Site icon Vistara News

BBK SEASON 10: ಪ್ರಾಣ ಸ್ನೇಹಿತರು ಮೂರು ದಿಕ್ಕುಗಳ ಪಾಲು; ಸಂಗೀತಾ ಹಾರ್ಟ್‌ ಬ್ರೇಕ್‌!

bbk 10 contestant

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಈ ಸೀಸನ್‌ (BBK SEASON 10) ಆರಂಭದಿಂದಲೂ ಒಂದು ಮನ ಮೂರು ದೇಹ ಅನ್ನುವಂತಿದ್ದವರು ಸಂಗೀತಾ-ಕಾರ್ತಿಕ್ ಮತ್ತು ತನಿಷಾ. ಹಲವು ಸಂಕಷ್ಟದ ಸಂದರ್ಭಗಳಲ್ಲಿಯೂ ಮೂವರೂ ಒಬ್ಬರಿಗೊಬ್ಬರು ಹೆಗಲೆಣೆಯಾಗಿ ನಿಂತುಕೊಂಡಿದ್ದರು. ಆದರೆ ನಾಮಿನೇಶನ್‌ ಪ್ರಕ್ರಿಯೆಯಿಂದಾಗಿ ಸಂಗೀತಾ ಅವರು ಕಾರ್ತಿಕ್‌ ಹಾಗೂ ತನಿಷಾ ಮೇಲೆ ಮುನಿಸಿಕೊಂಡಿದ್ದಾರೆ. ಕಾರ್ತಿಕ್ ಮತ್ತು ತನಿಷಾ ತಮ್ಮನ್ನ ಸೇಫ್ ಮಾಡಲಿಲ್ಲ ಎಂಬ ಕಾರಣಕ್ಕೆ ಸಂಗೀತಾ ಶೃಂಗೇರಿ ಬೇಸರಗೊಂಡಿದ್ದಾರೆ.

ಲುಡೋ ಆಟವನ್ನು ಬಿಗ್‌ ಬಾಸ್‌ ನೀಡಿದ್ದರು. ಇದರಲ್ಲಿ ನಮ್ರತಾ, ಸ್ನೇಹಿತ್, ವಿನಯ್ ಒಂದು ತಂಡ, ಇಶಾನಿ, ಸಿರಿ, ನೀತು ಒಂದು ಟೀಂ, ಕಾರ್ತಿಕ್, ಸಂಗೀತಾ, ತನಿಷಾ ಹಾಗೂ ತುಕಾಲಿ ಸಂತು, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಒಂದು ಟೀಂ ಆಗಿ ಆಡಿದ್ದರು. ಈ ವೇಳೆ ಲೂಡೋ ಟಾಸ್ಕ್‌ನಲ್ಲಿ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಅವರು ವರ್ತೂರು ಸಂತೋಷ್ ಅವರ ಜತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ, ತನ್ನನ್ನೇ ಸೇವ್ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದದರೆ ಆದದ್ದೇ ಬೇರೆ! ತನಿಷಾ, ‘ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ’ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ದುಮ್ಮಾನ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಆ ಕ್ಷಣದಲ್ಲಿ ಮಗಿದು ಹೋದಂತೆ ಕಂಡರೂ ಸಂಗೀತಾ ಮನಸ್ಸಲ್ಲಿ ಈ ವಿಷಯ ಬೆಳಯುತ್ತಲೇ ಇತ್ತು.

ಇದನ್ನೂ ಓದಿ: BBK Season 10: ತನಿಷಾ, ಕಾರ್ತಿಕ್ ಜತೆಗಿನ ಫ್ರೆಂಡ್‌ಶಿಪ್‌ ಕಟ್‌ ಮಾಡಿಕೊಂಡ ಸಂಗೀತಾ!

