Site icon Vistara News

BBK SEASON 10: ಹೇಗೆ ಮೆರೆಸಿದ್ರೋ ಹಾಗೇ ತಲ್‌ತಲೆ ಮೇಲೆ ಹೊಡೆದರು; ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್‌!

Drone prathap

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ 8ನೇ (BBK SEASON 10) ವಾರ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಚಟುವಿಟಿಕೆವೊಂದನ್ನು ನೀಡಿದ್ದರು. ಸ್ಪರ್ಧಿಗಳು ತಮ್ಮ ತಮ್ಮ ಜೀವನದಲ್ಲಿ ಎದುರಿಸಿದ ಗುಣಪಡಿಸಲು ಸಾಧ್ಯವಾಗದ ನೋವಿನ ಘಟನೆಗಳನ್ನು ಹಂಚಿಕೊಳ್ಳಬೇಕಿತ್ತು. ಈ ವೇಳೆ ಪ್ರತಾಪ್‌ ವಿವಾದದಲ್ಲಿ ಸಿಲುಕಿದಾಗ ಏನೆಲ್ಲ ಕಷ್ಟಗಳನ್ನು ಎದುರಿಸಿದೆ. ಹಾಗೇ ʻಮೆಂಟಲಿ ಅನ್‌ಸ್ಟೇಬಲ್‌ (Mentally Unstable) ಎಂದು ಬರೆದುಕೊಡು’ ಎಂದು ತಲ್‌ ತಲೆ ಮೇಲೆ ಹೊಡೆದರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಪ್ರತಾಪ್‌ ಮಾತನಾಡಿ ʻʻನನ್ನ ಜೀವನದಲ್ಲಿ ಏನು ಆಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾನು ದೇಶ ಬಿಟ್ಟು ಹೊರಗೆ ಹೋಗಿದ್ದೆ. ನನ್ನ ಜತೆ ಇದ್ದ ಬ್ಲಾಗರ್ಸ್‌ ಕೆಲಸ ಮಾಡಿದವರು. ನನ್ನ ಬಗ್ಗೆ ಒಂದಷ್ಟು ಕಥೆಗಳನ್ನ ಕ್ರಿಯೇಟ್ ಮಾಡಿದರು. ಡ್ರೋನ್ ಪ್ರತಾಪ್ ದುಡ್ಡು ತಗೊಂಡಿದ್ದಾನೆ ಎಂದು ಮೂರು ವ್ಯಕ್ತಿಗಳು ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿದರು. ಜೀವನದಲ್ಲಿ ಒಂದೆರಡು ಮಾತುಗಳನ್ನ ಬಾಯ್ತಪ್ಪಿ ಹೇಳಿದ್ದೀನಿ. ಸಾಕಷ್ಟು ಅನುಭವಿಸಿದೆ. ನಾನು ಸರಿಯಾಗಿದ್ದರೂ ಮಾತನಾಡಲು ಆಗ್ತಾ ಇರಲಿಲ್ಲʼʼ ಎಂದರು.

ʻʻಇದನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಂಡು ಇಲ್ಲಿಗೆ ಬಂದ್ಮೇಲೆ ಹೆಂಗೋ ಪರಿಚಯ ಆಯ್ತು. ಹೋಗಿ ಮಾತನಾಡಿಸಿದೆ. ಅಲ್ಲಿಂದ ಕರ್ಕೊಂಡ್ ಹೋಗಿ ನನ್ನನ್ನ ಯಾರಿಗೋ ಪರಿಚಯ ಮಾಡಿಸಿದರು. ಅಲ್ಲಿಂದ ನಾನು ಮೈಸೂರಿಗೆ ಹೊರಟು ಬಂದೆ. ಆಗ ಅವರು ನನಗೆ 2 ಸಾವಿರ ರೂಪಾಯಿ ನೋಟು ಕೊಟ್ಟರು. ಅದು ಬಿಟ್ಟರೆ ನಾನು ಒಂದು ರೂಪಾಯಿ ಹಣ ತಗೊಂಡಿಲ್ಲʼʼಎಂದರು.

