Site icon Vistara News

BBK Season 10: ಇಲ್ಲಿರೋಕೆ ಇಷ್ಟವಿಲ್ಲ ಎಂದು ಕಾರ್ತಿಕ್‌ ಬಳಿ ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ!

sangeetha sringeri

ಬೆಂಗಳೂರು: ಎರಡನೇ ವಾರವೂ (BBK Season 10) ಸಂಗೀತಾ ಹಾಗೂ ವಿನಯ್‌ ನಡುವಿನ ಜಗಳ ತಾರರಕ್ಕೇರುತ್ತಲೇ ಇದೆ. ಇದೀಗ ಸಂಗೀತಾ ಅವರು ʻʻನಾನು ಇಲ್ಲಿಗೆ ಬರಬಾರದಿತ್ತು. ನಾನು ವಾಪಸ್ ಹೋಗ್ಬೇಕುʼʼಎಂದು ಕಾರ್ತಿಕ್‌ ಗೌಡ ಅವರ ಬಳಿ ಪ್ರಸ್ತಾಪಿಸಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಭಾಗ್ಯಶ್ರೀ ಅವರು ಈ ವಿಚಾರವನ್ನು ಪ್ರಸ್ತಾಪಿಸಿ ವಿನಯ್‌ ಅವರ ಕಾಲಿಗೆ ಕೂಡ ಬಿದ್ದರು.

ಅಸಮರ್ಥರ ಗುಂಪಿಗೆ ಸೇರಿದ್ದ ಸಂಗೀತಾ

ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುವಾಗ ಅಷ್ಟಾಗಿ ಸಂಗೀತಾ ಅವರಿಗೆ ವೋಟ್‌ ಲಭಿಸಿರಲಿಲ್ಲ. ಹೀಗಾಗಿ ಅವರನ್ನ ಮೊದಲು ವೇಯ್ಟಿಂಗ್ ಲಿಸ್ಟ್‌ನಲ್ಲಿ ಇಡಲಾಗಿತ್ತು. ಆನಂತರ ‘ಅಸಮರ್ಥರು’ ಪಟ್ಟ ಕೊಟ್ಟು ಸಂಗೀತಾ ಶೃಂಗೇರಿ ಮತ್ತು ಇತರೆ ಐವರನ್ನ ‘ಬಿಗ್ ಬಾಸ್’ ಮನೆಯೊಳಗೆ ಕಳುಹಿಸಲಾಯಿತು. ಅಸಮರ್ಥರಾದವರಿಗೆ ಯಾವುದೇ ಮನೆಯ ವಸ್ತುಗಳನ್ನು ಮುಟ್ಟುವಂತಿರಲಿಲ್ಲ. ಅಷ್ಟೇ ಅಲ್ಲದೇ ಬಟ್ಟೆ ಕೂಟ ಬದಲಿಸುವಂತಿರಲಿಲ್ಲ.

ಶುರುವಾಯ್ತು ವಿನಯ್‌- ಸಂಗೀತಾ ಜಗಳ

ಅಸಮರ್ಥರಿಗೆ ಮನೆಯ ವಸ್ತುಗಳನ್ನು ಬಳಸುವಂತಿಲ್ಲ ಎಂದು ಬಿಗ್‌ ಬಾಸ್‌ ರೂಲ್ಸ್‌ ಮಾಡಿದ್ದರು. ಆದರೆ ಸಂಗೀತಾ ಅವರು ಸೋಫಾದಲ್ಲಿ ಕೂತಿದ್ದರು. ಇದನ್ನೇ ವಿನಯ್‌ ಅವರು ಇಟ್ಟುಕೊಂಡು ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದ್ದರು. ಈ ವೇಳೆ ವಿನಯ್ ಗೌಡ – ಸಂಗೀತಾ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಲ್ಲಿಂದ ಇವರಿಬ್ಬರ ಮಧ್ಯೆ ಜಗಳವೂ ಹೆಚ್ಚಾಗುತ್ತಲೇ ಹೋಯ್ತು.

ಎರಡನೇ ವಾರ ಶಿಕ್ಷೆಗೆ ಒಳಗಾದ ಸಂಗೀತಾ

‘ಜೋಡಿ ಮೋಡಿ’ ಟಾಸ್ಕ್‌ನಲ್ಲಿ ಸಂಗೀತಾ – ನೀತು ಸೋತರು. ಹೀಗಾಗಿ ಮಾಣಿಕ್ಯ ತಂಡ ವಿನಯ್‌ ಅವರದ್ದು. ಇದರ ಪ್ರಕಾರ ಯಾರೇ ಆ ವಾರದ ಟಾಸ್ಕ್‌ನಲ್ಲಿ ಸೋತರೆ ಶಿಕ್ಷಗೆ ಗುರಿಯಾಗಬೇಕು. ವಿನಯ್‌ ಅವರ ತಂಡ ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡಿತು. ಹಾಗೇ ಸಗಣಿ ಸ್ನಾನ ಶಿಕ್ಷಗೆ ಗುರಿಯಾದರು ಸಂಗೀತಾ. ಅಲ್ಲಿಂದ ಮತ್ತೆ ಕಿಡಿ ಹೆಚ್ಚುತ್ತಲೇ ಹೋಯ್ತು. ಸಂಗೀತಾ ಕೂಡ ವಿನಯ್‌ ಅವರು ಮತ್ತೆ ಮತ್ತೆ ತನ್ನನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂತಲೂ ಭಾವಿಸಿದರು.

