Site icon Vistara News

BBK Season 10: ಭಾಗ್ಯಶ್ರಿಗೆ ಮಾತಾಡೋ ಅಧಿಕಾರ ಇಲ್ಲ ಎಂದು ಯಾವ ಮುಠ್ಠಾಳ ಹೇಳಿದ್ದು? ತುಕಾಲಿ, ವಿನಯ್‌ಗೆ ರುಬ್ಬಿದ ಕಿಚ್ಚ!

bhagyashree vinay bigg boss kannada

ಬೆಂಗಳೂರು: ಕಳೆದ ವಾರ ಭಾಗ್ಯಶ್ರೀ ಅವರು ಸೇಫ್‌ (BBK Season 10) ಆಗಿರುವುದು ಗೊತ್ತೇ ಇದೆ. ಆದರೆ ಈ ವಾರ ಆರಂಭಿಕ ದಿನದಿಂದಲೂ ವಿನಯ್ ಗೌಡ ಹಾಗೂ ತುಕಾಲಿ ಸಂತೋಷ್ (Tukali Santhosh) ಅವರು ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡುತ್ತಲೇ ಬಂದಿದ್ದರು. ಭಾಗ್ಯಶ್ರೀ ಅವರು ಕೂಡ ಸ್ನೇಹಿತ್‌ ಅವರನ್ನು ನಾಮಿನೇಟ್‌ ಮಾಡಿದರು. ಈ ಬಗ್ಗೆ ಸಂತೋಷ್ ಹಾಗೂ ವಿನಯ್ ಗೌಡ ಭಾಗ್ಯಶ್ರೀಯನ್ನು ಪ್ರಶ್ನೆ ಮಾಡಿದ್ದರು. ಇದೀಗ ಈ ವಿಚಾರವನ್ನು ಸುದೀಪ್‌ ಮಾತನಾಡಿದ್ದು, ʻʻನಾಮಿನೇಶನ್‌ ಹಕ್ಕು ಎಲ್ಲರಿಗೂ ಇದೆ, ಅದನ್ನು ಪ್ರಶ್ನೆ ಮಾಡುವ ಅಧಿಕಾರ ಯಾರು ಕೊಟ್ಟರು?ʼʼಎಂದು ಸುದೀಪ್‌ ಅವರು ಇಬ್ಬರಿಗೂ ಗರಂ ಆಗಿಯೇ ಹೇಳಿದ್ದಾರೆ. ಅಷ್ಟೇ ಅಲ್ಲದೇ ವಿನಯ್‌ ಕೂಡ ʻನಾನು ಮತ್ತು ತುಕಾಲಿ ಇಬ್ಬರು ಜೋಕರ್‌ ಆದೆವುʼ ಎಂದು ಹೇಳಿದರು.

ಸುದೀಪ್‌ ನಾಮಿನೇಶನ್‌ ಅನಿಸಿಕೆ ಬಗ್ಗೆ ವಿನಯ್‌ ಅವರಿಗೆ ಕೇಳಿದರು. ಆಗ ವಿನಯ್‌ ಅವರು ಭಾಗ್ಯಶ್ರೀ ಅವರು ಸ್ನೇಹಿತ್‌ ಅವರನ್ನು ನಾಮಿನೇಟ್‌ ಮಾಡಿರುವ ವಿಚಾರವನ್ನು ಹೇಳಿದರು. ಸ್ನೇಹಿತ್‌ ಅವರು ಈ ಬಗ್ಗೆ ಮಾತನಾಡಿ ʻʻಭಾಗ್ಯಶ್ರೀ ಅವರು ನನ್ನನ್ನು ನಾಮಿನೇಟ್‌ ಮಾಡಿದ್ದು ಏಕೆಂದರೆ, ಪ್ರತಾಪ್‌ ಅವರ ಕೈಯಲ್ಲಿ ಇದ್ದ ಪಾಸ್‌ ಕಿತ್ತುಕೊಳ್ಳಲು ನಾನು, ಕಾರ್ತಿಕ್‌ , ಮೈಕಲ್‌ಗೆ ಸಹಾಯ ಮಾಡಿದೆ. ನೀವು ಅವರಿಗೆ ಕಸಿದು ಕೊಳ್ಳಲು ಏಕೆ ಬಿಟ್ರಿ, ನೀವೆ ಇಟ್ಟುಕೊಳ್ಳಬೇಕಿತ್ತು ಎಂದರು. ನನ್ನನ್ನು ಮೋಟಿವೇಶನ್‌ ಮಾಡಲು ಭಾಗ್ಯಶ್ರೀ ಅವರು ಈ ರೀತಿ ಹೇಳಿದರು. ನಾಮಿನೇಟ್‌ ಮಾಡಿದರು ಎಂದು ಸುಮ್ಮನಾದೆʼʼಎಂದರು.

