Site icon Vistara News

BBK Season 10: ಪ್ರತಾಪ್‌ಗೆ ಗೂಬೆ ಎಂದಿದಕ್ಕೆ ರಕ್ಷಕ್‌ಗೆ ಕಿಚ್ಚನ ಸ್ಪೆಷಲ್ ಟ್ರೀಟ್‌ಮೆಂಟ್!

Kichcha special treatment for Rakshak for being Pratap issue

ಬೆಂಗಳೂರು: ಡ್ರೋನ್‌ ಪ್ರತಾಪ್‌ ಅವರಿಗೆ ತುಕಾಲಿ (BBK Season 10) ಸಂತು ಅವರು ತೇಜೋವಧೆ ಮಾಡಿರುವ ಬಗ್ಗೆ ಗೊತ್ತೇ ಇದೆ. ಇದಾದ ಬಳಿಕ ಕಿಚ್ಚ ಸುದೀಪ್‌ ಅವರ ತುಕಾಲಿಗೆ ಈ ಬಗ್ಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡಿದ್ದರು. ಆದರೀಗ ರಕ್ಷಕ್‌ ಅವರು ಪ್ರತಾಪ್‌ ಅವರಿಗೆ ಗೂಬೆ ಎಂದಿದಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಸ್ಪೆಷಲ್ ಟ್ರೀಟ್‌ಮೆಂಟ್ ಕೊಟ್ಟು ಬುದ್ಧಿ ಮಾತು ಹೇಳಿದ್ದಾರೆ.

ಸ್ಮೋಕಿಂಗ್ ವಿಚಾರವಾಗಿ ವಿನಯ್ ಗೌಡ ಹಾಗೂ ಮೈಕಲ್ ಅಜಯ್ ರೂಲ್ಸ್ ಬ್ರೇಕ್ ಮಾಡಿದ್ದರಿಂದ ಬೇರೆ ಸ್ಪರ್ಧಿಗಳು ಭಾರ ಹೊರಬೇಕಾಯ್ತು. ಆದರೂ ತನಿಷಾ ಮಾತ್ರ ʻಥ್ಯಾಂಕ್ಸ್‌ʼ ಎಂದರೇ ಹೊರತು ವಿನಯ್‌ ಅವರಿಗೆ ನೇರವಾಗಿ ಮಾತನಾಡಲು ಯಾರು ಹೋಗೇ ಇಲ್ಲ. ಈ ಎಲ್ಲ ಕಾರಣಾಂತರಗಳಿಂದ ಸ್ಪರ್ಧಿಗಳೆಲ್ಲಾ ವಿನಯ್‌ ಗೌಡ ಕಂಡ್ರೆ ಹೆದರಿಕೊಳ್ತಿದ್ದಾರಾ? ಎಂದು ಸುದೀಪ್‌ ಅವರ ಪ್ರಶ್ನೆ ಇಟ್ಟರು.

ಪ್ರತಾಪ್‌ಗೆ ಸುದೀಪ್‌ ಪ್ರಶ್ನೆ

ʻʻವಿನಯ್‌ ಮಾಡಿದ ತಪ್ಪನ್ನು ನಾವುಗಳು ಮಾಡಿದ್ರೆ ಬಿಡ್ತಿದ್ರಾ? ಎಂದು ಬಾತ್‌ ರೂಮ್‌ನಲ್ಲಿ ಮಾತಾಡ್ತೀರಾ. ಆಗ ವಿನಯ್‌ ಅವರಿಗೆ ಮೆಸೇಜ್‌ ತಲಪುತ್ತೆ. ನನ್ನತ್ರ ಮಾತಾಡಯ್ಯ ಎಂದು ನೇರವಾಗಿ ನಿಮ್ಮತ್ರ ಕೇಳ್ತಾರೆ. ಆದರೆ ಧ್ವನಿ ನಿಮ್ಮದು ಬರೋದೆ ಇಲ್ಲ. ಇದಕ್ಕೆ ಧೈರ್ಯ ಎಂದು ಹೇಳಬೇಕಾ?ʼʼಎಂದು ಪ್ರಶ್ನೆ ಇಟ್ಟರು ಕಿಚ್ಚ. ಈ ಬಗ್ಗೆ ಪ್ರತಾಪ್‌ ಮಾತನಾಡಿ ʻʻ’ವಿನಯ್ ಗೌಡ ಕುರಿತಾಗಿ ನಾನು ಮಾತನಾಡೋಕೆ ಹೋದಾಗ ಬೇರೆಯವರೆಲ್ಲ ಮಧ್ಯದಲ್ಲಿ ಮಾತನಾಡುತ್ತಾರೆ. ವಿನಯ್‌ ಕಡೆಯಿಂದ ತಪ್ಪಾದಾಗ ಕ್ಯಾಪ್ಟನ್‌ ರಕ್ಷಕ್ ಜತೆ ಮಾತನಾಡಲು ಹೋದೆ. ಕ್ಯಾಪ್ಟನ್ ಆಗಿ ರಕ್ಷಕ್ ರಿಯಾಕ್ಟ್ ಮಾಡಬೇಕಿತ್ತು ಎಂದು ನಾನು ಹೇಳಿದೆ. ಆದರೆ, ಕ್ಯಾಪ್ಟನ್ ರಕ್ಷಕ್ ನನಗೆ ‘ಗೂಬೆ’ ಅಂತೆಲ್ಲಾ ಹೇಳಿದರು’’ ಅಂತ ಸುದೀಪ್ ಬಳಿ ಡ್ರೋನ್ ಪ್ರತಾಪ್ ಹೇಳಿದರು.

