್‌ ಆಗಿದ್ದರೂ ಉದಯ್‌ ಸೂರ್ಯ ಎಲಿಮಿನೇಟ್‌ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಉದಯ್‌ ಸೂರ್ಯ ಅವರು ಹೊರಗೆ ಹೋದರೆ ಚೆನ್ನ ಎಂದು ಕಮೆಂಟ್‌ ಮೂಲಕ ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲ ವಾರ ಬಿಗ್‌ ಬಾಸ್‌ಗೆ ಎಂಟ್ರಿ ನೀಡಿದ ಉದಯ್‌ ಸೂರ್ಯ ಅವರು ಕೇವಲ ಆರ್ಯವರ್ಧನ್‌ ಗುರೂಜಿ ಅವರೊಂದಿಗೆ ಮಾತ್ರ ಜಗಳ ಮಾಡುತ್ತಿದ್ದರು. ಹೊರತಾಗಿ ಟಾಸ್ಕ್‌ನಲ್ಲಿ ಅಷ್ಟಾಗಿ ಆಡುತ್ತಿರಲಿಲ್ಲ.

ಇದನ್ನೂ ಓದಿ | Bigg Boss kannada | ರೂಪೇಶ್‌ಗೆ ಮೀನೂಟ, ಬಿಗ್‌ಬಾಸ್‌ನ ಈ ವಾರದ ಬೆಸ್ಟ್‌ ಪೋಟೋಗಳು ಇಲ್ಲಿವೆ!

ಹುಡುಗಿಯರಿಗೆ ಕಿರಿಕ್‌

ಉದಯ್‌ ಸೂರ್ಯ ಅವರು ಅಕ್ಷತಾ ಅವರನ್ನು ಫ್ರೆಂಡ್ಲಿ ಆಗಿ ತಬ್ಬಿಕೊಂಡಿದ್ದರು. ಇದು ಅಕ್ಷತಾ ಅವರಿಗೆ ಕಿರಿಕಿರಿ ಆಗಿ ʻಆ ರೀತಿ ತಬ್ಬಿಕೊಳ್ಳಬೇಡಿʼ ಎಂತಲೂ ಹೇಳಿದ್ದರು. ನಂತರದಲ್ಲಿ ಸಾನ್ಯ ಕೂಡ ಈ ವಿಚಾರವಾಗಿ ನಂದಿನಿ ಜತೆ ಮಾತನಾಡಿಕೊಂಡಿದ್ದರು. ʻಉದಯ್‌ ಅವರು ಕಿವಿ ಹತ್ತಿರ ಬಂದು ಮಾತನಾಡುವುದು, ತಬ್ಬಿಕೊಳ್ಳುವುದು ಇಷ್ಟ ಆಗಲ್ಲ ಎಂದುʼ ಸಾನ್ಯ ಹೇಳಿದ್ದರು. ನಂದಿನಿ ಕೂಡ ಈ ವಿಚಾರಕ್ಕೆ ʻಜಶ್ವಂತ್‌ ಎದುರುಗಡೆ ನನ್ನನ್ನು ತಬ್ಬಿಕೊಳ್ಳಲು ಬರುವುದು ಅಷ್ಟೇನೂ ಸರಿ ಎನಿಸುವುದಿಲ್ಲʼ ಎಂದು ಹೇಳಿಕೊಂಡಿದ್ದರು.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಾಕೊಂಡ್ರು ಉದಯ್‌

ಉದಯ್‌ ಅವರು ಜಶ್ವಂತ್‌ ಮತ್ತು ಸಾನ್ಯ, ನಂದಿನಿ ಮತ್ತು ರೂಪೇಶ್‌ ಬಗ್ಗೆ ಹಲವಾರು ಗಾಸಿಪ್‌ಗಳನ್ನು ಚೈತ್ರಾ ಮುಂದೆ ಮಾತನಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ನಂದಿನಿ ಇಲ್ಲದೆ ಇರುವಾಗ ಜಶ್ವಂತ್‌ ಸಾನ್ಯಳನ್ನು ಬಲೆಗೆ ಬೀಳಿಸಿಕೊಳ್ಳಲು ನೋಡುತ್ತಾನೆ. ಅಲ್ಲದೆ, ರೂಪೇಶ್‌ ಮತ್ತು ಸಾನ್ಯ ನಡುವೆ ಎನೋ ಇದೆ ಎಂತಲೂ ಹೇಳಿದ್ದಾರೆ. ಜಶ್ವಂತ್‌ ಹಾಗೂ ನಂದಿನಿ ಅವರಿಬ್ಬರನ್ನೇ ಬಿಟ್ಟರೆ ಕಥೆ ಮುಗಿಯಿತು. ಹೇಳಿ-ಕೇಳಿ ಪ್ರೇಮಿಗಳು ಬೇರೆ. ಕ್ಯಾಮರಾ ಇದ್ದಿದ್ದಕ್ಕೆ ಬಚಾವ್‌ ಎಂದು ವ್ಯಂಗ್ಯ ಆಡಿದ್ದರು. ಬಳಿಕ ಈ ವಿಚಾರ ಗೊತ್ತಾಗಿ ಸಾನ್ಯ, ನಂದಿನಿ ಎಲ್ಲರ ಎದುರೇ ಪ್ರಶ್ನೆ ಮಾಡಿ ದೊಡ್ಡ ಗಲಾಟೆ ಮಾಡಿದ್ದರು. ಆಗ ಉದಯ್‌ ತಾವು ಆಡಿದ್ದ ಮಾತನ್ನು ಒಪ್ಪಿಕೊಳ್ಳುವ ಮೂಲಕ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು.

ಚೈತ್ರಾ ಮತ್ತು ಉದಯ್‌ ಸೂರ್ಯ ನಡುವೆ ಒಳ ಉಡುಪಿನ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಎಲ್ಲ ವಿಚಾರಕ್ಕೆ ಉದಯ್‌ ಅವರ ನಡೆ ಮನೆಯ ಸದಸ್ಯರಿಗೆ ಕಿರಿಕಿರಿ ಉಂಟಾಗಿದ್ದು ನಾಮಿನೇಟ್‌ ಮಾಡಿದ್ದಾರೆ.

ಈ ವಾರ ಉದಯ್‌ ಅವರೇ ಮನೆಯಿಂದ ಹೊರಗೆ ಹೋಗಬೇಕು. ಟಾಸ್ಕ್‌ನಲ್ಲಿಯೂ ಚೆನ್ನಾಗಿ ಆಡುತ್ತಿಲ್ಲ. ಜತೆಗೆ ಲೂಸ್‌ ಟಾಕ್‌ ಮಾಡುತ್ತಾರೆ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಹೇಳುತ್ತಿದ್ದಾರೆ. ಶನಿವಾರ ಸಂಜೆ ಸಂಚಿಕೆ ಪ್ರಸಾರವಾಗಲಿದ್ದು, ಯಾರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಆರ್ಯವರ್ಧನ್‌, ಉದಯ್‌ ಜಟಾಪಟಿ: ಬೀಸೋ ದೊಣ್ಣೆಯಿಂದ ಯಾರು ಪಾರು?

Exit mobile version