ಆಟದಲ್ಲಿ ಗೆದ್ದ ಸಂಗೀತಾಗೆ ಉಳಿದವರಲ್ಲಿ ಒಬ್ಬರನ್ನು ಸೇಫ್ ಮಾಡುವ ಅವಕಾಶ ಲಭಿಸಿತು. ಆಗ ವರ್ತೂರು ಸಂತೋಷ್ ಅವರನ್ನ ಸಂಗೀತಾ ಸೇಫ್ ಮಾಡಿದರು. ಸೇಫ್ ಮಾಡುವ ಬಗ್ಗೆ ತಮ್ಮ ನಿರ್ಧಾರದ ಬಳಿಕ ಸಂಗೀತಾ ಅವರ ವರ್ತನೆ ಕಂಡು ಕಾರ್ತಿಕ್ ಮತ್ತು ತನಿಷಾ ಬೇಸರಗೊಂಡರು. ನಮ್ರತಾ ಜತೆ ಸಂಗೀತಾ ಈ ಬಗ್ಗೆ ಮಾತನಾಡಿದರು. ನಮ್ರತಾ ಮೊದಲಿಗೆ ʻʻಕಾರ್ತಿಕ್ ಯಾವಾಗಲೂ ನಾಮಿನೇಟ್ ಆಗ್ತಿದ್ರು. ಅವರನ್ನ ಸೇಫ್ ಮಾಡ್ತೀರಾ ಅಂದುಕೊಂಡಿದ್ದೆʼʼ ಎಂದಾಗ ಸಂಗೀತಾ ʻʻಹೌದು.. ಅದನ್ನ ಅಂದುಕೊಂಡಿದ್ದೆ. ಆದರೆ, ನಾನು ಈ ಜಾಗಕ್ಕೆ ಬರಲು ಕಾರಣ ವರ್ತೂರು ಸಂತೋಷ್. ಹೀಗಾಗಿ, ಅವರ ಸಾಲವನ್ನ ನಾನು ತೀರಿಸಿದೆʼʼಎಂದರು.

ಇದನ್ನೂ ಓದಿ; BBK SEASON 10: ವಿನಯ್‌ ಸ್ಟ್ರಾಟಜಿ ವರ್ಕೌಟ್‌ ಆಯ್ತಾ? 8 ಮಂದಿ ನಾಮಿನೇಟ್‌!

ತನಿಷಾ ಜತೆ ಸಂಗೀತಾ ಜಗಳ

ಸಂಗೀತಾ ಅವರು ತನಿಷಾ ಜತೆ ಮಾತನಾಡಿ ʻʻನಾನು ನಿಮ್ಮ ಜಾಗದಲ್ಲಿ ಇದ್ದಿದ್ದರೆ, ನಮ್ಮ ಟೀಮ್‌ನಿಂದ ಹೊರಗೆ ಹೋದವರನ್ನೇ ಸೇಫ್ ಮಾಡುತ್ತಿದ್ದೆ. ಇದು ನನಗೆ ಹರ್ಟ್ ಆಗಿದೆ.ಸಣ್ಣ ವಿಷ್ಯ ಅಲ್ಲ ಇದು. ನನ್ನನ್ನ ನಾಮಿನೇಷನ್‌ನಿಂದ ಸೇಫ್‌ ಮಾಡುವ ಅಧಿಕಾರ ಫ್ರೆಂಡ್ಸ್‌ಗೆ ಸಿಕ್ಕಿತ್ತು. ನನ್ನ ಪರವಾಗಿ ಫ್ರೆಂಡ್ಸ್ ನಿಲ್ಲಲಿಲ್ಲʼʼಎಂದರು. ತನಿಷಾ ಮಾತನಾಡಿ ʻʻನಮಗೆ ಏನು ಬೇಕೋ, ಅದನ್ನ ಮಾಡೋಷ್ಟು ಇಲ್ವಾ ನಮಗೆ?ʼʼಎಂದು ಕೇಳಿದ್ದಾರೆ.

ಕಾರ್ತಿಕ್‌ ಕೂಡ ನಮ್ರತಾ ಜತೆ ಮಾತನಾಡಿ ʻʻನಮ್ಮ ನಿರ್ಧಾರ ತಪ್ಪು ಅಂತ ಅನಿಸಲಿಲ್ಲ. ಆದರೂ ಕೆಲವರು ಬೇಜಾರು ಮಾಡಿಕೊಂಡಿದ್ದಾರೆ.ಎಲ್ಲಾ ವಿಷಯದಲ್ಲೂ ಎಕ್ಸ್‌ಪೆಕ್ಟ್ ಮಾಡೋದು ಇದ್ಯಲ್ಲ.. ಅದು ಸರಿ ಅಲ್ಲʼʼಎಂದಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ


Exit mobile version