ಇದನ್ನೂ ಓದಿ: BBK Season 10: ಸಂಗೀತಾಗೆ ನಾನ್‌ ಯಾಕ್‌ ಕಾಳಜಿ ತೋರಿಸ್ಲಿ ಎಂದು ಸಿಟ್ಟಾದ ವಿನಯ್‌; ಕಾಲಿಗೆ ಬಿದ್ದ ಭಾಗ್ಯಶ್ರೀ!

ಥ್ರೆಟ್‌ ಆಗ್ತಾ ಇದೆ

ಇದಾದ ಬಳಿಕ ವಿನಯ್‌ ಅವರ ಟೋನ್‌ ತುಂಬ ಥ್ರೆಟ್‌ ಆಗುತ್ತಿದೆ ಎಂದು ಸಂಗೀತಾ ಹೇಳಿದರು. ಅಲ್ಲಿಂದ ಮತ್ತೆ ವಾಗ್ವಾದ ಮುಂದುವರಿಯುತ್ತಲೇ ಹೋಯ್ತು. ಅಲ್ಲಿ ಪ್ರತಾಪ್‌, ವಿನಯ್‌ ಮತ್ತು ಸಂಗೀತಾ ನಡುವೆ ದೊಡ್ಡ ವಾರ್‌ ನಡೆದೇ ಹೊತ್ತು.

ಇಲ್ಲಿ ಇರೋಕೆ ಇಷ್ಟವಿಲ್ಲ ಎಂದು ಕಣ್ಣೀರಿಟ್ಟ ಸಂಗೀತಾ

ಇಷ್ಟೆಲ್ಲಾ ಆದ್ಮೇಲೆ ಸಂಗೀತಾ ಶೃಂಗೇರಿ ಭಾವುಕರಾದರು. ‘’ನಂಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ನನಗೆ ಆಗಲ್ಲ. ನಾನು ಬರಲೇ ಬಾರದಿತ್ತು. ನಾನು ವಾಪಸ್ ಮನೆಗೆ ಹೋಗಬೇಕು. ನಾವು ಗೆಲ್ಲೋಕೆ ಆಗಲ್ಲ. ನಾವು ಯಾವ ಟಾಸ್ಕ್‌ನಲ್ಲೂ ಗೆಲ್ಲೋಕೆ ಆಗಲ್ಲ. ಸೋತರೂ ಪರ್ವಾಗಿಲ್ಲ. ಈ ತರಹ ಶಿಕ್ಷೆ ತಗೊಂಡು, ಹೀಗೆಲ್ಲ ಬೈಸಿಕೊಳ್ಳಬೇಕಾ? ಇನ್ಮುಂದೆ ಆಡೋಕೆ ನನಗೆ ಇಷ್ಟ ಇಲ್ಲʼʼ ಎಂದು ಅಂತ ಕಾರ್ತಿಕ್ ಮಹೇಶ್ ಜತೆಗೆ ಮಾತನಾಡುತ್ತಾ ಸಂಗೀತಾ ಶೃಂಗೇರಿ ಕಣ್ಣೀರು ಸುರಿಸಿದ್ದಾರೆ.

ವಿನಯ್‌ ಜತೆ ಪ್ರಸ್ತಾಪಿಸಿದ ಕಾರ್ತಿಕ್‌

ʻʻಮನೆಯಲ್ಲಿ ನಿನ್ನನ್ನ ಅಮ್ಮ ನೋಡುತ್ತಿರುತ್ತಾರಾ? ಫ್ರೆಂಡ್ಸ್, ರಿಲೇಟಿವ್ಸ್, ಫ್ಯಾನ್ಸ್ ನೋಡುತ್ತಿರುತ್ತಾರಾ? ನೀನು ಎಂತಹ ಅದ್ಭುತ ಆಕ್ಟರ್‌ ಅಂತ ನಿನಗೆ ಗೊತ್ತು. ನಿನ್ನ ಕೆರಿಯರ್‌ ಯಾವ ಲೆವೆಲ್‌ನಲ್ಲಿದೆ? ನೀನು ನಿನಗಾಗಿ ಆಟ ಆಡ್ತಿದ್ಯಾ ಅಂತ ನನಗೆ ಅನಿಸುತ್ತಿಲ್ಲ. ಈಗೇನು.? ಅವಳು ಮನೆಗೆ ಹೋಗ್ತಾಳಂತ.? ಅದಕ್ಕೆ ನಾನೇನು ಮಾಡ್ಬೇಕಂತೆ.?’’ ಎಂದು ವಿನಯ್ ಗೌಡ ಅವರು ಕಾರ್ತಿಕ್‌ಗೆ ಪ್ರಶ್ನಿಸಿದರು. ಈ ರೀತಿ ವಿನಯ್‌ ಹೇಳುತ್ತಿದ್ದಂತೆ ಕಾರ್ತಿಕ್‌ ಅವರು ʻʻನಿಮಗೆ ಬಿಟ್ಟಿದ್ದು ಇದು. ಸರಿ ಮಾಡಿಕೊಳ್ಳುವ ಹಾಗಿದ್ದರೆ ಮಾಡಿಕೊಳ್ಳಿʼʼ ಎಂದರು.

ಬಿಗ್‌ ಬಾಸ್‌ ಕಲರ್ಸ್‌ ಕನ್ನಡದಲ್ಲಿ ಪ್ರತಿ ದಿನಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿಯೂ ಲೈವ್‌ ಸ್ಟ್ರೀಮ್‌ ಆಗುತ್ತಿದೆ.

Exit mobile version