Site icon Vistara News

BBK Season 10: ಈಗಲೇ ಫೈನಲಿಸ್ಟ್‌ ಹೆಸರು ಹೇಳಿದ ಕಿಚ್ಚ; ಒಂಟಿ ಸಲಗ ʻವಿನಯ್‌ʼ ಕಂಡ್ರೆ ಸ್ಪರ್ಧಿಗಳಿಗೆ ಭಯನಾ?

Vinay Gowda bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೂರನೇ ವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಗರಂ ಆಗಿದ್ದಲದ್ದೇ ಸ್ಪರ್ಧಿಗಳ ಬಗ್ಗೆ ಬೇಸರಗೊಂಡರು. ಅಷ್ಟೇ ಅಲ್ಲದೇ ಎಲ್ಲ ಸ್ಪರ್ಧಿಗಳಿಗೆ ಅವರ ತಪ್ಪುಗಳನ್ನು ಮನದಟ್ಟು ಮಾಡಿದರೇ ವಿನಯ್‌ ಅವರಿಗೆ ಮಾತ್ರ ಫೈನಲಿಸ್ಟ್‌ ಎಂದರು. ಅಷ್ಟೇ ಅಲ್ಲ ಸ್ಪರ್ಧಿಗಳೆಲ್ಲಾ ವಿನಯ್‌ ಗೌಡ ಕಂಡ್ರೆ ಹೆದರಿಕೊಳ್ತಿದ್ದಾರಾ? ವಿನಯ್ ಗೌಡ ಕಂಡ್ರೆ ಎಲ್ಲಾ ಸ್ಪರ್ಧಿಗಳಿಗೂ ಭಯನಾ? ಎಂಬ ಪ್ರಶ್ನಗಳನ್ನೂ ಕೇಳಿದರು.

ಈ ಬಾರಿ ಜನರು ಕೂಡ ಕಳೆದ ಎರಡು ವಾರಗಳಿಂದ ವಿನಯ್‌ ಅವರೇ ಗಟ್ಟಿ ಸ್ಪರ್ಧಿ ಎಂದು ಕಮೆಂಟ್‌ ಮಾಡಲು ಶುರು ಮಾಡಿದರು. ಮನೆಯ ಸದಸ್ಯರಲ್ಲಿಯೂ ಕೂಡ ವಿನಯ್‌ ಹೊರತು ಪಡಿಸಿ ಉಳಿದ ಸ್ಪರ್ಧಿಗಳ ತಪ್ಪು ಸರಿ ಬಗ್ಗೆ ನೇರವಾಗಿ ಮಾತನಾಡುತ್ತಾರೆ. ಆದರೆ ವಿನಯ್‌ ವಿಚಾರದಲ್ಲಿ ಹಾಗಿಲ್ಲ. ಹೀಗಾಗಿಯೇ ಕಿಚ್ಚ ಕೇಳಿದಾಗ ಯಾರಿಗೂ 10ರಲ್ಲಿ 8 ಕೊಟ್ಟಿಲ್ಲ. ಸ್ವಲ್ಪ ಟಫ್ ಎನಿಸುವುದು ನಮ್ರತಾ, ಕಾರ್ತಿಕ್, ಮೈಕೆಲ್ ಹೆಸರು ಬಂದಿದೆ. ಸ್ಮೋಕಿಂಗ್ ವಿಚಾರವಾಗಿ ವಿನಯ್ ಗೌಡ ಹಾಗೂ ಮೈಕಲ್ ಅಜಯ್ ರೂಲ್ಸ್ ಬ್ರೇಕ್ ಮಾಡಿದ್ದರಿಂದ ಬೇರೆ ಸ್ಪರ್ಧಿಗಳು ಭಾರ ಹೊರಬೇಕಾಯ್ತು. ಆದರೂ ತನಿಷಾ ಮಾತ್ರ ʻಥ್ಯಾಂಕ್ಸ್‌ʼ ಎಂದರೇ ಹೊರತು ವಿನಯ್‌ ಅವರಿಗೆ ನೇರವಾಗಿ ಮಾತನಾಡಲು ಯಾರು ಹೋಗೇ ಇಲ್ಲ. ಈ ಎಲ್ಲ ಕಾರಣಾಂತರಗಳಿಂದ ಸ್ಪರ್ಧಿಗಳೆಲ್ಲಾ ವಿನಯ್‌ ಗೌಡ ಕಂಡ್ರೆ ಹೆದರಿಕೊಳ್ತಿದ್ದಾರಾ? ಎಂದು ಸುದೀಪ್‌ ಅವರ ಪ್ರಶ್ನೆ ಇಟ್ಟರು.

