Site icon Vistara News

BBK SEASON 10: ಬುಲೆಟ್ ಪ್ರಕಾಶ್ ಮಗನಾಗಿ ಹೆಸರು ಉಳಿಸಿಕೊಳ್ಳಿ ಎಂದು ರಕ್ಷಕ್‌ಗೆ ಎಚ್ಚರಿಕೆ ಕೊಟ್ಟ ಸುದೀಪ್‌!

Kichcha Sudeep Gives Warning To Bullet Prakash Son Rakshak about statement

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಕೊನೆಯ ಪಂಚಾಯ್ತಿಯಲ್ಲಿ ಮಾಜಿ ಸ್ಪರ್ಧಿಗಳ ನಡೆಗೆ ಕಿಚ್ಚ ಗರಂ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10ರ ಫಿನಾಲೆ, ಜ.27 ಹಾಗೂ ಜ.28ರಂದು ನಡೆಯಲಿದೆ. ಕಿಚ್ಚ ಸುದೀಪ್‌ ಅವರು ಹಳೆಯ ಸ್ಪರ್ಧಿಗಳ ಹೇಳಿಕೆಗಳ ಬಗ್ಗೆ ತಿರುಗೇಟು ಕೊಟ್ಟಿದ್ದಾರೆ. ರಕ್ಷಕ್ ಅವರು ಡ್ರೋನ್ ಪ್ರತಾಪ್‌ ಬಳಿ ಒಂದಷ್ಟು ಕಿರಿಕ್ ಮಾಡಿದ್ದರು. ಸಂದರ್ಶನಗಳಲ್ಲಿ ‘ಬಿಗ್ ಬಾಸ್’ ವಿರುದ್ಧ ಮಾತನಾಡಿದ್ದರು. ಸುದೀಪ್ ಅವರು ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಪ್ರಸ್ತಾಪ ಮಾಡಿ, “ನಿಮ್ಮನ್ನು ದೇವರು ಒಳ್ಳೆಯದಾಗಿ ಇಟ್ಟಿರಲಿ ರಕ್ಷಕ್” ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್‌ ಮಾತನಾಡಿ ʻʻರಕ್ಷಕ್ ಅವರು ನಮ್ಮ ಹೆಮ್ಮೆಯ ಕಲಾವಿದ ಬುಲೆಟ್ ರಕ್ಷಕ್ ಪುತ್ರ ಅಲ್ವಾ? ರಕ್ಷಕ್ ಅಲ್ವಾ ಅವರು ಹೆಸರು..ಅವರಿಗೆ 11, 12 ವಯಸ್ಸು ಆಗಿರಬೇಕು ಅಲ್ವಾ? ಬುಲೆಟ್ ಪ್ರಕಾಶ್ ಅವರ ಮಗನಾಗಿ ಹೆಸರು ಉಳಿಸಿಕೊಳ್ಳಿ. ನೀವು ಈ ಮನೆಯಿಂದ ಹೊರಗಡೆ ಹೋಗಿ ಸಂದರ್ಶನಗಳಲ್ಲಿ ಬಿಗ್ ಬಾಸ್ ಬಗ್ಗೆ ಮಾತಾಡಿರೋದನ್ನು ನಾವು ಕೇಳಿದ್ದೇವೆ. ದೇವರು ನಿಮಗೆ ಚೆನ್ನಾಗಿ ಇಟ್ಟಿರಲಿ.” ಎಂದು ಕಿಚ್ಚ ಸುದೀಪ್ ಅವರು ರಕ್ಷಕ್‌ಗೆ ಹೇಳಿದ್ದಾರೆ.

ರಕ್ಷಕ್‌ ಹೇಳಿದ್ದೇನು?

ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ರಕ್ಷಕ್‌ ಅವರು ಮಾತನಾಡಿʻʻ ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು. ಇದಕ್ಕೆ ಕಿಚ್ಚು ಅವರು ಟಾಂಗ್‌ ಕೊಟ್ಟರು.

ಇದನ್ನೂ ಓದಿ: BBK SEASON 10:  ಸಂಗೀತಾ ಬಳಿಕ ಫಿನಾಲೆಗೆ ಕಾಲಿಟ್ಟ ಸಂತು-ಪಂತು ಜೋಡಿ!

ಡ್ರೋನ್‌ ಪ್ರತಾಪ್‌ ವಿಚಾರ

ಮುಂಚೆ ಡ್ರೋನ್‌ ಪ್ರತಾಪ್‌ ಅವರು ವಿನಯ್‌ ಬಗ್ಗೆ ʻʻʻಯಾರೆಲ್ಲ ವಿನಯ್‌ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ವಿನಯ್‌ ಅವರ ಬೆಡ್‌ಗೆ ಸೇರುತ್ತಿದೆ. ಜತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್‌ ಹೇಳಲಿಲ್ಲ. ಸರಿ ಎಂದುಕೊಂಡೇ ಜತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು’’ ಎಂದು ಡ್ರೋನ್ ಪ್ರತಾಪ್‌ ಹೇಳಿದ್ದರು. ರಕ್ಷಕ್‌ ಮತ್ತೆ ಮನೆಗೆ ಬಂದಾಗ ಬಗ್ಗೆ ರಕ್ಷಕ್‌ ಕ್ಯಾತೆ ತೆಗೆದಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್​ಶೀಟ್ ನೀಡಿ, ನನ್ನ ಬೆಡ್​ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದ್ದರು. ಕಿಚ್ಚ ಅವರು ಹಾಗೇಯೇ ಇಶಾನಿ ಕೂಡ ಮನೆಗೆ ಬಂದಾಗ ಡ್ರೋನ್ ಪ್ರತಾಪ್‌ ಮಾತನಾಡುತ್ತಿದ್ದಾಗ, ‘’ಕಾಗೆ ಕಾ.. ಕಾ.. ಅಂತಿದೆ’’ ಎಂದು ಚುಚ್ಚು ಮಾತನ್ನಾಡಿದ್ದರು.

ಕಿಚ್ಚ ಸುದೀಪ್‌ ಈ ಬಗ್ಗೆಯೂ ಮಾತನಾಡಿ ʻʻಕಾಗೆ ಕಕ್ಕಾ ಮಾಡಿಕೊಂಡು ಸಿಂಪಂಥಿಯಲ್ಲಿ ಗೆದ್ದುಕೊಂಡು ಬಂದಿದೆ. ವಾವ್‌ ಇಶಾನಿ!ಯಾವ ಆ್ಯಂಗಲ್‌ನಲ್ಲಿ ನೀವು ಸೋತು ಹೊರಗಡೆ ಹೋಗಿ ಕಲಿತು ಒಳಗಡೆ ಬಂದ್ರಿ ಎಂದು ಅನ್ನಿಸುತ್ತೇ ಹೇಳಿʼʼಎಂದುತಿರುಗೇಟು ಕೊಟ್ಟರು. ಹಾಗೇ ನಮ್ರತಾ ಅವರಿಗೆ ಸ್ನೇಹಿತ್‌ ಅವರು ʻನಿಮ್ಮಗೋಸ್ಕರ ಹೊರಗಡೆ ನಾನು ಪೈಟ್‌ ಮಾಡುತ್ತಿದ್ದೇನೆʼ ಎಂದಿದ್ದರು. ಈ ಬಗ್ಗೆ ಕಿಚ್ಚ ಸುದೀಪ್‌ ಮಾತನಾಡಿ ʻʻಏನು ನಡೆದಿದೆ ಅಂತೆ ಹೊರಗಡೆ?ʼʼಎಂದು ಪ್ರಶ್ನೆ ಇಟ್ಟರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version