Site icon Vistara News

BBK Season 10: ಪ್ರತಾಪ್‌ಗೆ ಇಷ್ಟ್ರಲ್ಲೇ ಐತೆ ಎಂದಿದ್ದ ರಕ್ಷಕ್; ಸಿಡಿಯಲೇ ಇಲ್ಲ ಬುಲೆಟ್‌!

Rakshak Bullet Sangeetha vinay Gowda bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್‌ ನಾಲ್ಕನೇ ವಾರಕ್ಕೆ ಹೊರಬಿದ್ದಿದ್ದಾರೆ. ಆದರೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ರಕ್ಷಕ್‌ ಹೊರ ಹೋಗಿರುವ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮುಖ್ಯ ಕಾರಣ ಅವರು ಪ್ರತಾಪ್ ವಿಚಾರವಾಗಿ ನಡೆದುಕೊಳ್ಳುತ್ತಿದ್ದ ರೀತಿ. ‘ಬೇಜಾನ್ ಕೊಬ್ಬು ತೋರಿಸ್ತಾ ಇದಾನೆ. ಅವನಿಗೆ ಇಷ್ಟ್ರಲ್ಲೇ ಕೊಡ್ತೀನಿ’ ಎಂದಿದ್ದರು ರಕ್ಷಕ್. ಅಷ್ಟರಲ್ಲೇ ಮನೆಯಿಂದ ಹೊರ ಹೋಗಿದ್ದಾರೆ. ಇನ್ನೊಂದು ಕಡೆ ವಿನಯ್‌ ಅವರು ಕೊನೆಯ ಹಂತದ ವರೆಗೆ ಸೇಫ್‌ ಆಗದೇ ಇರುವುದು ಮನೆಮಂದಿಗೆ ಶಾಕ್‌ ಆಗಿದೆ. ಸಂಗೀತಾ ಫ್ಯಾನ್ಸ್‌ ಕಮೆಂಟ್‌ನಲ್ಲಿ ʻವಿನಯ್‌ಗೆ ಈ ಗತಿ ಬರ್ಬಾರ್ದಿತ್ತುʼ ಎಂದು ಕಮೆಂಟ್‌ ಮಾಡಿದ್ದಾರೆ.

ರಕ್ಷಕ್ ಬುಲೆಟ್ ಅವರನ್ನು ಮೈಕೆಲ್ ಅಜಯ್, ತನಿಷಾ ಕುಪ್ಪಂಡ ಅವರು ನಾಮಿನೇಟ್ ಮಾಡಿದ್ದರು. ಒಟ್ಟು 9 ಮಂದಿ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್‌ನಲ್ಲಿ ಸಿರಿ ಮತ್ತು ವರ್ತೂರು ಸಂತೋಷ್ ಸೇಫ್ ಆಗಿದ್ದರು. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್‌ನಲ್ಲಿ ಕೊನೆಗೆ ಉಳಿದವರು ವಿನಯ್ ಮತ್ತು ರಕ್ಷಕ್ ಮಾತ್ರ. ಅದರಲ್ಲಿ ಅಂತಿಮವಾಗಿ ರಕ್ಷಕ್ ಹೊರಗೆ ಬಂದರು.

ವಿನಯ್‌ಗೆ ಈ ಗತಿ ಬಂತಾ?ʼ

ವಿಶೇಷ ಅಂದರೆ ಪ್ರಬಲ ಸ್ಪರ್ಧಿಯಾಗಿರುವ ವಿನಯ್‌ ಕೊನೆಯ ಹಂತದ ವರೆಗೆ ಸೇಫ್‌ ಆಗದೇ ಇರುವುದು ಮನೆಮಂದಿಗೆ ಶಾಕ್‌ ಆಗಿದೆ. ರಕ್ಷಕ್‌ ಹಾಗೂ ವಿನಯ್‌ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ ಎಂದು ಸುದೀಪ್‌ ಅನೌನ್ಸ್‌ ಮಾಡಿದ್ದರು. ಅದೇ ರೀತಿ ವಿನಯ್‌ ಅವರು ಇರುವ ಈ ಹಂತವನ್ನು ನೋಡಲು ಯಾರಿಗೆ ಖುಷಿಯಾಗುತ್ತಿದೆ? ಎಂದು ಸುದೀಪ್‌ ಪ್ರಶ್ನೆ ಇಟ್ಟಾಗ, ಸಂಗೀತಾ ಅವರು ʼʻನನಗೆ ಖುಷಿಯಾಗಿದೆʼʼ ಎಂದು ಉತ್ತರ ನೀಡಿದರು.