ಕಿಚ್ಚನ ನೇರ ಪ್ರಶ್ನೆ

‘’ಈ ಮನೆಯ ಆನೆ ವಿನಯ್ ಗೌಡ ಕಂಡ್ರೆ ಎಷ್ಟು ಜನರಿಗೆ ಭಯ ಇದೆ? ಕೈ ಎತ್ತಿ..’’ ಎಂದು ಕಿಚ್ಚ ಸುದೀಪ್ ನೇರವಾಗಿ ಕೇಳಿದರು ‘’ಹೆದರಿಕೊಳ್ಳುವ ಹಾಗೆ ಅವರೇನೂ ಮಾಡಲ್ಲ. ಅದಕ್ಕೆ ‘ಬಿಗ್ ಬಾಸ್’ ಅವಕಾಶವನ್ನೂ ಕೊಡಲ್ಲ’’ ಎಂದರು ತನಿಷಾ. ಕಿಚ್ಚ ಸುದೀಪ್‌ ಮಾತನಾಡಿ ʻʻನಮ್ರತಾ ಅವರು ಕ್ರಿಕೆಟ್‌ ಆಡುವಾಗ ನಿಮ್ಮಿಬ್ಬರ ಮಧ್ಯೆ ದೊಡ್ಡ ರಣರಂಗವೇ ಆಯ್ತು. ಯಾವ ಮಟ್ಟಕ್ಕೆ ನಿಮ್ಮ ಧ್ವನಿ ಹೋಯ್ತು. ಅಲ್ಲಿ ಬಂದಿದ್ದ ಧ್ವನಿ ವಿನಯ್‌ ಅವರು ತಪ್ಪು ಮಾಡಿದಾಗ ನಿಮ್ಮ ಧ್ವನಿ ಮ್ಯೂಟ್‌ ಆಯ್ತುʼʼಎಂದರು.

ಪ್ರತಾಪ್‌ಗೆ ಸುದೀಪ್‌ ಪ್ರಶ್ನೆ

ʻʻವಿನಯ್‌ ಮಾಡಿದ ತಪ್ಪನ್ನು ನಾವುಗಳು ಮಾಡಿದ್ರೆ ಬಿಡ್ತಿದ್ರಾ? ಎಂದು ಬಾತ್‌ ರೂಮ್‌ನಲ್ಲಿ ಮಾತಾಡ್ತೀರಾ. ಆಗ ವಿನಯ್‌ ಅವರಿಗೆ ಮೆಸೇಜ್‌ ತಲಪುತ್ತೆ. ನನ್ನತ್ರ ಮಾತಾಡಯ್ಯ ಎಂದು ನೇರವಾಗಿ ನಿಮ್ಮತ್ರ ಕೇಳತ್ತಾರೆ. ಆದರೆ ಧ್ವನಿ ನಿಮ್ಮದು ಬರೋದೆ ಇಲ್ಲ. ಇದಕ್ಕೆ ಧೈರ್ಯ ಎಂದು ಹೇಳಬೇಕಾ?ʼʼಎಂದು ಪ್ರಶ್ನೆ ಇಟ್ಟರು ಕಿಚ್ಚ.

ಇದನ್ನೂ ಓದಿ: BBK Season 10: ಸ್ಪರ್ಧಿಗಳ ಕಪಾಳಕ್ಕೆ ಹೊಡೆದಂತೆ ಇತ್ತು ಪ್ರೇಕ್ಷಕರ ಗಿಫ್ಟ್‌; ಚಮಚ, ಉಪ್ಪಿನಕಾಯಿ, ರಿಟರ್ನ್ ಟಿಕೆಟ್ ಯಾರಿಗೆ?

