Site icon Vistara News

BBK SEASON 10: ನಾನು ಹೇಟ್‌ ಮಾಡೋರು ಜನರಿಗೆ ಇಷ್ಟ,ಅವಮಾನ ಆಗ್ತಿದೆ; ನಮ್ರತಾ ಗೌಡ!

Namratha Gowda scared after elimination

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಏಳನೇ ವಾರ ನೀತು ಮನೆಯಿಂದ ಹೊರಗೆ ಹೋಗಿದ್ದಾರೆ. ಐವತ್ತು ದಿನಗಳ ಕಾಲದ ಏಳುಬೀಳಿನ ಹಾದಿಯನ್ನು ನೋಡಿ ಸ್ಪರ್ಧಿಗಳು ಖುಷಿಪಟ್ಟರು. ನಂತರ ನಾಮಿನೇಷನ್‌ ಲೀಸ್ಟ್‌ನಲ್ಲಿರುವ ಸ್ಪರ್ಧಿಗಳಲ್ಲಿ ಮೊದಲು ನಮ್ರತಾ ಅವರು ಸೇಫ್‌ ಎಂದು ಕಿಚ್ಚ ಘೋಷಣೆ ಮಾಡಿದರು. ನಂತರ ಸೇಫ್‌ ಆಗಿದ್ದು, ತುಕಾಲಿ ಸಂತೋಷ್. ಸ್ನೇಹಿತ್‌ ಕೂಡ ಸೇಫ್‌ ಆದರು. ಆ ಹಂತದಲ್ಲಿ ನಾಮಿನೇಷನ್ ಲಿಸ್ಟ್‌ನಲ್ಲಿ ಉಳಿದವರು ನೀತು ಮತ್ತು ಸಿರಿ. ಇದಕ್ಕೂ ಮೊದಲು ನಮ್ರತಾ ಅವರು ಪ್ರತಾಪ್‌ ವಿಚಾರವಾಗಿ ಕಣ್ಣೀರು ಹಾಕಿದ್ದಾರೆ. ಮನೆಯಿಂದ ಹೊರಗೆ ಹೋಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ರತಾ ಹೇಟ್ ಮಾಡುವ, ಪ್ರತಿಸ್ಪರ್ಧಿಗಳೇ ಅಲ್ಲ ಎಂದುಕೊಂಡವರು ಮೊದಲು ಸೇವ್ ಆಗುತ್ತಿದ್ದಾರಲ್ಲ ಎನ್ನುವ ಚಿಂತೆ ಅವರನ್ನು ಕಾಡಿದೆ.

ಈ ವಾರ ಮನೆಯಲ್ಲಿ ಜನರು ನೀಡಿದ ವೋಟ್‌ ಆಧಾರದ ಮೇಲೆ ಸ್ಪರ್ಧಿಗಳನ್ನು ಸೇವ್‌ ಮಾಡಲಾಗಿತ್ತು. ಪ್ರತಾಪ್‌, ತನಿಷಾ, ಸಂಗೀತಾ, ವಿನಯ್‌ ಶನಿವಾರ ಸೇವ್‌ ಆದರೆ, ಭಾನುವಾರ ನಮ್ರತಾ ಸೇವ್‌ ಎಂದು ಸುದೀಪ್‌ ಅನೌನ್ಸ್‌ ಮಾಡಿದರು. ನಮ್ರತಾ ಚಮಚ ಎಂತಲೇ ಜನರು ಅವರಿಗೆ ಪಟ್ಟ ಕೊಟ್ಟಿದ್ದಾಗಿದೆ. ಮುಖ್ಯವಾಗಿ ವಿನಯ್‌, ಸ್ನೇಹಿತ್‌, ನಮ್ರತಾ ಗ್ರೂಪಿಸಿಮ್‌ ಮಾಡುತ್ತಾರೆ ಎಂದು ಜನರಿಗೆ ಅಸಮಾಧಾನ ಕೂಡ ಇದೆ.

