Site icon Vistara News

BBK season 10: ಮಗನ ಸಾಯಿಸಿಬಿಡು ಎಂದು ಅಮ್ಮನ ಬಳಿ ಹೇಳಿದ್ರು; ಅಳಬೇಡ ಪ್ರತಾಪ್‌ ಕರುಳು ಕಿತ್ತು ಬರುತ್ತೆ ಅಂದ್ರು ಜನ!

Drone Pratap Cry with Tara actress In BBK 10

ಬೆಂಗಳೂರು: ಈ ವಾರ ಬಿಗ್‌ ಬಾಸ್‌ (BBK season 10) ಮನೆಯಲ್ಲಿ ನಟಿ ತಾರಾ ಅವರು ದಸರಾ ಹಬ್ಬದ ಖುಷಿಯನ್ನು ಹೊತ್ತು ತಂದಿದ್ದರು. ಚಂದದ ಸೀರೆ ಉಟ್ಟು ಬಂದ ಅವರನ್ನು ಅಷ್ಟೇ ಸುಂದರವಾಗಿ ಡ್ರೆಸಪ್‌ ಆಗಿದ್ದ ಸ್ಪರ್ಧಿಗಳು ಖುಷಿಯಿಂದ ಎದುರುಗೊಂಡರು, ಅಪ್ಪಿಕೊಂಡರು. ಅಷ್ಟೇ ಅಲ್ಲದೇ ಮನೆಯ ಹೆಣ್ಣು ಮಕ್ಕಳ ಜತೆ ಕೆಲವೊಂದಿಷ್ಟು ಹರಟೆ ಕೂಡ ಹೊಡೆದರು. ಆದರೆ ಪ್ರತಾಪ್‌ ಮಾತ್ರ ತನ್ನ ಅಂತರಂಗದಲ್ಲಿ ಇದ್ದ ನೋವನ್ನು ತಾರಾ ಅವರ ಮುಂದೆತೆರೆದಿಟ್ಟು ಬಿಕ್ಕಿ ಬಿಕ್ಕಿ ಅತ್ತರು.

ಡ್ರೋನ್‌ ಪ್ರತಾಪ್‌ ಅವರ ಡ್ರೋನ್ ವಿಚಾರದಲ್ಲಿ ಸಾಕಷ್ಟು ಟ್ರೋಲ್ ಆಗಿರುವುದು ಗೊತ್ತೇ ಇದೆ. ಡ್ರೋನ್ ಕಂಡು ಹಿಡಿದಿದ್ದಾಗಿ ಅವರು ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ಅವರಿಗೆ ಸಾಕಷ್ಟು ಸನ್ಮಾನ ಮಾಡಲಾಯಿತು. ಬಳಿಕ ಅವರು ಕಾಗೆ ಹಾರಿಸುತ್ತಿದ್ದಾರೆ ಎಂತಲೂ ವರದಿಯಾಯ್ತು. ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಾಗಲೂ ಡ್ರೋನ್‌ ಅವರ ಬಗ್ಗೆ ತುಕಾಲಿ ಸಂತೋಷ್‌ ತೇಜೋವಧೆ ಮಾಡಿ ಸುದೀಪ್‌ ಅವರು ತುಕಾಲಿಗೆ ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು. ಇದೀಗ ನಟಿ ತಾರಾ ಅವರ ಮುಂದೆ ʻʻತಾನು ಕುಟುಂಬದ ಎಲ್ಲಾ ಸದಸ್ಯರ ಮೊಬೈಲ್​ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದೇನೆʼʼಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಮ್ಮ ಅಂದ್ಕೊಂಡು ನನ್ನ ಬಳಿ ಹೇಳು

‘ನಿನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನರು ನಿನ್ನನ್ನು ಪ್ರೀತಿ ಮಾಡುತ್ತಿದ್ದಾರೆ. ನೀನು ಮಾನಸಿಕವಾಗಿ ಎಷ್ಟು ಟಾರ್ಚರ್ ಅನುಭವಿಸಿದ್ದೀಯಾ ಅನ್ನೋದು ನನಗೆ ಗೊತ್ತು. ನೀನು ತಪ್ಪು ಮಾಡಿರಬಹುದು. ಈಗ ಒಂದು ಅವಕಾಶ ಸಿಕ್ಕಿದೆ. ಅಮ್ಮ ಅಂದ್ಕೊಂಡು ನನ್ನ ಬಳಿ ಹೇಳು’ ಎಂದು ತಾರಾ ಅವರು ಡ್ರೋನ್‌ ಪ್ರತಾಪ್‌ ಅವರ ಕೈ ಹಿಡಿದು ಕೇಳಿದರು.

ತಾರಾ ಅವರು ಕೇಳುತ್ತಿದ್ದಂತೆ ಡ್ರೋನ್‌ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟೇ ಅಲ್ಲದೇ ವಾಶ್‌ ರೂಮ್‌ ಹೋಗಿ ಬರ್ತೀನಿ ಎಂದಾಗ ಕೂಡ ತಾರಾ ಅವರು ಹೋಗಲು ಬಿಡಲಿಲ್ಲ.