ಇದನ್ನೂ ಓದಿ: BBK Season 10: ನಮ್ರತಾ ಮುಖವಾಡ ಕಳಚಿ ಬಿತ್ತು; ತನಿಷಾಗೆ ಹೆಚ್ಚಾಯ್ತು ಸಪೋರ್ಟ್‌; ಹೇಗಿದೆ ಸೋಷಿಯಲ್‌ ಮೀಡಿಯಾ ರೆಸ್ಪಾನ್ಸ್‌?

ಗೂಬೆ ಎಂದ ರಕ್ಷಕ್‌!

ʻʻಪ್ರತಾಪ್‌ ಅವರು ಕ್ಯಾಪ್ಟನ್‌ ಶಿಕ್ಷೆ ಕೊಡಬೇಕು ಎಂದರು. ನಾನು ಯಾರು ಅಲ್ಲ. ಬಿಗ್‌ ಬಾಸ್‌ ಏನು ಹೇಳುತ್ತಾರೋ ಹಾಗೇ ಮಾಡಬೇಕು. ಗೂಬೆ ತರ ಮಾತನಾಡಬೇಡಿ ಎಂದೇ ಅದನ್ನೇ ದೊಡ್ಡ ವಿಚಾರ ಮಾಡಿದ್ರುʼʼ ಅಂದರು. ಪ್ರತಾಪ್‌ ಕೂಡ ʻʻಸರಿಯಾಗಿ ಮಾತನಾಡಿ. ನಾನು ಗೂಬೆ ಅಂತಾನೇ ಕರಿತೀನಿ. ಏನು ಮಾಡ್ತೀಯಾ ಎಂತಲೇ ಕೇಳಿದ್ರುʼʼಎಂದರು. ಅದಕ್ಕೆ ರಕ್ಷಕ್‌ ಕೂಡ ʻʻಹೌದು.. ಇನ್ನೊಂದ್ಸಲಿ ಹೇಳ್ತೀನಿ ಏನಿವಾಗ ಅಂದಿದ್ದೆʼʼಎಂದರು.

ಆಗ ಕಿಚ್ಚ ಸುದೀಪ್‌ ಮಾತನಾಡಿ ʻʻಅಷ್ಟೆಲ್ಲ ಎಲ್ಲಾರೂ ಒದ್ದಾಡಿ ಬ್ಯಾಗ್‌ ಹಾಕಿಕೊಂಡು ಕೆಲಸ ಮಾಡುವಾಗ, ನೀವು ಒಂದು ನಿರ್ಧಾರ ತೆಗೆದುಕೊಂಡು ವಿನಯ್‌ ಅವರಿಗೆ ಮೈಕಲ್‌ ಅವರಿಗೆ ಸಹಾಯ ಮಾಡಿ ಅನ್ನಬಹುದಿತ್ತು. ಅಲ್ಲಿ ಸುಮಾರ್‌ ನಡೀತು. ಕ್ಯಾಪ್ಟನ್‌ ಆಗಿ ನಿರ್ಧಾರ ತೆಗೋಬೋದಿತ್ತು. ನಿಮ್ಮ ನಾಯಕತ್ವಕ್ಕೆ ನೀವು ಲಿಮಿಟ್‌ ಹಾಕಿಕೊಂಡಿದ್ರಿ. ಹಾಗೇ ನಿಮಗೊಂದು ಮಾತು ಕೇಳ್ತೀನಿ. ನೀವು ಯಾವಾಗಾದ್ರೂ ರೋಡ್‌ ಅಲ್ಲಿ ಹೋಗುವಾಗ ಗೂಬೆ ಎಂದು ನಿಮ್ಮನ್ನು ಯಾರಾದ್ರೂ ಕರೆದರೆ ಏನ್‌ ಮಾಡ್ತೀರಾ? ಒಬ್ಬ ಬುಲೆಟ್‌ ಪ್ರಕಾಶ್‌ ಮಗನಾಗಿ ನಾನು ನಿಮಗೆ ಕೇಳ್ತಾ ಇದ್ದೇನೆ. ನಿಮ್ಮ ಪ್ರಕಾರ ಇದು ಕಾಮನ್‌ ವರ್ಡ್‌ ಅಲ್ವಾ? ಸರಿಯಾದ ಉತ್ತರ ಇದ್ದರೆ ಗೂಬೆ ಅಂತ ಕರೆಸಿಕೊಳ್ಳಲು ರೆಡಿ ಇದ್ದೀರಾ? ಮೊದಲು ಕ್ಯಾಶುವಲ್. ನಂತರ ಈಗೋ ಆಗಿ ಟರ್ನ್ ಆಯ್ತು. ನಿಮಗೆ ಇದು ಓಕೆನಾ? ಎಂದು ಕೇಳಿದರು. ರಕ್ಷಕ್‌ ಈ ಬಗ್ಗೆ ಮಾತನಾಡಿ ʻʻಆ ಟೈಮ್‌ನಲ್ಲಿ ಹಾಗೆ ಮಾತನಾಡಿದೆ. ಆಮೇಲೆ ಗೊತ್ತಾಯಿತು ಅದು ತಪ್ಪು ಅಂತ. ಮಲಗಿದ್ದಾಗ ಹೋಗಿ ಸಾರಿ ಕೇಳಿದೆʼʼಎಂದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version