Site icon Vistara News

BBK Season 10: ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದಿದ್ದ ಕಿಚ್ಚ; ಹಳೆಯ ಟ್ವೀಟ್‌ ವೈರಲ್‌!

kichcha sudeep

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ನಾಲ್ಕನೇ ವಾರದ ʻವಾರದ ಕಥೆ ಕಿಚ್ಚನ ಜೊತೆʼ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ವಿನಯ್‌ ಅವರಿಗೆ ಬಳೆ ವಿಚಾರವಾಗಿ ಬೆವರು ಇಳಿಸಿದ್ದಾರೆ. ಕಿಚ್ಚ ಬಳೆಗೆ ಒಂದು ವಿಶೇಷ ಗೌರವವನ್ನು ಸಹ ಕೊಟ್ಟಿದ್ದಾರೆ. ‘ಬಳೆ ಬಲಹೀನತೆಯ ಸಂಕೇತ ಅಲ್ಲ, ಅದು ಬಲಶಾಲಿ ಬಳೆ’ ಎಂದು ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ. ಆ ಮೂಲಕ ವಿನಯ್‌ ಗೌಡಗೆ ಕಿಚ್ಚ ಸುದೀಪ್ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕಿಚ್ಚ ಅವರು ಕೆಲವು ವರ್ಷಗಳ ಹಿಂದೆ ಮಾಡಿದ ಟ್ವೀಟ್‌ವೊಂದು ವೈರಲ್‌ ಆಗುತ್ತಿದೆ. ʻʻನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲʼʼಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ಹಾಗಾದ್ರೆ ಕಿಚ್ಚನ ಪ್ರಕಾರ ಬಳೆ ಅಂದರೇನು? ಎಂದು ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ ನೆಟ್ಟಿಗರು.

ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ ಅವರು ಕಾರ್ತಿಕ್‌ ಅವರಿಗೆ ಟಾಸ್ಕ್‌ ಸಂದರ್ಭದಲ್ಲಿ ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದನ್ನು ಸಂಗೀತಾ ಮಾತ್ರ ವಿರೋಧಿಸಿದ್ದರು, ಮತ್ಯಾರೂ ಧ್ವನಿ ಎತ್ತಿರಲಿಲ್ಲ. ಆ ಮೂಲಕ ಬಳೆ ತೊಡುವವರೆಂದರೆ ಅಸಮರ್ಥರು, ಬಲಹೀನರು ಎಂಬರ್ಥದ ಮಾತುಗಳನ್ನು ಆಡಿದ್ದರು. ಬಳೆ ವಿಷಯದಲ್ಲಿ ವಿನಯ್‌ಗೆ ಸಂಗೀತಾ ತಿರುಗೇಟು ಕೊಟ್ಟಿದ್ದರು. ‘ಬಳೆ ಹಾಕೊಂಡಿದ್ದೀನಿ ನೋಡು.. ಬಳೆ.. ಬಳೆ’ ಎಂದಿದ್ದರು ಸಂಗೀತಾ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಯಿತು. ಸುದೀಪ್‌ ಅವರು ಬಗ್ಗೆ ಕೂಡ ಪ್ರೇಕ್ಷಕರು ಅಸಮಾಧಾನಗೊಂಡಿದ್ದರು. ಆದರೀಗ ಕಿಚ್ಚ ಬಳೆಗಳ ಶಬ್ದ ಜೋರಾಗಿಯೇ ಮೊಳಗಲಿ ಎಂದು ವಿನಯ್‌ ಅವರಿಗೆ ತಿರುಗೇಟು ನೀಡಿದ್ದಾರೆ. ಇದರ ಬೆನಲ್ಲೇ ಕಿಚ್ಚನ ಟ್ವೀಟ್‌ ವೈರಲ್‌ ಆಗಿದೆ.

ಇದನ್ನೂ ಓದಿ: BBK Season 10: ಇಡೀ ವಾರ ಕಂಡಿದ್ದು ನಮ್ರತಾ ಕೈಯಲ್ಲಿ ಇರುವ ಚಮಚ ಮಾತ್ರ; ಕಿಚ್ಚ ಸುದೀಪ್‌!

ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ!

ʻʻನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನೂ ಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರʼʼಎಂದು 2019ರ ಸೆ. 20ರಂದು ಟ್ವೀಟ್‌ ಮಾಡಿದ್ದರು. ಇದೀಗ ನೆಟ್ಟಿಗರು ಕಿಚ್ಚ ಅವರು ಈ ರೀತಿ ಟ್ವೀಟ್‌ ಮಾಡುವಾಗ ಅವರ ತಲೆಯಲ್ಲಿ ಏನಿತ್ತು? ಅವರ ಪ್ರಕಾರ ಬಳೆ ಎಂದರೆ ಏನು? ಎಂದು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ.

