Site icon Vistara News

BBK Season 10: ನೀತುಗೆ ʻಮುಚ್ಕೊಂಡು ಇರಿʼ ಎಂದ ಕಾರ್ತಿಕ್‌; ಬೇಕು ಅಂತ್ಲೇ ಕೂಗಿದ್ರಾ?

Karthik Mahesh neetu vanajakshi war in bbk 10

ಬೆಂಗಳೂರು: ಬಿಗ್‌ಬಾಸ್ ಮನೆಯೊಳಗೆ (BBK Season 10) ಗಲಾಟೆ ಜೋರಾಗಿದೆ. ನಾಲ್ಕನೇ ವಾರ ಎಲ್ಲ ಸ್ಪರ್ಧಿಗಳೂ ಮೈಕೊಡವಿಕೊಂಡು ಸ್ಪರ್ಧೆಗೆ ಬಿದ್ದಂತಿದೆ. ಕಾರ್ತಿಕ್ ಅಂತೂ ಸಖತ್ ಅಗ್ರೆಸಿವ್ ಆಗಿದ್ದಾರೆ. ಮನೆಯ ಕ್ಯಾಪ್ಟನ್‌ ಜತೆಗೇ ಜಗಳಕ್ಕೆ ನಿಂತಿದ್ದಾರೆ. ಅಡುಗೆ ಮನೆಯಲ್ಲಿ ಕಾರ್ತಿಕ್ ಮತ್ತು ನೀತು ಮಧ್ಯೆ ಮಾತಿನ ಚಕಮಕಿ‌ ಶುರುವಾಗಿದೆ. ನೀತು ಕಾರ್ತಿಕ್ ಗೆ ‘ಹಿತ್ತಾಳೆ ಕಿವಿ’ ಎಂದು ಜರಿದಿದ್ದಾರೆ. ಅಲ್ಲದೇ ‘ನಾನು ಒಂದ್ಸಲ ಹೇಳಿದ್ಮೇಲೆ ಮುಗಿದೋಯ್ತುʼ ಎಂದೂ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮಾತಿಗೆ ಮಾತು ಬೆಳೆದು ಕಾರ್ತಿಕ್ ‘ನೀವು ಕ್ಯಾಪ್ಟನ್. ಸಮಸ್ಯೆಯನ್ನು ಬಗೆಹರಿಸಿಕೊಡಲು ಸಾಧ್ಯವಾದರೆ ಬಗೆಹರಿಸಿ. ಇಲ್ಲವಾದರೆ ಮುಚ್ಕೊಂಡು ಕೂತ್ಕೊಂಡ್ ಬಿಡಿ’ ಎಂದು ಕಿರುಚಾಡಿದ್ದಾರೆ. ನೀತು ವನಜಾಕ್ಷಿ ವಿರುದ್ಧ ಕೂಗಾಡಿದ ಕಾರ್ತಿಕ್ ಮಹೇಶ್, ದೊಡ್ಡದಾಗಿ ಕಣ್ಣು ಬಿಡುತ್ತ ‘ಮುಚ್ಕೊಂಡು ಇರಿ..’ ಎಂದು ಅಬ್ಬರಿಸಿದರು.
ಅಡುಗೆ ಮನೆಯಲ್ಲಿ ಜಗಳ ಮಾಡಿ, ಅಲ್ಲಿಂದ ಹೊರಟ ಕಾರ್ತಿಕ್‌, ಸೀದಾ ಮೇಕಪ್‌ಗೆ ರೂಮ್‌ಗೆ ಹೋದರು. ಅಲ್ಲಿ ಕಾರ್ತಿಕ್‌ಗೆ ಸಂಗೀತಾ ಸಮಾಧಾನ ಮಾಡಿದರು. ಅಲ್ಲಿಗೆ ಬಂದ ವಿನಯ್ ಗೌಡ, ‘ಕರೆಕ್ಟ್ ಆಗಿ ಮಾತಾಡಿದ್ರೆ ಅದು ಚರ್ಚೆ ಆಗತ್ತೆ. ಅದುಬಿಟ್ಟು ಕಿರುಚಾಡಿದ್ರೆ ಅದು ವಾಗ್ವಾದ ಆಗುತ್ತದೆ. ಎದುರಿಗೆ ಇರುವವರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡು, ಇಲ್ಲ ಅಂದ್ರೆ ನಿಂದು ತಪ್ಪಾಗುತ್ತದೆ ಕಾರ್ತಿಕ್. ಅದಕ್ಕೆ ಹೇಳ್ತಾ ಇರೋದು ಕಿರುಚಾಟ ಬೇಡ. ಹೇಳಬೇಕಾದ್ದನ್ನು ನಿಧಾನಕ್ಕೆ ಹೇಳು. ‘ನನ್ನನ್ನು ಹಿತ್ತಾಳೆ ಕಿವಿ ಅಂತ ಏನಕ್ಕೆ ಕರೆದ್ರಿ’ ಎಂದು ನೀತುಗೆ ಕೂಲ್‌ ಆಗಿ ಕೇಳು. ಉತ್ತರ ಸಿಗುವವರೆಗೂ ಕೇಳುತ್ತಲೇ ಇರು. ಇಲ್ಲಿ ಕೆಟ್ಟವನಾಗಬೇಡ, ಕೂಲ್ ಆಗಿರುʼ ಎಂದು ಹೇಳಿದರು,

