Site icon Vistara News

BBK Season 10: ಕಾರ್ತಿಕ್-ವಿನಯ್ ಸ್ನೇಹದಲ್ಲಿ ‘ಸಂಗೀತ’ವೆಂಬ ಅಪಸ್ವರ?

Karthik-Vinay sangeetha sringeri

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎರಡನೇ ವಾರ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ವಾರ್‌ ಆಗಿದ್ದು ಗೊತ್ತೇ ಇದೆ. ಇನ್ನು ಸಂಗೀತಾ ಹಾಗೂ ವಿನಯ್‌ ನಡುವೆ ದೊಡ್ಡ ವಾರ್‌ ಆಗಿ ಹೋಗಿತ್ತು. ಇದರ ನಡುವೆ ಒಂದು ಅಪಸ್ವರ ಕೇಳಿ ಬಂದದ್ದು ಸಂಗೀತಾ ಹಾಗೂ ಕಾರ್ತಿಕ್‌ ಬಗ್ಗೆ. ಟಾಸ್ಕ್‌ ಆದ ಬಳಿಕವೂ ವರ್ತೂರ್‌ ಸಂತೋಷ್‌ ಕೂಡ ಸಂಗೀತಾ-ಕಾರ್ತಿಕ್‌ ಜೋಡಿ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಕಲರ್ಸ್‌ ಕನ್ನಡ ವಾಹಿನಿ ಪ್ರೋಮೊ ರಿಲೀಸ್‌ ಮಾಡಿದ್ದು, ವಿನಯ್‌ ಕೂಡ ಕಾರ್ತಿಕ್‌ಗೆ ಸಂಗೀತಾ ಬಗ್ಗೆ ಕ್ಲಾಸ್‌ ತೆಗೆದುಕೊಂಡಂತಿದೆ.

ಕಾರ್ತಿಕ್‌ ಒಳ್ಳೆಯ ಕ್ಯಾಪ್ಟನ್‌ ಕೂಡ. ಆದರೆ ಸಂಗೀತಾ ವಿಚಾರಕ್ಕೆ ಏನೋ ಸ್ವಲ್ಪ ಅವರ ಗಮನೆ ಬೇರೆ ಕಡೆ ಇರುತ್ತದೆ ಎಂಬುದು ನೆಟ್ಟಿಗರ ವಾದ. ಪೂರಕವೆಂಬಂತೆ ಇದೀಗ ವಿನಯ್‌ ಕೂಡ ಈ ಬಗ್ಗೆಯೇ ಕಾರ್ತಿಕ್‌ ಜತೆ ಪ್ರಸ್ತಾಪಿಸಿದ್ದಾರೆ. ವಿನಯ್‌ ಅವರು ಕಾರ್ತಿಕ್‌ಗೆ ಕಿವಿಮಾತು ಹೇಳುವಂತಿದೆ. ʻʻಮನೆಯಲ್ಲಿ ಎಲ್ಲರೂ ಒಂದು ಕಡೆ ಇದ್ರೆ, ನೀನು ಮಾತ್ರ ಒಂದು ಕಡೆ ಇರ್ತಿಯಾ. ಯಾಕೆ 16 ಜನರಲ್ಲಿ ಬೇರೆ ಯಾರು ಕಾಣಿಸ್ತಾ ಇಲ್ವಾ ನಿನಗೆ? ನಾನು ಏನು ಮಾಡಿದ್ದೀನಿ ನಿಂಗೆ? ಸಗಣಿ ಮೇಲೆ ಕೈ ಇಟ್ಟರೆ ಏನು ಮಾಡ್ತಿಯಾ ಹೇಳು? ನಾನಾ ಇಲ್ಲ ಅವಳಾ?. ವಾರ್‌ ಡಿಕ್ಲೇರ್‌ ಮಾಡಿದ್ದಾರೆ. ವಾರ್‌ ಮಾಡೋಣʼʼಎಂದು ಕಾರ್ತಿಕ್‌ಗೆ ಹೇಳಿದ್ದಾರೆ.

