Site icon Vistara News

Karthik Mahesh: ʻಕಣ್ಣಲ್ಲೇ ಕಿಚ್ಚು ಹಚ್ಚುವ ಕಿಚ್ಚʼಎಂದು ಸುದೀಪ್‌ಗಾಗಿ ಕವನ ಬರೆದ ಕಾರ್ತಿಕ್‌ ಮಹೇಶ್‌!

Karthik Mahesh wrote a song For sudeep

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಜನ್‌ 10 (Karthik Mahesh) ಸ್ಪರ್ಧೆಯ ವಿಜೇತ ನಟ ಕಾರ್ತಿಕ್‌ ಮಹೇಶ್‌ ಇದೀಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ತಮ್ಮ ಹುಟ್ಟೂರಾದ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಸಾಕಷ್ಟು ಸುದ್ದಿಯಲ್ಲಿದ್ದರು. ಇದೀಗ ನಟ ಸುದೀಪ್‌ ಅವರ ಮೇಲಿನ ಗೌರವ ಹಾಗೂ ಪ್ರೀತಿಯನ್ನು ಸಾಲುಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾದಲ್ಲಿ ಸುದೀಪ್‌ ಬಗ್ಗೆ ಸಣ್ಣ ಕವಿತೆಯನ್ನು ಪೋಸ್ಟ್‌ ಮಾಡಿದ್ದಾರೆ.

ಕಾರ್ತಿಕ್‌ ಇನ್‌ಸ್ಟಾ ಪೋಸ್ಟ್‌ನಲ್ಲಿ ,

ನಾ ಕಂಡ ಕಿಚ್ಚ

ಆಕಾಶದ ಎತ್ತರಕ್ಕೆ ಏರಿದರು ಭೂಮಿಯಲ್ಲೇ ನಿಂತಿರುವ ಅಭಿನಯ ಚಕ್ರವರ್ತಿ,
ಪ್ರೀತಿಯ ಅಭಿಮಾನಿಗಳ ಅಭಿಮಾನಿ
ತಪ್ಪಿದ್ದರೂ ಸರಿ ಇದ್ದರೂ ಸೂಕ್ಷ್ಮವಾಗಿ ಮಾತಿನಲ್ಲೇ ತಿಳಿ ಹೇಳುವ ನನ್ನ ಪ್ರೀತಿಯ ಕಿಚ್ಚ
ಕಣ್ಣಲ್ಲೇ ಕಿಚ್ಚು ಹಚ್ಚುವ ಕಿಚ್ಚ
ಸ್ಟೈಲಲ್ಲಿ ಹುಚ್ಚು ಹಿಡಿಸುವ ಕಿಚ್ಚ
ನಿಮ್ಮ ಕಿವಿ ಮಾತು ಇಲ್ಲದೆ ನನ್ನ ಬಿಗ್ ಬಾಸ್ ಜೀವನ ಅಸಾಧ್ಯವೇ ಸರಿ! ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಫೆ.5ರ ಮಧ್ಯಾಹ್ನ 12:30ರ ವೇಳೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಪುಣ್ಯ ಭೂಮಿಗೆ ಆಗಮಿಸಲಿದ್ದಾರೆ ಕಾರ್ತಿಕ್‌. ಬಿಗ್ ಬಾಸ್ ಗೆಲುವಿನ ನಂತರ ಬಿಡುವು ಸಿಗದ ಕಾರಣ ಇಂದು ಅಪ್ಪು ಸಮಾಧಿಗೆ ಭೇಟಿ ಕೊಡುತ್ತಿದ್ದಾರೆ. ಇತೀಚೆಗಷ್ಟೇ ಅಪ್ಪು ಸಮಾಧಿಗೆ ವಿನಯ್ ಭೇಟಿ ಕೊಟ್ಟಿದ್ದರು.

ಇದನ್ನೂ ಓದಿ: BBK SEASON 10: 3 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ; ಕಾರ್ತಿಕ್‌ ಮಹೇಶ್‌

ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಕಾರ್ತಿಕ್‌ ಅವರು ಬಿಗ್ ಬಾಸ್ ಆದ ಬಳಿಕ ನನಗೆ ಸಾಕಷ್ಟು ಆಫರ್‌ಗಳು‌ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ʻʻಕಥೆ ನೋಡಿ ಆಯ್ಕೆ ಮಾಡಬೇಕಾಗಿದೆ. ಜನರು ನನಗೆ ಹೆಚ್ಚು ಮತ‌ ನೀಡಿ‌ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರೆ. ನನಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ, ಮಾಡಿದವರು ಮಾಡಲಿ‌ ನನ್ನ ಕೆಲಸ ಮಾಡುತ್ತೇನೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಎಲ್ಲರ ವ್ಯಕ್ತಿತ್ವವನ್ನು ಹೊರತರುವ ರಿಯಾಲಿಟಿ ಶೋ ಅದಾಗಿದೆ. ನಾವು ಯಾರೂ ಪಾತ್ರ ಮಾಡಲಿಲ್ಲ, ನಮ್ಮ ವ್ಯಕ್ತಿತ್ವ ಹೊರ ಹಾಕಿದೆವು ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದರು.

ಬಿಗ್​​ ಬಾಸ್​ ಸೀಸನ್​ 10ರ ವಿಜೇತರಾಗಿ ಕಾರ್ತಿಕ್ ಮಹೇಶ್‌ ಹೊರಹೊಮ್ಮಿದ್ದಾರೆ. ಬಿಗ್​ ಬಾಸ್​ ಟ್ರೋಫಿ, 50 ಲಕ್ಷ ರೂಪಾಯಿ, ಒಂದು ಮಾರುತಿ ಬ್ರೀಝಾ ಕಾರು, ಸ್ಕೂಟರ್‌ ಅನ್ನು ಬಹುಮಾನವಾಗಿ ಪಡೆದಿರುವ ಕಾರ್ತಿಕ್​ ಸದ್ಯ ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದಾರೆ.

Exit mobile version