ಇದನ್ನೂ ಓದಿ: BBK Season 10: ತಾನೆಷ್ಟು ʻಚಾಲಾಕಿʼ ಎಂದು ತೋರಿಸಿದ ಡ್ರೋನ್‌ ಪ್ರತಾಪ್‌; ಬಲೂನ್‌ ಆಟದಲ್ಲಿ ಕಿಂಗ್

ತನಿಷಾ ಕೂಡ ಕಾರ್ತಿಕ್‌ಗೆ ʻʻನೀಮ್ಮ ಪಾಯಿಂಟ್‌ ಸರಿಯಾಗಿರುತ್ತೆ. ಆದರೆ ಕಿರುಚುತ್ತೀರಾ. ನಾನು ಕೂಡ ಮೊದಲ ವಾರ ಹೆದರಿಕೊಂಡಿದ್ದೆʼʼ ಎಂದರು. ಕಾರ್ತಿಕ್ ಎಲಿಮಿನೇಷನ್ ಪಾಸ್ ಟಾಸ್ಕ್ ನಲ್ಲಿಯೂ ಪ್ರತಾಪ್ ಅವರ ಮೈಮೇಲೆ ಬಿದ್ದು ಎಳೆದಾಡಿದ್ದರು. ಇಷ್ಟು ದಿನ ಕಾಮ್ ಹುಡುಗನಾಗಿ, ಎಲ್ಲರಿಗೂ ಸ್ನೇಹಿತನಾಗಿ ಇದ್ದ ಕಾರ್ತಿಕ್ ಇಷ್ಟೊಂದು ಅಗ್ರೆಸಿವ್ ಆಗಿ ಬದಲಾಗಿದ್ದು ಯಾಕೆ? ಕಿರುಚಾಡಿದರೆ ಎಲ್ಲರ ಗಮನ ಸೆಳೆಯಬಹುದು ಎಂಬ ಆಲೋಚನೆ ಇರಬಹುದು ಎಂದು ಪ್ರೆಕ್ಷಕರು ಚರ್ಚೆ ಮಾಡುತ್ತಿದ್ದಾರೆ.

ನಾಮಿನೇಶನ್‌ನಲ್ಲಿ ಈ ವಾರ ಅಧಿಕಾರ ಪಡೆದುಕೊಂಡಿದ್ದು ಯಾರ್ಯಾರು?

ಕಾರ್ತಿಕ್‌ ಅವರು ಮೈಕಲ್‌ ಅವರಿಗೆ ನಾಮಿನೇಶನ್‌ ಮಾಡುವ ಅಧಿಕಾರವನ್ನು ನೀಡಿದರು. ಪ್ರತಾಪ್‌ ಬಿಗ್‌ ಬಾಸ್‌ ನೀಡಿದ ಎರಡು ಆಯ್ಕೆಯಲ್ಲಿ ಎರಡನೇ ಆಯ್ಕೆ ಮಾಡಿಕೊಂಡರು. ʻʻನಮ್ರತಾʼʼ ಅವರನ್ನು ಮೊದಲಿಗೆ ಸೆಲೆಕ್ಟ್‌ ಮಾಡಿದರು. ಸಂಗೀತಾ ಅವರಿಗೂ ನಾಮಿನೇಟ್‌ ಮಾಡುವ ಅಧಿಕಾರ ನೀಡಿದರು. ಬಳಿಕ ಸಿರಿ, ತನಿಷಾ, ಭಾಗ್ಯಶ್ರೀ ಅವರಿಗೆ ನಾಮಿನೇಟ್‌ ಮಾಡಲು ಅಧಿಕಾರ ನೀಡಿದರು. ಈ ಮೂಲಕ ಈ ವಾರ ನಾಮಿನೇಶನ್‌ ಮಾಡಲು ಆಧಿಕಾರ ಹೊಂದಿದವರು ಪ್ರತಾಪ್‌, ಕಾರ್ತಿಕ್‌, ಮೈಕಲ್‌, ನಮ್ರತಾ, ಸಂಗೀತಾ, ಸಿರಿ, ತನಿಷಾ, ಭಾಗ್ಯಶ್ರೀ ಆದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version