ʻʻಚಿಕ್ಕಮಗಳೂರಿನಲ್ಲೇ ಇದ್ದೆ. ತಂದೆ ಕರ್ಕೊಂಡು ಹೋಗಿ ಕ್ವಾರಂಟೈನ್‌ ಕೇಸ್‌ಗೆ ಪೊಲೀಸ್‌ ಸ್ಟೇಷನ್‌ನಲ್ಲಿ ಇರಿಸಿದರು. ಶೂಟ್‌ ಅಟ್‌ ಸೈಟ್‌ ಆರ್ಡರ್‌ ಕೊಟ್ಟಿದ್ದಾರೆ ಎಂದು ಊರೆಲ್ಲ ಸುದ್ದಿಯಾಯ್ತು. ನನ್ನ ಅಪ್ಪ – ಅಮ್ಮ ಹೊರಗಡೆ ಬಂದಿಲ್ಲ. ನನ್ನ ತಾಯಿ ಬಾಗಿಲು ಹಾಕಿಕೊಂಡು ತೋಟದ ಕಡೆ ಓಡಿದ್ರು. ಊಟದಲ್ಲಿ ವಿಷ ಹಾಕಿ ಸಾಯಿಸಬೇಕಿತ್ತು.. ಯಾಕೆ ಬಿಟ್ಟಿದ್ದೀರಾ ಇನ್ನೂ ಎಂದು ಸಂಬಂಧಿಕರು ಅಂದರು. ಚಿಕ್ಕಮಗಳೂರಿನಿಂದ ಬಂದಮೇಲೆ ಬೆಂಗಳೂರಿನ ಶಾಂತಿನಗರದಲ್ಲಿರುವ ಹೋಟೆಲ್‌ನಲ್ಲಿ ನನ್ನನ್ನ ಇರಿಸಿದರು. ಅಲ್ಲಿ ಸ್ಕ್ರೀನ್ ಓಪನ್ ಮಾಡಿದರೆ ಸುತ್ತ ಕ್ಯಾಮರಾಗಳು.. ಯಾವ ಪ್ರತಾಪ್‌ನ ಮೆರೆಸಿದ್ರೋ, ಹೋಟೆಲ್ ಸುತ್ತ ಪೊಲೀಸ್ ರಿಸರ್ವ್. ಆಮೇಲೆ ಆ ನ್ಯೂಸ್‌ ಜತೆ ಮಾತನಾಡು, ಈ ನ್ಯೂಸ್‌ ಜತೆ ಮಾತನಾಡು, ಆ ಪೇಪರ್‌ನವರ ಬಳಿ ಮಾತನಾಡು.. ಎಲ್ಲವನ್ನೂ ಒಪ್ಪಿಕೋ ಎಂದು ಕೊಡಬಾರದ ಹಿಂಸೆ ಕೊಟ್ಟರು. ನಿನ್ನ ತಂಗಿಯನ್ನ ಯಾರು ಮದುವೆ ಆಗ್ತಾರೆ? ನಿನ್ನ ತಂಗಿಗೆ ಮದುವೆಯಾಗದ ಹಾಗೆ ಮಾಡ್ತೀವಿ. ನಿನ್ನ ಅಮ್ಮ ಹುಚ್ಚಿ ತರಹ ರೋಡ್‌ನಲ್ಲಿ ಅಲೆಯಬೇಕು. ನಿನ್ನ ತಂದೆಗೆ ಯಾರೂ ಇರಬಾರದು. ಯಾರೂ ಸಹಾಯ ಮಾಡಬಾರದು ಎಂದು ಹೇಳಿದ್ದರುʼʼಎನ್ನುವಾಗ ಬಿಕ್ಕಿ ಬಿಕ್ಕಿ ಅತ್ತರು.