ಇದನ್ನೂ ಓದಿ: BBK Season 10: ಡ್ರೋನ್‌ ಪ್ರತಾಪ್‌ಗೆ ಕ್ರಿಮಿನಲ್​ ಬುದ್ಧಿ ಇಲ್ಲ ಎಂದ ಕಿಚ್ಚ; ವಿಲನ್‌ ಆದ ವಿನಯ್‌!

ಯಾವ ಮುಠ್ಠಾಳ ಹೇಳಿದ್ದು ನಿಮಗೆ?

ಸುದೀಪ್‌ ಮಾತನಾಡಿ ʻಕಿಚನ್‌ ಅಲ್ಲಿ ನೀವು (ಸ್ನೇಹಿತ್‌) ಹೇಳಿದ್ರಿ, ಭಾಗ್ಯಶ್ರೀ ನಾಮಿನೇಟ್‌ ನನ್ನನ್ನು ಮಾಡಿದ್ದು, ಅದಕ್ಕೆ ನಾನೇ ಸಮ್ಮನಿದ್ದೀನಿ. ತುಕಾಲಿ, ವಿನಯ್‌ಗೆ ಯಾಕ್‌ ಬೇಕಿದುʼʼ?ಎಂದು. ತುಕಾಲಿಗೆ ಸುದೀಪ್‌ ಮಾತನಾಡಿ ʻʻನೀವು ಅತ್ರಿ. ಲೈಫ್‌ ಬಗ್ಗೆ ಸ್ಟಾರ್ಟ್‌ ಮಾಡಿದ್ರಿ. ಭಾಗ್ಯಶ್ರೀ ಅವರು ಯಾರು ತುಕಾಲಿ ಅವರೇ? ಥೂ ಯಾರು ಅವರು? ಭಾಗ್ಯಶ್ರೀ ಸ್ಪರ್ಧಿನಾ? ಇನ್ನೊಂದು ಸಲ ಕೇಳ್ತಾ ಇದ್ದೀನಿʼʼ ಎಂದರು. ಅದಕ್ಕೆ ತುಕಾಲಿ ಅವರು ಭಾಗ್ಯಶ್ರೀ ಸ್ಪರ್ಧಿ ಎಂದರು.