ಸಿರಿಗೆ ಪ್ರಶ್ನೆ

ʻʻಸಿರಿ ಅವರು ಹೇಳ್ತಾರೆ. ಪನಿಷ್‌ಮೆಂಟ್‌ ವಿನಯ್‌ ಅವರಿಗೆ ಕೊಟ್ಟಾಗಿದೆ. ನಾವು ಮಾತನಾಡಿ ಏನು ಪ್ರಯೋಜನ? ಇದಕ್ಕೆ ಡಿಪ್ಲೋಮ್ಯಾಟಿಕ್‌ ಅನ್ನಬೇಕಾ?ಧೈರ್ಯಾ ಅಂತಾನೂ ಹೇಳೋಕ್‌ ಆಗಲ್ಲ. ಕೋರ್ಟ್‌ ಆಕಸ್ಮಾತ್‌ ಅಲ್ಲಿ ಕೊಲೆ ಅಂತೂ ನಡೆದು ಹೋಗಿದೆ. ಜೈಲಿಗೆ ಹಾಕಿ ಏನು ಪ್ರಯೋಜನಾ? ಅಂದರೆ ಇದು ಎಷ್ಟರ ಮಟ್ಟಿಗೆ ಸರಿ? ನೀವು ಅಲ್ಲಿ ಇದ್ದು ನಿಮ್ಮ ಲಾಯರ್‌ ಅಂದ್ರೆ? ಸಿರಿ ನೀವು ಹೆಸರು ಮಾಡಿರೋರು. ಧ್ವನಿ ಇರೋರು ಎಂದು ಅನ್‌ಕೊಂಡ್‌ಇದ್ವಿ. ಇದು ಧೈರ್ಯನಾ ಎಂದು ನಮಗೆ ಅನ್ನಿಸಿಲ್ಲʼʼಎಂದು ಕಿಚ್ಚ ಸುದ್ದಿ.

ಕಾರ್ತಿಕ್‌ಗೆ ಕಿಚ್ಚನ ಪ್ರಶ್ನೆ

’ಯಾಕೆ ಯಾರೂ ಮಾತಾಡ್ತಾ ಇಲ್ಲ’’ ಅಂತ ಕಾರ್ತಿಕ್ ಕೇಳ್ತಾರೆ. ವಿನಯ್‌ ನೇರವಾಗಿ ಬರ್ತಾರೆ. ಅಲ್ಲೇ ಮಾತು ನಿಂತು ಹೋಗುತ್ತೆ ಎಂದು ಕಿಚ್ಚ

ಸಂಗೀತಾಗೆ ಪ್ರಶ್ನೆ

ʻʻವಿನಯ್‌ ಅವರು ಪ್ರತಾಪ್‌ ಹತ್ರ ಮಾತಾಡುವಾಗ , ವಿನಯ್‌ ಅವರಿಗೆ ನನಗೆ ನಿಮ್ಮ ಧ್ವನಿ ಥ್ರೆಟ್‌ ಆಗ್ತಿದೆ ಎಂದು ಹೇಳ್ತೀರಿ. ಈಗ ವಾಯ್ಸ್‌ ಇಲ್ಲ. ಶಿಕ್ಷೆ ಆದ್ಮೇಲೆ ವಿನಯ್‌ನ ಪ್ರಶ್ನೆ ಮಾಡೋಕೆ ನಿಮ್ಮ ಬಳಿ ಧ್ವನಿ ಇರಲಿಲ್ಲ. ಎದುರು ಬಂದು ಮಾತನಾಡುವಾಗ ಬೇರೆ ಕಡೆ ಧ್ವನಿ ಇರೋದು ವಿನಯ್‌ ಹತ್ರ ಇಲ್ಲʼʼಎಂದರು.

