Site icon Vistara News

BBK Season 10: ಬಳೆ ತಂಟೆಗೆ ಹೋದ್ರೆ…ಮಾತಲ್ಲಿ ನಿಗಾ ಇರಲಿ ವಿನಯ್‌; ವಾರ್ನಿಂಗ್‌ ಕೊಟ್ಟ ಕಿಚ್ಚ!

kiccha sudeep Vinay Gowda in bbk10

ಬೆಂಗಳೂರು; ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ನಾಲ್ಕನೇ ವಾರದ ʻವಾರದ ಕಥೆ ಕಿಚ್ಚನ ಜೊತೆʼ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ವಿನಯ್‌ ಅವರಿಗೆ ಬಳೆ ವಿಚಾರವಾಗಿ ಬೆವರು ಇಳಿಸಿದ್ದಾರೆ. ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ ಅವರು ಕಾರ್ತಿಕ್‌ ಅವರಿಗೆ ಟಾಸ್ಕ್‌ ಸಂಬರ್ಭದಲ್ಲಿ ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದನ್ನು ಸಂಗೀತಾ ಮಾತ್ರ ವಿರೋಧಿಸಿದ್ದರು, ಮತ್ಯಾರು ಧ್ವನಿ ಎತ್ತಿರಲಿಲ್ಲ. ಆದರೀಗ ಕಿಚ್ಚ ಬಳೆಗೆ ಒಂದು ವಿಶೇಷ ಗೌರವವನ್ನು ಸಹ ಕೊಟ್ಟಿದ್ದಾರೆ. ‘ಬಳೆ ಬಲಹೀನತೆಯ ಸಂಕೇತ ಅಲ್ಲ, ಅದು ಬಲಶಾಲಿ ಬಳೆ’ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ. ಆ ಮೂಲಕ ವಿನಯ್‌ ಗೌಡಗೆ ಕಿಚ್ಚ ಸುದೀಪ್ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ಏನಿದು ಘಟನೆ?

ಟಾಸ್ಕ್ ಆಡುವಾಗ ಎದುರಾಳಿ ತಂಡದ ಕಾರ್ತಿಕ್ ಅವರನ್ನು ಅವಮಾನಗೊಳಿಸುವ ಉದ್ದೇಶದಿಂದ ಬಳೆ ಹಾಕಿಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ ಕರೆದಿದ್ದರು. ಆ ಮೂಲಕ ಬಳೆ ತೊಡುವವರೆಂದರೆ ಅಸಮರ್ಥರು, ಬಲಹೀನರು ಎಂಬರ್ಥದ ಮಾತುಗಳನ್ನು ಆಡಿದ್ದರು. ಬಳೆ ವಿಷಯದಲ್ಲಿ ವಿನಯ್‌ಗೆ ಸಂಗೀತಾ ತಿರುಗೇಟು ಕೊಟ್ಟಿದ್ದರು. ‘ಬಳೆ ಹಾಕೊಂಡಿದ್ದೀನಿ ನೋಡು.. ಬಳೆ.. ಬಳೆ’ ಎಂದಿದ್ದರು ಸಂಗೀತಾ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಯಿತು. ಸುದೀಪ್‌ ಅವರು ಬಗ್ಗೆ ಕೂಡ ಪ್ರೇಕ್ಷಕರು ಅಸಮಾಧಾನಗೊಂಡಿದ್ದರು. ಆದರೀಗ ಕಿಚ್ಚ ಬಳೆಗಳ ಶಬ್ದ ಜೋರಾಗಿಯೇ ಮೊಳಗಲಿ ಎಂದು ವಿನಯ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: BBK Season 10: ಕಳಪೆ ಪಟ್ಟ ಸಂಗೀತಾಗೆ; ಹಳ್ಳಿಮನೆ ಯಜಮಾನ್ತಿ ಜೈಲಿನೊಳಗೆ!

ವಿನಯ್​ಗೆ ಮಾತಿನ ಚಾಟಿ ಬೀಸಿದ ಸುದೀಪ್!

ಪ್ರತಿ ವಾರ ಕಿಚ್ಚನ ಚಪ್ಪಾಳೆ ಒಂದಲ್ಲ ಒಂದು ಸ್ಪರ್ಧಿಗೆ ಲಭಿಸುತ್ತದೆ. ಆದರೆ ಈ ಬಾರಿ ವಿಶೇಷವಾಗಿತ್ತು. ʻʻಇಡೀ ವಾರ ನೋಡಿ, ಪ್ರತಿಯೊಬ್ಬರ ಮಾತು, ನಡವಳಿಕೆ, ತಾಕತ್ತು, ಮನೋಭಾವ, ಮನಸ್ಸಿನ ಸ್ಥಿತಿ, ಆಟ, ಪಾಠ, ಕಳಪೆ, ಉತ್ತಮ, ಮಾತು.. ಎಲ್ಲಾ ನೋಡಿದ್ಮೇಲೆ.. ಈ ಬಾರಿ ವಿಶೇಷವಾಗಿ ಕಿಚ್ಚನ ಚಪ್ಪಾಳೆ ಕೊಡಬೇಕು ಎಂದು ಅನಿಸಿತುʼʼ ಎಂದರು ಕಿಚ್ಚ ಸುದೀಪ್‌