ಸಂಗೀತಾ ಮಾತನಾಡಿ ʻʻಅವರ ಆಡಿರುವಂತಹ ಮಾತು ತುಂಬ ಹಾರ್ಷ್‌ ಆಗಿತ್ತು. ಅದು ಯಾರೇ ಆಗಿರಲಿʼʼ ಎಂದು ಹೇಳಿದರು. ಇನ್ನು ಸ್ನೇಹಿತ್‌, ನಮ್ರತಾ, ತುಕಾಲಿ ಸಂತು, ರಕ್ಷಕ್‌ ಎಲ್ಲ ತಮಗೆ ಶಾಕ್‌ ಆಗಿದೆ ಎಂದು ಅಭಿಪ್ರಾಯ ಸೂಚಿಸಿದರು. ಇದಾದ ಬಳಿಕ ಅಂತಿಮವಾಗಿ ರಕ್ಷಕ್ ಹೊರಗೆ ಬಂದರು.

ಕಣ್ಣೀರಿಟ್ಟ ನಮ್ರತಾ

ರಕ್ಷಕ್‌ ಏಕಾಏಕಿ ಮನೆಯಿಂದ ಮಾಯವಾದ ತಕ್ಷಣ ನಮ್ರತಾ ಅಳಲು ಶುರು ಮಾಡಿದರು. ‘ಈ ಮನೆಯಲ್ಲಿ ಅವನು ನನ್ನ ಜತೆಗೆ ಕನೆಕ್ಟ್ ಆದಂತೆ ಯಾರೂ ಆಗಿರಲಿಲ್ಲ. ನನಗೆ ಅಣ್ಣ-ತಮ್ಮ ಯಾರೂ ಇಲ್ಲ. ಅವನೇ ನನಗೆ ತಮ್ಮನಂತಿದ್ದ’ ಎಂದು ಕಣ್ಣೀರಿಟ್ಟರು. ಕೊನೆದಾಗಿ ಒಂದು ‘ಬೈ’ ಕೂಡ ಹೇಳೋಕೆ ಆಗಲಿಲ್ಲ ಎಂದು ವಿನಯ್‌ ಕೂಡ ಹೇಳಿದರು.

ಇದನ್ನೂ ಓದಿ: BBK Season 10: ಪ್ರತಾಪ್ ಹೆಣ್ಮಕ್ಳನ್ನು‌ ನೋಡೋ ರೀತಿ ಸರಿ ಇಲ್ವಾ? ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆ!

ರಕ್ಷಕ್‌ಗೆ ಇರಲಿಲ್ಲ ಜನರ ಸಾಥ್‌

ತುಕಾಲಿ ಸಂತೋಷ್, ರಕ್ಷಕ್, ವಿನಯ್ ಮೊದಲಾದವರಿಗೆ ಕ್ಲಾಸ್ ತೆಗೆದುಕೊಂಡಿದ್ದರು ಸುದೀಪ್. ಇದರಿಂದ ರಕ್ಷಕ್ ಸಂತೋಷ್ ಬಳಿ ಮಾತನಾಡಿದ್ದರು. ‘ನನಗೆ ಏನು ಮಾಡಬೇಕು ಅನ್ನೋದೆ ತಿಳಿಯುತ್ತಿಲ್ಲ. ಏನು ಮಾಡೋಣ ಹೇಳಿ. ಎಲ್ಲರ ಜತೆ ಮಾತಾಡುತ್ತಾ ಇದ್ದೀನಿ, ಎಲ್ಲರ ಜೊತೆ ಚೆನ್ನಾಗಿ ಬೆರೆಯುತ್ತಿದ್ದೇನೆ. ಆದರೂ ಅದು ಸರಿ ಆಗುತ್ತಿಲ್ಲ. ಯಾರಿಗಾದರೂ ಹೊಡೆದು ಹೊರಗೆ ಹೋಗೋಣವೇ’ ಎಂದು ಸಂತೋಷ್ ಬಳಿ ಕೇಳಿದ್ದರು. ಇನ್ನೊಂದು ಬಹುಮುಖ್ಯ ಕಾರಣ ಅವರು ಮನೆಯಲ್ಲಿ ಅಷ್ಟೊಂದು ಆಕ್ಟಿವ್‌ ಕೂಡ ಇರಲಿಲ್ಲ. ಪ್ರತಾಪ್ ಜತೆಗಿನ ‘ಗೂಬೆ’ ಜಗಳ ಕೂಡ ಕಾರಣವಾಗಿತ್ತು. ರಕ್ಷಕ್‌ ಆರಂಭದಿಂದಲೂ ವಿನಯ್‌, ತುಕಾಲಿ ಸಂತು ಗ್ಯಾಂಗ್‌ನಲ್ಲೇ ಗುರುತಿಸಿಕೊಂಡರು ಹೊರತು ವೈಯಕ್ತಿಕವಾಗಿ ಗುರುತಿಸಿಕೊಂಡಿಲ್ಲ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version