ಸುದೀಪ್‌ ಮಾತನಾಡಿ ʻʻಭಾಗ್ಯಶ್ರಿ ಕಂಟಸ್ಟೆಂಟ್‌ ಅಂದ ಮೇಲೆ ಅವರಿಗೆ ಮಾತನಾಡುವ ಅಧಿಕಾರಿ ಇಲ್ಲ ಎಂದು ಯಾವ ಮುಠ್ಠಾಳ ಹೇಳಿದ್ದು ನಿಮಗೆ? ನಿಮ್ಮ ಅಭಿಪ್ರಯಾ ಅವರ ಅಭಿಪ್ರಾಯ ಆಗಬೇಕಾ? ಸೀರಿಯಲ್‌ ತರ ಓವರ್‌ ಆ್ಯಕ್ಟ್‌, ಡ್ರಾಮಾ ಮಾಡಬೇಡಿ ಎನ್ನುತ್ತೀರಿ. ನಾಟಕ ಮಾಡಬೇಡಿ ಅಂತೀರಾ..ತಡಕ್ಕೊಂಡು ಕೂತ್ತಿದ್ದೀನಿ ಅಂತಿದ್ರಿ! ಏನದು? ಕಾಮಿಡಿ ಎಂದು ಅಡವಂಟೇಜ್‌ ಮಾಡ್ಕೋಬೇಡಿ. ಮಾತು ಎತ್ತರೆ ತಡಕ್ಕೊಂಡು ಕೂತ್ತಿದ್ದೀನಿ ಅಂತಿರಲ್ಲ, ಡ್ರಾಮಾ ಮಾಡ್ತಾ ಇರೋದು ಯಾರು? ಭಾಗ್ಯಶ್ರೀ ಅವರಿಗೂ ಕಾರಣ ಇರುತ್ತೆ. ಅವರ ಕಾರಣ ವೀಕ್‌ ಇದ್ರೂ ಜನ ನೋಡ್ತಾ ಇದ್ದಾರೆ. ನಿಮಗೆ ಕೋಪ ಏನು ಗೊತ್ತ ಭಾಗ್ಯಶ್ರೀ ಅವರು ಹೋದ ವಾರ ಮನೆಯಿಂದ ಹೊರಗೆ ಹೋಗಿಲ್ಲ. ಅದು ಉರೀತಾ ಇರೋದು, ಅದು ಅಲ್ಲದೇ ಈ ವಾರ ಅವರು ನಾಮಿನೇಟ್‌ ಆಗಿಲ್ಲ. ಇದು ನಿಮಗೆ ಮತ್ತು ವಿನಯ್‌ ಅವರಿಗೆ ಕಾಡ್ತಾ ಇದೆʼʼಎಂದು ತುಕಾಲಿಗೆ ರುಬ್ಬಿದರು ಸುದೀಪ್‌. ಬಳಿಕ ಸುದೀಪ್‌ ಅವರು ವಿನಯ್‌ಗೆ ʻʻವಿನಯ್‌ ಅವರೇ ಈಗ ಹೇಳಿ ಡ್ರಾಮಾ ಮಾಡಿದ್ದು ಯಾರು?ʼʼ ಎಂದು ಕೇಳಿದರು.

ಇದನ್ನೂ ಓದಿ: BBK Season 10: ಇಡೀ ವಾರ ಕಂಡಿದ್ದು ನಮ್ರತಾ ಕೈಯಲ್ಲಿ ಇರುವ ಚಮಚ ಮಾತ್ರ; ಕಿಚ್ಚ ಸುದೀಪ್‌!

ವಿನಯ್‌ ಮಾತನಾಡಿ ʻʻ‘ಡ್ರಾಮಾ ಶುರು ಮಾಡಿದ್ದು ಸಂತೋಷ್. ಮುಂದುವರಿಸಿಕೊಂಡು ಹೋಗಿದ್ದು ನಾನು. ಆ ಸಂದರ್ಭದಲ್ಲಿ ನಾವಿಬ್ಬರೂ ಜೋಕರ್ ರೀತಿ ಕಾಣುತ್ತಿದ್ದೆವು’ ಎಂದರು ವಿನಯ್. ‘ಸಂತೋಷ್ ಅವರೇ ನಿಮಗೇ ಬೇಕಾಗಿದ್ದು ಇದೇ ಅಲ್ಲವೇ? ಜೋಕರ್ ರೀತಿ ಕಾಣೋದು’ ಎಂದು ಸುದೀಪ್ ಗಂಭೀರವಾಗಿಯೇ ಹೇಳಿದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version