ವಿನಯ್‌ ಕೂಡ ಸ್ಟೋರ್​ ರೂಂನಲ್ಲಿದ್ದ ಫೋಟೊ ಒಂದನ್ನು ತೆಗೆದುಕೊಂಡು ಬಂದರು. ವಿನಯ್​ರಿಂದಲೇ ಓಪನ್ ಮಾಡಿಸಿದರು. ಅದರಲ್ಲಿ ಸಂಗೀತಾ ಅಂದು ’ಬಳೆ ಹಾಕೊಂಡಿದ್ದೀನಿ.. ನೋಡು.. ಬಳೆ.. ಬಳೆ ಎಂದು ಬಳೆ ತೋರಿಸುವ ಚಿತ್ರ ಇತ್ತು. ಅದೇ ಫೋಟೋಗೆ ಕಿಚ್ಚ ಸುದೀಪ್ ಅವರು ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಬಳೆಗೆ ನನ್ನ ಚಪ್ಪಾಳೆ. ಇಷ್ಟು ಸೀಸನ್‌ನಲ್ಲಿ ಫಸ್ಟ್ ಟೈಮ್‌ ಒಂದು ಚಪ್ಪಾಳೆ ಒಂದು ವಸ್ತುಗೆ ಹೋಗುತ್ತೆ. ಆ ವಸ್ತು ಹಿಂದೆ ಇರುವ ಶಕ್ತಿಗೆ ಹೋಗುತ್ತೆ’’ ಎಂದರು ಕಿಚ್ಚ ಸುದೀಪ್. ಅಷ್ಟೇ ಅಲ್ಲದೇ ಎಂದಿನಂತೆ ವಾಲ್ ಆಫ್​ ಫೇಮ್​ಗೆ ವಿನಯ್‌ ಕಡೆಯಿಂದಲೇ ಸಹ ತೂಗು ಹಾಕಲಾಯಿತು. ಈ ಮೂಲಕ ಮೂಲಕ ಮಹಿಳೆಯರಿಗೆ ಗೌರವ ನೀಡಿದರು. ‘’ಬಲಶಾಲಿ ಬಳೆ.. ನನ್ನ ಪ್ರಕಾರ ಅದು ಬಲದ ಸಂಕೇತ. ಇದು ರಿಮೈಂಡ್ ಆಗಲಿ ಎಲ್ಲರಿಗೂ..’’ ಎಂದರು ಕಿಚ್ಚ ಸುದೀಪ್.

ಇದನ್ನೂ ಓದಿ: BBK Season 10: ವಿನಯ್‌ಗೆ ಕ್ಯಾಪ್ಟನ್ ಪಟ್ಟಾಭಿಷೇಕ; ಶೋ ಮುಂಚೆಯೂ ಇತ್ತು ಸಂಗೀತಾ ಜತೆ ವೈಮನಸ್ಸು?

ಕ್ಷಮೆ ಕೇಳಿದ ವಿನಯ್‌

ಇದರ ಜತಗೆ ನಮ್ರತಾ, ತುಕಾಲಿ ಸಂತುಗೂ ಸಹ ಸರಿಯಾಗಿ ಕ್ಲಾಸ್ ತೆಗೆದುಕೊಂಡರು ಕಿಚ್ಚ. ವಿನಯ್​ ಅವರ ಆ ಮಾತನ್ನು ವಿರೋಧಿಸಿದ ಬಿಗ್​ಬಾಸ್ ಮನೆಯ ಏಕೈಕ ವ್ಯಕ್ತಿ ಸಂಗೀತಾ ಶೃಂಗೇರಿಯ ಬಗ್ಗೆ ಮೆಚ್ಚುಗೆಯನ್ನು ಸಹ ಕಿಚ್ಚ ಸುದೀಪ್ ವ್ಯಕ್ತಪಡಿಸಿದರು. ವಿನಯ್‌ ಈ ಬಗ್ಗೆ ಮಾತನಾಡಿ ʻʻನನ್ನಿಂದ ತಪ್ಪಾಗಿದೆ. ಫ್ಲೋನಲ್ಲಿ ಬಂದಂತಹ ಒಂದು ಮಾತು. ಹೆಂಗಸರನ್ನು ನಾನು ಯಾವತ್ತೂ ಕೆಳಗೆ ಹಾಕಿ ಮಾತನಾಡಿದವನು ಅಲ್ಲ.. ತುಂಬಾ ಗೌರವ ಇದೆ. ಕೆಲವೊಂದು ಘಟನೆಯಾದಾಗ ಪ್ರಚೋದನಾತ್ಮಕ ಆದಾಗ ಮಾತುಗಳು ನನ್ನ ಬಾಯಿಂದ ಬಂದವು, ನನಗೂ ಹೆಂಡತಿ ಇದ್ದಾಳೆ. ಮಹಿಳೆಯರಿಗೆ ಅಗೌರವ ತೋರಿಸೋದು ನನ್ನ ಉದ್ದೇಶ ಅಲ್ಲʼʼಎಂದು ಕ್ಷಮೆ ಕೇಳಿದರು.

Exit mobile version