ʻʻನನ್ನ ಪ್ರಕಾರ , ನಿಮ್ಮ ಎಲ್ಲರ ಪ್ರಕಾರ ಹೇಳಲೇ ಬೇಕು ಎಂದರೆ ನೀವೇ ಒಬ್ಬರು ಫೈನಲಿಸ್ಟ್‌ನ ಆಡಿಯನ್ಸ್‌ಗೆ ತೋರಿಸುತ್ತಿದ್ದೀರಾ. ಆ ಕ್ರೆಡಿಟ್‌ನ ನಾನು ವಿನಯ್‌ಗೆ ಕೊಡ್ತೀನಿ. ಕೇಳೋಕೆ ಹೋದ್ರೆ ನನಲ್ಲೂ ಇದೆ. ನಾನು ಒಪ್ಪಲ್ಲ ಅಂತೀರಿ. ಆದರೆ ನೀವೆ ಆಡಿಯನ್ಸ್‌ಗೆ ಫೈನಲಿಸ್ಟ್‌ ತೋರಿಸಿದ್ರಿ. ವಿನಯ್‌ ಅವರು ತನ್ನ ಕಾಲ ಮೇಲೆ ಒಬ್ಬರೇ ನಿಂತರು. ಅದು ವಿನಯ್‌ ಧೈರ್ಯಕ್ಕೆ ನಾನು ಮೆಚ್ಚುತೇನೆʼʼ ಎಂದರು.

ಇದನ್ನೂ ಓದಿ: BBK Season 10: ಅವಳ್ಯಾರು ನನ್ನ ಡಾಮಿನೇಟ್‌ ಮಾಡೋಕೆ, ಬಾಯಿ ಮುಚ್ಚಲ್ಲ; ನಮ್ರತಾ-ತನಿಷಾ ಜಡೆ ಜಗಳ!

ರೇಟಿಂಗ್‌ ಎಷ್ಟು?

ʻʻನಿಮ್ಮ ಸರಿಸಮಾನ ಸ್ಪರ್ಧಿ ಯಾರು ವಿನಯ್‌ʼʼ? ಎಂದು ಕಿಚ್ಚ ಕೇಳಿದರು. ಅದಕ್ಕೆ ವಿನಯ್‌ ಉತ್ತರ ನೀಡಿ ʻʻನಂಗೆ ಯಾರು ಇಲ್ಲʼʼಎಂದರು. ನಿಮಗೆ ‘’ನಿಮಗೆ ಕಾಂಪಿಟೇಶನ್‌ ಆಗಿ ಯಾರಿಗೆ ಎಷ್ಟು ರೇಟಿಂಗ್ ಕೊಡುತ್ತೀರಿ’’ ಎಂದು ಕಿಚ್ಚ ಸುದೀಪ್ ಕೇಳಿದಾಗ -ವಿನಯ್‌ ಅವರು ನಮ್ರತಾಗೆ -10, ಸಂಗೀತಾ – 6, ಕಾರ್ತಿಕ್ – 5, ಸ್ನೇಹಿತ್ – 4, ಮೈಕಲ್ – 7, ಭಾಗ್ಯಶ್ರೀ – 3, ಸಿರಿ – 5, ತನಿಷಾ – 4, ಪ್ರತಾಪ್ – 2, ಇಶಾನಿ – 3, ನೀತು – 4, ರಕ್ಷಕ್‌ಗೆ 5’’ ಎಂದರು ವಿನಯ್ ಗೌಡ.

ಸದ್ಯಕ್ಕೆ‌ ಮನೆಯಲ್ಲಿ ವಿನಯ್‌ಗೆ ಪ್ರತಿಸ್ಪರ್ಧಿ ಎನಿಸಿಕೊಂಡಿರುವವರು ಕಾರ್ತಿಕ್ ಹಾಗೂ ಮೈಕೆಲ್. ಆದರೆ, ಕಾರ್ತಿಕ್ ಯಾವತ್ತಿಗೂ ವಿನಯ್‌ನ ಪ್ರತಿಸ್ಪರ್ಧಿ ಎನಿಸಿಕೊಳ್ಳಲೇ ಇಲ್ಲ. ಬದಲಿಗೆ ತುಂಬಾ ಕ್ಲೋಸ್ ಆಗಿದ್ದಾರೆ. ಹೀಗಾಗಿ ಅದು ತಪ್ಪು ಎಂಬುದನ್ನು ಸುದೀಪ್ ಕಿವಿ ಮಾತಿನ ಮೂಲಕ ಸೂಚನೆ ನೀಡಿದ್ದಾರೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version