ಅತ್ತ ಸಂಗೀತಾ ಕೂಡ ವಿನಯ್‌ ಬಗ್ಗೆಯೇ ಕಾರ್ತಿಕ್‌ ಜತೆ ಚರ್ಚೆ ಮಾಡಿದ್ದಾರೆ. ʻʻವಿನಯ್‌ ತನ್ನ ಪವರ್‌ವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾರು ಬೆರಳು ತೋರಿಸಬಾರದು. ನನಗೆ ಗೊತ್ತು ಇಲ್ಲಿ ಯಾರು ನಮ್ಮವರಲ್ಲ. ಕಾರ್ತಿಕ್‌ ನೀವು ಇರಿ , ಇಲ್ಲದೇ ಇರಿ ನಾನು ಫೈಟ್‌ ಮಾಡುತ್ತೇನೆʼʼಎಂದು ಸಂಗೀತಾ ಅವರು ಕಾರ್ತಿಕ್‌ ಜತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ನಾವೇನೂ ಭಿಕಾರಿಗಳಾ?ವಿನಯ್‌ಗೆ ತಿರುಗೇಟು ಕೊಟ್ಟ ತನಿಷಾ; ಮುಂದೇನಾಯ್ತು ಈ ಆಟ?

ತನಿಷಾ ಜತೆಗೂ ವಿನಯ್‌ ಕಿರಿಕ್‌

ಬಿಗ್‌ ಬಾಸ್‌ ತಂಡಗಳಿಗೆ ಟಾಸ್ಕ್‌ ಒಂದನ್ನು ನೀಡಿದೆ. ವೇಗ ಹಾಗೂ ತಂತ್ರಗಾರಿಕೆಯನ್ನು ಬಳಸಿ ಆಡುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿತ್ತು. ಬಿಗ್‌ ಬಾಸ್‌ ಹೇಳಿದ ನಂಬರ್‌ ಬಾಕ್ಸ್‌ನಲ್ಲಿ ಸ್ಪರ್ಧಿಗಳು ಓಡಿ ಹೋಗಿ ಕುಳಿತುಕೊಳ್ಳಬೇಕು. ಯಾರು ಬಾಕ್ಸ್‌ ಮೇಲೆ ಜಾಸ್ತಿ ಜನ ಇರುತ್ತಾರೋ ಅವರು ವಿನ್‌. ಈ ವೇಳೆ ಕ್ಯಾಪ್ಟನ್‌ ವಿನಯ್‌ ಹಾಗೂ ತನಿಷಾ ನಡುವೆ ಬೆಂಕಿ ಹತ್ತಿಕೊಂಡಿದೆ. ಎಲ್ಲರೂ ಒಮ್ಮತದಿಂದ ಪಾಯಿಂಟ್‌ ವಿಚಾರಕ್ಕೆ ಮಾತನಾಡುವಾಗ ವಿನಯ್‌ ಸ್ವಲ್ಪ ಖಾರವಾಗಿಯೇ ಮಾತನಾಡಿದ್ದಾರೆ ʻʻಡಿಸ್ಕಷನ್ ಮಾಡುವಾಗ ಬೇಡದೇ ಇದ್ದವರ ಮಾತುಗಳನ್ನು ಕೇಳಬೇಡಿʼʼಎಂದರು. ಈ ಮಾತುಗಳಿಂದ ಕೋಪಿತರಾದ ತನಿಷಾ ʻʻಬೇಡದೆ ಇದ್ದವರು ಯಾರೂ ಇಲ್ಲ ಇಲ್ಲಿ. ಬೇಡದೆ ಇದ್ದವರು ಅನ್ನೋಕೆ ನಾವೇನು ಭಿಕಾರಿಗಳಾ?ʼʼಎಂದು ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಇದೀಗ ಈ ಪ್ರೋಮೊಗೆ ನೆಟ್ಟಿಗರು ʻʻಇವತ್ತು ರಣಶಕ್ತಿ ಟೀಮ್ ಗೆಲ್ಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ. ವಿನಯ್ ರೌಡಿ ತರ ಆಡೋದು ಸರಿಯಿಲ್ಲ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻಸಂಗೀತ ಅವರ ನಡವಳಿಕೆ ಇತ್ತೀಚೆಗೆ ಇಷ್ಟ ಆಗ್ತಿಲ್ಲʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದೀಗ ಈ ಪ್ರೋಮೊಗೆ ನೆಟ್ಟಿಗರು ʻʻಇವತ್ತು ರಣಶಕ್ತಿ ಟೀಮ್ ಗೆಲ್ಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ. ವಿನಯ್ ರೌಡಿ ತರ ಆಡೋದು ಸರಿಯಿಲ್ಲ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻಸಂಗೀತ ಅವರ ನಡವಳಿಕೆ ಇತ್ತೀಚೆಗೆ ಇಷ್ಟ ಆಗ್ತಿಲ್ಲʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಬಿಗ್‌ ಬಾಸ್‌ ಪ್ರತಿ ದಿನ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿಯೂ ವೀಕ್ಷಿಸಬಹುದು.

Exit mobile version