Site icon Vistara News

Bigg Boss Kannada | ಪ್ರಾಸದಿಂದ ಮಾತು ಮಾತಿನ ಚಕಮಕಿ : ವಿನೋದ್‌-ಕಾವ್ಯಶ್ರೀ ನಡುವೆ ವಾರ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಕ್ಯಾಪ್ಟನ್‌ ಆಗಿ ವಿನೋದ್‌ ಗೊಬ್ಬರಗಾಲ ಆಯ್ಕೆಯಾಗಿದ್ದಾರೆ. ಆದರೆ ವಿನೋದ್‌ ಮತ್ತು ಕಾವ್ಯಶ್ರೀ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವೆ ಮಾತು ತಾರಕಕ್ಕೆ ಏರಿದ್ದು, ಅರುಣ್‌ ಸಾಗರ್‌ ಇಬ್ಬರನ್ನೂ ಸುಮ್ಮನಾಗಿಸಿದ್ದಾರೆ.

ಪ್ರಾಸದ ಹಾಡಿಗೆ ಕಾವ್ಯಶ್ರೀ ಮನೆಯವರ ಮುಂದೆ ವಿನೋದ್‌ ಗೊಬ್ಬರಗಾಲಗೆ ತಮಾಷೆ ಮಾಡಿದ್ದಾರೆ. ʻʻಒಳ್ಳೆಯವನಿಗೆ ಕೊಡ್ತೀನಿ ಬಾಳು, ನೀನು (ವಿನೋದ್‌) ಬಿಡೋದು ಓಳುʼʼ ಎಂದಿದ್ದಾರೆ, ಇದಕ್ಕೆ ಪ್ರತಿಯಾಗಿ ವಿನೋದ್‌ ʻʻನಿನ್ನನ್ನು (ಕಾವ್ಯಶ್ರೀ) ಕಟ್ಟಿಕೊಂಡವನ ಬಾಳು ಗೋಳುʼʼ ಎಂದಿದ್ದಾರೆ. ಹೀಗೆ ಮಾತು ತಮಾಷೆಯಾಗಿ ಮುಂದುವರಿದಿತ್ತು. ನಂತರ ಅರುಣ್‌ ಸಾಗರ್‌, ರೂಪೇಶ್‌, ವಿನೋದ್‌ ನಡುವೆ ಸಣ್ಣ ಫೋನ್‌ ಕಾಲ್‌ ಸ್ಕಿಟ್‌ ಆಗುತ್ತಿತ್ತು. ವಿನೋದ್‌ ಅವರು ಕಾವ್ಯಶ್ರೀಗೆ ಆಂಟಿ ಎಂದಿದ್ದಾರೆ. ಆಂಟಿ ಎಂಬ ವಿಚಾರಕ್ಕೆ ಕಾವ್ಯಶ್ರೀ ಕೋಪ ನೆತ್ತಿಗೆ ಏರಿದೆ. ಕಾವ್ಯಶ್ರೀ ಮಾತನಾಡಿ ʻʻವಿನೋದ್‌ ನಾನು ನಿನಗೆ ಅಣ್ಣ ಎಂದರೆ ಏನು ಸಮಸ್ಯೆ? ನೀನು ಆಂಟಿ ಎಂದಿದ್ದು ಸ್ವಲ್ಪವೂ ಸರಿಯಿರಲಿಲ್ಲ. ನನ್ನ ಜತೆ ಮಾತನಾಡಬೇಡ ಎಂದು ಕೂಗಾಡಿದ್ದಾರೆʼ. ಅದಕ್ಕೆ ಪ್ರತಿಯಾಗಿ ವಿನೋದ್‌ ಕೂಡ ಕಿರುಚಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ಮೊದಲ ವಾರ ಉತ್ತಮ ಪ್ರದರ್ಶನಕಾರ ಅರುಣ್‌ ಸಾಗರ್‌ : ಕಳಪೆ ಆದವರು?

ಕಳಪೆ ಮತ್ತು ಉತ್ತಮ ಪ್ರದರ್ಶನ ವಿಚಾರವಾಗಿಯೂ ವಿನೋದ್‌ ಕಳಪೆಯನ್ನು ಕಾವ್ಯಶ್ರಿಗೆ ನೀಡಿದರು.ʻʻಕಾವ್ಯಶ್ರೀ ಆಟದಲ್ಲಿ ಉತ್ತಮ ಪ್ರದರ್ಶನ ತೋರಿಸದೇ ಇದ್ದುದಕ್ಕೆ ನಾನು ಕಳಪೆ ಕೊಟ್ಟಿದ್ದೇನೆ. ಆಂಟಿ ಎಂಬ ವಿಚಾರಕ್ಕೆ ಅಲ್ಲʼʼ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇದಕ್ಕೆ ಕಾವ್ಯಶ್ರೀ ಸಮ್ಮತಿಸಿದರು.

ಇದನ್ನೂ ಓದಿ | Bigg Boss Kannada | ತಾಯಿಯನ್ನು ನೆನೆದು ಭಾವುಕರಾದ ವಿನೋದ್‌, ರೂಪೇಶ್‌ ಶೆಟ್ಟಿ : ಕಾವ್ಯಶ್ರೀ ಹೇಳಿದ್ದೇ ಬೇರೆ!

Exit mobile version