Site icon Vistara News

Bigg Boss Kannada | ಪ್ರಶಾಂತ್‌ ಸಂಬರಗಿ ವಿರುದ್ಧ ಕನ್ನಡಪರ ಸಂಘಟನೆ ಹೋರಾಟಗಾರರಿಂದ ಪ್ರತಿಭಟನೆ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಪ್ರಶಾಂತ್‌ ಸಂಬರಗಿ ಮತ್ತು ರೂಪೇಶ್‌ ರಾಜಣ್ಣ ಕಿತ್ತಾಟ ನಿಲ್ಲುತ್ತಿಲ್ಲ. ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ನಡುವೆ ಕಳೆದ ಸಂಚಿಕೆಯಲ್ಲಿ ವಾದಗಳು ನಡೆದಿದ್ದವು. ʻʻನಾನು ಬಹಳ ಕನ್ನಡ ಹೋರಾಟ ಮಾಡಿದ್ದೇನೆ. ಅದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ, ಪತ್ರಗಳು ಇವೆʼʼಎಂದು ಆರ್ಯವರ್ಧನ್‌ ಜತೆ ಪ್ರಶಾಂತ್‌ ಸಂಬರಗಿ ಅವರು ರೂಪೇಶ್‌ ರಾಜಣ್ಣ ಕುರಿತು ಹೇಳಿಕೊಂಡಿದ್ದಾರೆ.

ಮಾತು ಮುಂದುವರಿಸಿದ ಪ್ರಶಾಂತ್‌ ʻʻರೂಪೇಶ್‌ ಅವರು ತಾವೇ ಬುದ್ಧಿವಂತ ಎಂದು ಅಂದುಕೊಂಡಿದ್ದಾರೆ. ನಾನು ನನ್ನ ಜೀವನದಲ್ಲಿ ಎಲ್ಲ ಕನ್ನಡ ಹೋರಾಟಗಾರರಿಗೂ ಬಿಸಿ ಮುಟ್ಟಿಸಿದ್ದೇನೆ. ಒಬ್ಬರನ್ನೂ ಬಿಟ್ಟಿಲ್ಲ, ಸರಿಯಾಗಿ ಬಿಸಿ ಮುಟ್ಟಿಸಿದ್ದೇನೆʼʼಎಂದಿದ್ದಾರೆ. ಅದೇ ಸಮಯಕ್ಕೆ ರೂಪೇಶ್‌ ರಾಜಣ್ಣ ಅವರು ಪ್ರಶಾಂತ್‌ ಅವರ ಮುಂದೆ ತೊಡೆ ತಟ್ಟಿ ನಿಂತು ʻʻತಾಕತ್‌ ಇದ್ದರೆ ನನ್ನ ಮುಂದೆ ನಿಲ್ಲಬೇಕು. ಅದು ನಿಜವಾದ ತಾಕತ್‌ʼʼಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ | Bigg Boss Kannada | ಸೂಪರ್‌ ಪವರ್‌ ಗೇಮ್‌ನಲ್ಲಿ ಸ್ಪರ್ಧಿಗಳ ಹಣಾಹಣಿ!

ಇದೀಗ ಈ ಬಗ್ಗೆ ಕನ್ನಡಪರ ಸಂಘಟನೆಗಳ ಸದಸ್ಯರು ಒಟ್ಟು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಬಿಗ್‌ ಬಾಸ್‌ ಮನೆಯ ಸೆಟ್‌ ಹಾಕಿರುವ ಬಿಡದಿ ಬಳಿಯ ಇನ್ನೋವೇಟಿವ್‌ ಫಿಲ್ಮ್‌ ಸಿಟಿ ಮುಂದೆ ಪ್ರತಿಭಟನೆ ನಡೆಸಿ ಕಲರ್ಸ್‌ ಕನ್ನಡ ವಾಹಿನಿ ವಿರುದ್ಧ ಘೋಷಣೆ ಕೂಗಿದ್ದಾರೆ. ʻʻತಕ್ಷಣವೇ ಪ್ರಶಾಂತ್‌ ಸಂಬರಗಿ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಆಚೆ ಕಳುಹಿಸಬೇಕು. ಇಲ್ಲದಿದ್ದರೆ ಮನೆಗೆ ನುಗ್ಗಬೇಕಾಗುತ್ತದೆʼʼ ಎಂದು ಕನ್ನಡಪರ ಸಂಘಟನೆಗಳ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಬಝರ್ ವಿಚಾರಕ್ಕೆ ಸಖತ್‌ ವೈರಲ್‌ ಆಯ್ತು ಸ್ಕ್ರೀನ್‌ ಶಾಟ್‌

ಆಟದ ವೇಳೆ ಪ್ರಶಾಂತ್ ಸಂಬರಗಿ ಅವರೇ ಮೊದಲು ಬಝರ್ ಒತ್ತಿರುವುದು ಎಂದು ‘ಬಿಗ್ ಬಾಸ್’ ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ವಾದಿಸಿದ್ದಾರೆ. ಪ್ರಶಾಂತ್ ಸಂಬರಗಿ ಅವರೇ ಮೊದಲು ಬಝರ್ ಒತ್ತಿರುವುದಕ್ಕೆ ಕೆಲ ಸ್ಕ್ರೀನ್ ಶಾಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಏನಿದು ಟಾಸ್ಕ್‌?
ಪ್ರತಿ ಬಾರಿ ಬಿಗ್‌ ಬಾಸ್‌ ಅಲರ್ಟ್‌ ಸೌಂಡ್‌ ಕೊಟ್ಟಾಗ, ಸದಸ್ಯರು ಬಜರ್‌ ಒತ್ತಬೇಕು. ಯಾರು ಮೊದಲು ಬಜರ್‌ ಒತ್ತುತ್ತಾರೋ ಅವರು ತನ್ನ ಪ್ರತಿ ಸ್ಪರ್ಧಿಗಳನ್ನು ಆರಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ. ಟಾಸ್ಕ್‌ನಲ್ಲಿ ಗೆದ್ದ ಸದಸ್ಯ ವಿಶೇಷ ಪವರ್‌ ಪಡೆಯುತ್ತಾನೆ. ಅತಿ ಹೆಚ್ಚು ಬಾರಿ ಬಜರ್‌ ಒತ್ತುವ ಸದಸ್ಯ ಮುಂದಿನ ಬಾರಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ.

ಎರಡನೇ ಬಾರಿ ಬಝರ್ ಆದಾಗ, ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರಗಿ ಒಂದೇ ಸಮಯಕ್ಕೆ ಬಝರ್ ಒತ್ತಿದರು. ‘’ಪ್ರಶಾಂತ್ ಸಂಬರಗಿ ಮೊದಲು ಬಝರ್ ಒತ್ತಿದರು’’ ಎಂದು ಅನುಪಮಾ ಗೌಡ ಹೇಳಿದ್ದರು. ಆಗ, ‘’ನಾನು ಮೊದಲು ಒತ್ತಿದ್ದು’’ ಎಂದು ರೂಪೇಶ್ ರಾಜಣ್ಣ ಅವರ ವಾದಿಸಿದ್ದರು. ಆನಂತರ ರೂಪೇಶ್ ರಾಜಣ್ಣ ರೊಚ್ಚಿಗೆದ್ದಿದ್ದರು. ಆಟದಿಂದ ಹೊರ ನಡೆಯುವುದಾಗಿ ಬೆದರಿಕೆ ಒಡ್ಡಿದ್ದರು.

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಕನ್ನಡಮ್ಮನ ಹಬ್ಬದ ದಿನ ಹೆತ್ತಮ್ಮನ ನೆನಪು!

Exit mobile version