ಇದನ್ನೂ ಓದಿ: BBK SEASON 10: ʻಬೆಂಕಿʼ ತನಿಷಾರನ್ನ ಮಿಸ್‌ ಮಾಡ್ಕೋತ್ತಿದ್ದಾರಂತೆ ವರ್ತೂರ್‌ ಸಂತೋಷ್‌!

‘’ಮೆಂಟಲ್ ಆಸ್ಪತ್ರೆಯಿಂದ ಡಾಕ್ಟರ್‌ನ ಕರ್ಕೊಂಡ್ ಬಂದರು. ಮೆಂಟಲಿ ಅನ್‌ಸ್ಟೇಬಲ್ ಅಂತ ಬರೆದುಕೊಡು ಎಂದು ಹಿಂಸೆ ಕೊಟ್ಟರು. ನನ್ನ ಪಾಸ್‌ಪೋರ್ಟ್‌, ಐಪ್ಯಾಡ್‌ ಕಿತ್ತುಕೊಂಡರು. ಎಲ್ಲ ಕಿತ್ತುಕೊಂಡು.. ಮೆಂಟಲಿ ಅನ್‌ಸ್ಟೇಬಲ್ ಬರಿ ಎಂದು ಸ್ಟೇಟ್‌ಮೆಂಟ್‌ ರೆಡಿ ಮಾಡಿಸಿದರು. ಕೊನೆಗೆ ನಾನು ಯಾವುದಕ್ಕೂ ಸಹಿ ಹಾಕಲಿಲ್ಲ. ನನ್ನ ತಂದೆ – ತಾಯಿ ಜತೆಗೆ ಮಾತನಾಡಿದರು. ಮೆಂಟಲಿ ಅನ್‌ಸ್ಬೇಬಲ್ ಎಂದು ಬರೆದುಕೊಡು ಎಂದು ತಲೆ ಮೇಲೆ ಹೊಡೆಯುತ್ತಿದ್ದರು ನನಗೆ’’ ಎಂದು ಅತ್ತರು.

ʻʻನಾನು ಸಣ್ಣದಾಗಿ ಮಾಡಿರೋದು ಕೆಲಸ. ನನ್ನ ಪಾಡಿಗೆ ಮಾಡಿಕೊಂಡು ಇರಲು ಬಿಡಿ. ನಿಮ್ಮ ಸಪೋರ್ಟ್ ಇಲ್ಲ ಅಂದರೂ ಪರವಾಗಿಲ್ಲ. ಪ್ರೀತಿ ಕೊಡವರು ಇದ್ದಾರೆ. ನಾನು ಯಾರು ಹೆದರುವುದಿಲ್ಲ. ಇಲ್ಲದಿರುವುದನ್ನು ಕಥೆ ಕಟ್ಟ ಬೇಡಿ. ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಟ ನೋಡಬೇಡಿʼʼಎಂದು ಬೇಸರಗೊಂಡರು ಪ್ರತಾಪ್‌.

ಪ್ರೇಕ್ಷಕರು ಕೂಡ ಪ್ರತಾಪ್‌ ಅವರಿಗೆ ಸಾಥ್‌ ಕೊಟ್ಟಿದ್ದಾರೆ. ʻʻಗುರು ನಿನಿಗೆ ಯಾರ್ ವೋಟ್ ಹಾಕ್ತಾರೋ ಬಿಡ್ತಾರೋ ನಂಗ್ ಗೊತ್ತಿಲ್ಲ ಕಣಯ್ಯಾ. ನೀನು ಬಿಗ್‌ ಬಾಸ್‌ನಲ್ಲಿ ಇರೋವರೆಗೂ ನನ್ನ ವೋಟ್‌ ನಿನಗೆʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻಎಲ್ಲದಕ್ಕೂ ಕಾಲನೇ ಉತ್ತರ ಕೊಡುತ್ತೆ. ನಾವು ಮಾಡೋ ಕೆಲಸ ಶ್ರದ್ಧೆಯಿಂದ ಮಾಡಬೇಕು. ಪ್ರತಿಫಲ ಸಿಕ್ಕೆ ಸಿಗುತ್ತೆʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version