Site icon Vistara News

Bigg Boss Kannada | ತಾಯಿಯನ್ನು ನೆನೆದು ಭಾವುಕರಾದ ವಿನೋದ್‌, ರೂಪೇಶ್‌ ಶೆಟ್ಟಿ : ಕಾವ್ಯಶ್ರೀ ಹೇಳಿದ್ದೇ ಬೇರೆ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಐದನೇ ದಿನ ಸ್ಪರ್ಧಿಗಳು ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ಅದರಲ್ಲಿಯೂ ರೂಪೇಶ್‌ ಶೆಟ್ಟಿ ಮತ್ತು ವಿನೋದ್‌ ಗೊಬ್ಬರಗಾಲ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಕಣ್ಣೀರು ಸುರಿಸಿದ್ದಾರೆ. ಅರುಣ್‌ ಸಾಗರ್‌ ತಾಯಿಯ ಹಾಡಿಗೆ ಸ್ಪರ್ಧಿಗಳು ಒಂದು ಕ್ಷಣ ತಾಯಿಯನ್ನು ನೆನೆದು ಬೇಸರ ವ್ಯಕ್ತ ಪಡಿಸಿದರು.

ʻʻತಾಯಿ ಎಂದರೆ ಕಷ್ಟಕ್ಕೆ ನೆರವಾಗುವವಳು. ಸೋತಿದ್ದರೆ ಬೆಂಗಾವಲಾಗಿ ಆಗಿ ನಿಲ್ಲುವವಳುʼʼ ಎಂದು ವಿನೋದ್‌ ಗೊಬ್ಬರಗಾಲ ಭಾವುಕರಾದರು. ಹಾಗೂ ʻʻನಾನು ತಾಯಿಗೆ ಸಮಯ ಕೊಟ್ಟಿಲ್ಲ. ಈಗ ತುಂಬಾ ನೆನಪಾಗುತ್ತಿದ್ದಾಳೆ. ಒಮ್ಮೆ ಕೆಲಸ ನನ್ನ ಬಳಿ ಇಲ್ಲದೇ ಇದ್ದಾಗ, ನಾನು ನಿನ್ನನ್ನು ದುಡಿದು ಸಾಕುತ್ತೇನೆ ಎಂದಿದ್ದಳು. ಅವತ್ತೇ ನಿರ್ಧಾರ ಮಾಡಿದೆ. ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು. ಇವತ್ತು ಬಿಗ್‌ ಬಾಸ್‌ ನನಗೆ ಒಂದು ವೇದಿಕೆಯನ್ನು ಕೊಟ್ಟರು. ನನ್ನ ತಾಯಿಗೆ ಮೊಬೈಲ್‌ ಬಳಸಲು ಗೊತ್ತಿಲ್ಲ. ಈ ನೆಪದಲ್ಲಾದರೂ ನನ್ನ ತಾಯಿಗೆ ನಾನು ಕ್ಷಮೆ ಕೇಳುತ್ತೇನೆʼʼ ಎಂದು ವಿನೋದ್‌ ಗೊಬ್ಬರಗಾಲ ಹೇಳಿದರು.

ಇದನ್ನೂ ಓದಿ | Bigg Boss Kannada | ಈ ವಾರದ ಕೊನೆಯ ಟಾಸ್ಕ್‌ : ಬುದ್ಧಿಶಕ್ತಿ, ಶಕ್ತಿ ಪ್ರದರ್ಶನದ ನಡುವೆ ವಿಜೇತರಾದವರು ಯಾರು?

ಇನ್ನೊಂದು ಕಡೆ ರೂಪೇಶ್‌ ಶೆಟ್ಟಿ ಸಣ್ಣ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಸ್ಥಿತಿಯನ್ನು ನೆನದು ಅತ್ತರು. ಕಾವ್ಯಶ್ರೀ ಕೂಡ, ಚಿಕ್ಕ ವಯಸ್ಸಿನಲ್ಲಿ ತನ್ನ ತಂದೆ ಹೆಣ್ಣು ಮಕ್ಕಳು ಎಂಬ ಕಾರಣಕ್ಕೆ ನಮ್ನನ್ನು ತುಚ್ಚವಾಗಿ ನೋಡುತ್ತಿದ್ದ ಪರಿ ಹಾಗೂ ಆ ರೀತಿಯನ್ನು ವ್ಯಕ್ತ ಪಡಿಸಿ ಕಣ್ಣಿರು ಹಾಕಿದ್ದಾರೆ. ಅರುಣ್‌ ಸಾಗರ್‌ ಬಂದು ಕಾವ್ಯಶ್ರೀ ಅನ್ನು ಸಮಾಧಾನ ಮಾಡಿ ʻʻಏನೇ ತೊಂದರೆ ಇದ್ದರೂ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅತ್ತು ಸುಮ್ಮನಾಗ ಬೇಕುʼʼ ಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ಅರುಣ್‌ ಸಾಗರ್‌ ವರ್ತನೆಗೆ ಸ್ಪರ್ಧಿಗಳ ಅಸಮಾಧಾನ; ನಡೆದದ್ದಾದರೂ ಏನು?

Exit mobile version