ವಿನಯ್‌, ಸಂಗೀತಾ ಹಾಗೂ ಸ್ನೇಹಿತ್‌ ಮುಂದೆ ನಮ್ರತಾ ಕಣ್ಣೀರಿಟ್ಟು ʻʻನಾನು ಪ್ರತಿ ವಾರ ವೀಕ್ ಆಗ್ತಾ ಇದೀನಿ. ನನಗೆ ಭಯ ಆಗ್ತಾ ಇದೆ. ಅವರು ತಪ್ಪು, ಇರಿಟೇಷನ್ ಎಂದುಕೊಂಡವರೇ ಜನರಿಗೆ ಇಷ್ಟ ಆಗ್ತಾ ಇದಾರೆ. ಜೋರು ಧ್ವನಿಯಲ್ಲಿ ಕೂಗಲು ಇಷ್ಟವಿಲ್ಲ. ನನಗೆ ಮನೆಗೆ ಹೋಗಬೇಕು. ನನಗೆ ಇಲ್ಲಿ ಇರಲು ಇಷ್ಟ ಇಲ್ಲ. ನನಗೆ ಕೋಪ ಇದೆ. ನಾನು ತಪ್ಪ, ಅವರು ಸರಿನಾ? ಜನರು ಯಾವ ರೀತಿ ಜಡ್ಜ್ ಮಾಡ್ತಾ ಇದಾರೆ. ನಾನು ಕಳಪೆ ಅಲ್ಲ, ಉತ್ತಮ ಅಲ್ಲ, ಕ್ಯಾಪ್ಟನ್ ಅಲ್ಲ, ಕಿಚ್ಚನ ಚಪ್ಪಾಳೆ ಇಲ್ಲ. ನನಗೆ ನಟನೆ ಬರುತ್ತದೆ. ಹೊರಗೆ ಹೋಗಿ ಆ್ಯಕ್ಟಿಂಗ್ ಮಾಡ್ತೀನಿ. ನನಗೆ ಇಲ್ಲಿ ಪ್ರತಿ ವಾರ ಅವಮಾನ ಆಗುತ್ತಿದೆ. ಸೇವ್‌ ಆಗುವುದು ದೊಡ್ಡದಲ್ಲ. ಕೊನೆಯ ತನಕ ಬಂದು ಸೇವ್‌ ಆಗೋದು ಇದೆಯಲ್ಲ. ಅದರಷ್ಟು ಅವಮಾನ ಯಾವುದೂ ಇಲ್ಲ.’ ಎಂದು ಬೇಸರ ಹೊರಹಾಕಿದರು ನಮ್ರತಾ.

ಇದನ್ನೂ ಓದಿ: BBK SEASON 10 : ಏಳನೇ ವಾರ ಮನೆಯಿಂದ ಹೊರಬಿದ್ದ ನೀತು ವನಜಾಕ್ಷಿ

ಈ ಮುಂಚೆ ನಮ್ರತಾ ಅವರ ಪಾಲಕರು ಇಂಡಿಪೆಂಡೆಂಟ್‌ ಆಗಿ ಆಡು ಎಂದು ಪತ್ರವನ್ನೂ ಕಳಿಸಿದ್ದರು. ಕೆಲವರಿಗೆ ನಮ್ರತಾ ಈ ಗ್ಯಾಂಗ್‌ನಲ್ಲಿ ಇರುವುದು ಇಷ್ಟವಿಲ್ಲ.

ಮೊದಲಿಂದಲೂ ನಮ್ರತಾ ಅವರ ಚಮಚಾಗಿರಿ ಬಗ್ಗೆ ಸಾಕಷ್ಟು ಚರ್ಚೆಗಳು ಮನೆಯಲ್ಲಿ ಆಗಿದ್ದವು. ಈ ಮುಂಚೆ ಕಿಚ್ಚನ ವಾರದ (BBK Season 10) ಪಂಚಾಯಿತಿಯಲ್ಲಿ ಪ್ರೇಕ್ಷಕರು ಸ್ಪರ್ಧಿಗಳಿಗೆ ಉಡುಗೊರೆ ಜತೆ ಪತ್ರವನ್ನು ಕಳುಸಹಿಸಿದ್ದರು. ನಮ್ರತಾಗೆ ಪತ್ರದಲ್ಲಿ ʻನಿಮಗೆ ದಾದಾಗಿರಿ ಮಾಡುವುದಕ್ಕೆ ಬರುವುದಿಲ್ಲ. ಚಮಚಾಗಿರಿ ಮಾಡಿಕೊಂಡು ಇರಬೇಡಿ. ನಮ್ರತಾರನ್ನ ನಮ್ಮ ಕಣ್ಣಲ್ಲಿ ಹಾಗೆ ನೋಡೋಕೆ ಆಗ್ತಾಯಿಲ್ಲ’’ ಎಂದು ಬರೆಯಲಾಗಿತ್ತು. ಆಗ ನಮ್ರತಾ ಅವರು ʻನಾನು ಯಾರಿಗೂ ಚಮಚ ಆಗಿಲ್ಲ. ಇರೋದೂ ಇಲ್ಲʼ ಎಂದಿದ್ದರು. ಆದರೀಗ ಕಿಚ್ಚ ನಮ್ರತಾಗೆ ಆ ಚಮಚ ಮಾತ್ರ ಉಳಿದುಕೊಂಡಿದೆ. ಇಡೀ ವಾರ ವೀಕ್ಷಕರಿಗೆ ಕಾಣಿಸಿದ್ದು ಆ ಚಮಚ ಮಾತ್ರ’ ಎಂದಿದ್ದರು. ನಮ್ರತಾ ಈ ಮಾತು ಕೇಳುತ್ತಿದ್ದಂತೆ ತಲೆ ಬಗ್ಗಿಸಿದವರೂ ತಲೆ ಎತ್ತಲೇ ಇಲ್ಲ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version