Site icon Vistara News

BBK SEASON 10: ಸುದೀಪ್‌ ಬಗ್ಗೆ ಆಡಿದ ಮಾತಿಗೆ ಕ್ಷಮೆ ಕೇಳಿದ ರಕ್ಷಕ್‌ ಬುಲೆಟ್‌!

Bullet Rakshak Sorry For Kichcha Sudeep After Controversy

ಬೆಂಗಳೂರು: ʻಬಿಗ್‌ಬಾಸ್ʼ ಕನ್ನಡ ಸೀಸನ್‌ 10ರಲ್ಲಿ (BBK SEASON 10) ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಒಂದು ತಿಂಗಳ ಕಾಲ ಬಿಗ್‌ಬಾಸ್‌ನಲ್ಲಿದ್ದು ಎಲಿಮಿನೇಟ್‌ ಆಗಿಯೂ ಹೊರಬಂದಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ʻʻಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆʼʼಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್‌ ಫ್ಯಾನ್ಸ್‌ ಕೂಡ ರಕ್ಷಕ್‌ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅದರಂತೆ ಇದೀಗ ರಕ್ಷಕ್‌ ಕ್ಷಮೆ ಕೇಳಿದ್ದಾರೆ.

ವಿಡಿಯೊ ಮೂಲಕ ರಕ್ಷಕ್‌ ಮಾತನಾಡಿ ʻಎರಡು ದಿನಗಳಿಂದ ಒಂದು ವಿಡಿಯೊ ಹರಿದಾಡ್ತಿದೆ. ಅಂದ್ರೆ, ನಾನು ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿದೆ ಎಂದು. ನಾನು ಹೇಳಿದ್ದು ಆ ಕಾಂಟಾಸ್ಟ್‌ನಲ್ಲಿ ಅಲ್ಲ. ಇಡೀ ಸಂದರ್ಶನ ನೋಡಿದರೆ ನಿಮಗೆ ತಿಳಿಯುತ್ತದೆ. ಏನಕ್ಕೆ ಯಾವ ಲೈನ್‌ ಹೇಳಿದೆ ಎಂದು ಗೊತ್ತಾಗುತ್ತದೆ. ಬೇಜಾರಾಗಿದ್ದರೆ, ಎಲ್ಲರಿಗೂ ಸಾರಿ. ಸುದೀಪ್‌ ಅಣ್ಣನಿಗೂ ಮತ್ತು ಸುದೀಪ್‌ ಅಣ್ಣನ ಫ್ಯಾನ್ಸ್‌ಗೂ. ತುಂಬ ಗೌರವ ಇದೆ. ಸುದೀಪಣ್ಣನಿಗೆ ನಮ್ಮ ತಂದೆ ಮೇಲೆ ಅಪಾರ ಪ್ರೀತಿ ಇತ್ತು. ಅವರ ಮೇಲೆ ನನಗೆ ಅಪಾರ ಗೌರವ ಇದೆʼʼಎಂದು ಕ್ಷಮೆ ಕೇಳಿದ್ದಾರೆ.

ರಕ್ಷಕ್‌ ಹೇಳಿದ್ದೇನು?

ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ರಕ್ಷಕ್‌ ಅವರು ಮಾತನಾಡಿʻʻ ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು.

ಇದನ್ನೂ ಓದಿ: BBK SEASON 10:  ಕಾರ್ತಿಕ್​ಗೆ ಹೊರಗೆ ಹುಡುಗಿ ಇದ್ದಾಳೆ; ಸ್ನೇಹಿತ್ ಮುಂದೆ ಕಣ್ಣೀರು ಸುರಿಸಿದ ನಮ್ರತಾ!

ರಕ್ಷಕ್‌ ಕಮೆಂಟ್‌ ಆಫ್‌ ಮಾಡಿ ಕ್ಷಮೆ ಕೇಳಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ರಕ್ಷಕ್‌ ಕೂಡ ಮನೆಗೆ ಎಂಟ್ರಿ ಕೊಟ್ಟಿದ್ದರು. ಮುಂಚಿನಿಂದಲೂ ಡ್ರೋನ್‌ ಪ್ರತಾಪ್‌ ಕತೆ ಕಿರಿಕ್‌ ಮಾಡುತ್ತಲೇ ಇದ್ದಿದ್ದರು. ಸದ್ಯ ಮನೆಗೆ ಮತ್ತೆ ಬಂದಾಗಲೂ ಕೂಡ ಪ್ರತಾಪ್‌ ಜತೆ ಕಿರಿಕ್‌ ಮಾಡಿಕೊಂಡಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version