ಕೆಲವೊಬ್ಬರು ʻʻಈ ಟ್ವೀಟ್‌ ನೋಡಿದರೆ ಅದು ಸುದೀಪ್‌ ಆಗಿ ಹೇಳಿದ್ದು, ನಿನ್ನೆಯ ಸಂಚಿಕೆಯಲ್ಲಿ ನಿರೂಪಕನಾಗಿ ಹೇಳಿದ್ದು, ಮನಷ್ಯನ ಯೋಚನೆಗಳು , ನಂಬಿಕೆಗಳು ಬದಲಾಗಲು ಒಂದು ಕ್ಷಣ ಸಾಕುʼʼಎಂದು ಕಮೆಂಟ್‌ ಮಾಡಿದ್ದಾರೆ.

ವಿನಯ್​ಗೆ ಮಾತಿನ ಚಾಟಿ ಬೀಸಿದ ಸುದೀಪ್!

ಪ್ರತಿ ವಾರ ಕಿಚ್ಚನ ಚಪ್ಪಾಳೆ ಒಂದಲ್ಲ ಒಂದು ಸ್ಪರ್ಧಿಗೆ ಲಭಿಸುತ್ತದೆ. ಆದರೆ ಈ ಬಾರಿ ವಿಶೇಷವಾಗಿತ್ತು. ʻʻಇಡೀ ವಾರ ನೋಡಿ, ಪ್ರತಿಯೊಬ್ಬರ ಮಾತು, ನಡವಳಿಕೆ, ತಾಕತ್ತು, ಮನೋಭಾವ, ಮನಸ್ಸಿನ ಸ್ಥಿತಿ, ಆಟ, ಪಾಠ, ಕಳಪೆ, ಉತ್ತಮ, ಮಾತು.. ಎಲ್ಲಾ ನೋಡಿದ್ಮೇಲೆ.. ಈ ಬಾರಿ ವಿಶೇಷವಾಗಿ ಕಿಚ್ಚನ ಚಪ್ಪಾಳೆ ಕೊಡಬೇಕು ಎಂದು ಅನಿಸಿತುʼʼ ಎಂದರು ಕಿಚ್ಚ ಸುದೀಪ್‌

ಇದನ್ನೂ ಓದಿ: BBK Season 10: ಭಾಗ್ಯಶ್ರಿಗೆ ಮಾತಾಡೋ ಅಧಿಕಾರ ಇಲ್ಲ ಎಂದು ಯಾವ ಮುಠ್ಠಾಳ ಹೇಳಿದ್ದು? ತುಕಾಲಿ, ವಿನಯ್‌ಗೆ ರುಬ್ಬಿದ ಕಿಚ್ಚ!

ವಿನಯ್‌ ಕೂಡ ಸ್ಟೋರ್​ ರೂಂನಲ್ಲಿದ್ದ ಫೋಟೊ ಒಂದನ್ನು ತೆಗೆದುಕೊಂಡು ಬಂದರು. ವಿನಯ್​ರಿಂದಲೇ ಓಪನ್ ಮಾಡಿಸಿದರು. ಅದರಲ್ಲಿ ಸಂಗೀತಾ ಅಂದು ’ಬಳೆ ಹಾಕೊಂಡಿದ್ದೀನಿ.. ನೋಡು.. ಬಳೆ.. ಬಳೆ ಎಂದು ಬಳೆ ತೋರಿಸುವ ಚಿತ್ರ ಇತ್ತು. ಅದೇ ಫೋಟೋಗೆ ಕಿಚ್ಚ ಸುದೀಪ್ ಅವರು ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಬಳೆಗೆ ನನ್ನ ಚಪ್ಪಾಳೆ. ಇಷ್ಟು ಸೀಸನ್‌ನಲ್ಲಿ ಫಸ್ಟ್ ಟೈಮ್‌ ಒಂದು ಚಪ್ಪಾಳೆ ಒಂದು ವಸ್ತುಗೆ ಹೋಗುತ್ತೆ. ಆ ವಸ್ತು ಹಿಂದೆ ಇರುವ ಶಕ್ತಿಗೆ ಹೋಗುತ್ತೆ’’ ಎಂದರು ಕಿಚ್ಚ ಸುದೀಪ್. ಅಷ್ಟೇ ಅಲ್ಲದೇ ಎಂದಿನಂತೆ ವಾಲ್ ಆಫ್​ ಫೇಮ್​ಗೆ ವಿನಯ್‌ ಕಡೆಯಿಂದಲೇ ಸಹ ತೂಗು ಹಾಕಲಾಯಿತು. ಈ ಮೂಲಕ ಮೂಲಕ ಮಹಿಳೆಯರಿಗೆ ಗೌರವ ನೀಡಿದರು. ‘’ಬಲಶಾಲಿ ಬಳೆ.. ನನ್ನ ಪ್ರಕಾರ ಅದು ಬಲದ ಸಂಕೇತ. ಇದು ರಿಮೈಂಡ್ ಆಗಲಿ ಎಲ್ಲರಿಗೂ..’’ ಎಂದರು ಕಿಚ್ಚ ಸುದೀಪ್.

Exit mobile version