ಊಟಕ್ಕೆ ಏನಾದರು ಹಾಕಿ ಸಾಯಿಸಿಬಿಡು ಅಂದ್ರು

ʻʻನಿನಗೇ ಇಷ್ಟು ನೋವಾಗಿದೆ ಎಂದರೆ ಹೆತ್ತವರಿಗೆ ಎಷ್ಟು ನೋವಾಗಿರಬೇಡ ಹೇಳುʼʼಎಂದು ತಾರಾ ಹೇಳುತ್ತಿದ್ದಂತೆ ಪ್ರತಾಪ್‌ ಮಾತನಾಡಿ ʻʻನಿನ್ನ ಮಗನನ್ನು ಏಕೆ ಉಳಿಸಿದ್ದೀಯಾ. ಊಟಕ್ಕೆ ಏನಾದರೂ ಹಾಕಿ ಸಾಯಿಸಿಬಿಡು. ಏನೋ ನಾನು ದುಡ್ಡು ಮಾಡಿದ್ದೀನಿ ಎಂತೆಲ್ಲ ನನ್ನ ಸಂಬಂಧಿಕರು ಮಾತನಾಡಿದ್ರು, ನನ್ನ ಅಮ್ಮ ಎಲ್ಲಿಯೂ ಹೋಗಲ್ಲ. ಸಂಬಂಧಿಕರ ಮನೆಗೂ ಹೋಗಲ್ಲ. ಈ ಊರಲ್ಲಿ ಮನೆ ಕಟ್ಟಿದ್ದಾರೆ. ಗೃಹ ಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಿಲ್ಲ. ನನ್ನ ಅಪ್ಪ, ಅಮ್ಮ, ತಂಗಿ ನಂಬರ್ ಬ್ಲಾಕ್ ಮಾಡಿದೀನಿ’ ಎಂದು ಗಳಗಳನೆ ಅತ್ತು ಬಿಟ್ಟರು.

ಇದನ್ನೂ ಓದಿ: BBK Season 10 : ಸಹಸ್ಪರ್ಧಿಗಳ ಸಾಲು ಸಾಲು ಪ್ರಶ್ನೆಗಳಿಗೆ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌

ʻನನಗೊಬ್ಬ ತಂಗಿ ಇದ್ದಾಳೆ. ಅವಳು ಇನ್ನೂ ಮುದುವೆ ಆಗಬೇಕು. ಅದಕ್ಕಾಗಿ ನಾನು ಕಂಪನಿ ಮಾಡಿದೀನಿ. ಕಂಪನಿಯನ್ನು ಬೆಳೆಸಬೇಕಿದೆ. ಡ್ರೋನ್‌ ಮಾಡುತ್ತ ಇದ್ದೀಯಾ ಅದನ್ನೇ ಮಾಡಿಕೊಂಡು ಇರು. ಬಿಗ್‌ ಬಾಸ್‌ ಬೇಡ ಎಂದು ಮಾವನ ಮೂಲಕ ಹೇಳಿಸಿದರು. ಆದರೆ ನಾನು ಕೇಳಲಿಲ್ಲ. ಅಪ್ಪನ ಜತೆ ಮಾತನಾಡಿ ವರ್ಷಗಳೇ ಆಗಿವೆ. ಅಪ್ಪನ್ನನು ನೋಡಬೇಕು ಎನ್ನಿಸುತ್ತಿದೆʼʼಎಂದರು.

ಮದುವೆಗೆ ಕರೆಯಲೇ ಬೇಕು ಎಂದ ತಾರಾ

ತಾರಾ ಅವರು ಕೂಡ ಬಿಗ್‌ ಬಾಸ್‌ ಮನೆಗೆ ʻʻಪ್ರತಾಪ್‌ ಅವರ ತಂದೆ ತಾಯಿ ಭೇಟಿಯಾಗುವಂತೆ ಮಾಡಿʼʼಎಂದು ಮನವಿ ಮಾಡಿದರು. ಅಷ್ಟೇ ಅಲ್ಲದೇ ತಂಗಿ ಮದುವೆ, ನಿನ್ನ ಮದುವೆಗೆ ನನ್ನನ್ನು ಕರೆಯಲೇ ಬೇಕು ’ ಎಂದು ಪ್ರತಾಪ್‌ಗೆ ಧೈರ್ಯ ಹೇಳಿದರು.

ಇದನ್ನೂ ಓದಿ: BBK Season 10 : ಗೌರೀಶ್‌ ಅಕ್ಕಿ ಪ್ರಕಾರ ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಇವರೇ..; ಯಾರವರು?

ಇನ್ನೂ ಜನರು ಕೂಡ ಪ್ರತಾಪ್‌ ಅವರಿಗೆ ಸಾಥ್‌ ಕೊಟ್ಟಿದ್ದಾರೆ. ʻʻದುಡ್ಡು ತಗೊಂಡು ದೇಶ ಬಿಟ್ಟು ಹೋದೊರೆ ಚೆನ್ನಾಗಿದ್ದಾರೆ. ಅತ್ಯಾಚಾರ ಮಾಡಿರುವ ಎಷ್ಟೋ ಜನ ರಾಜಾರೋಷವಾಗಿ ತಿರುಗ್ತಿದಾರೆ. ತಪ್ಪು ಮಾಡೊದು ಸಹಜ ಪಶ್ಚಾತ್ತಾಪ ಪಡ್ತಿದಾನೆ ಸ್ವೀಕರಿಸಿ .ಕಣ್ಣೀರು ಮನಸ್ಸಿಗೆ ನೋವಾದಾಗ ಮಾತ್ರ ಬರೋದುʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʻʻದುಃಖ ಆದಾಗ ಕೂಗೋಕು ಬಿಡಲ್ಲ ನಮ್ ಜನ, ನಾಟಕ ಅಂತಾರೆ, ಸಿಂಪತಿ ಅಂತಾರೆ. ಅವರವರ ಮನಸ್ಸಿನ ಕಷ್ಟ ಅವರಿಗೆ ಗೊತ್ತುʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻಗುರು ಕರುಳು ಕಿತ್ತು ಬರುತ್ತೆ. ಪ್ರತಾಪ್ ಅಳು ನೋಡಿದ್ರೆʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

Exit mobile version