Site icon Vistara News

BBK SEASON 10: ಕೈ ಮುಗಿದು ಕಣ್ಣೀರಿಟ್ಟ ಸಂಗೀತಾ; ಸೋತು ಶರಣಾದರಾ ಗಂಧರ್ವರು?

Sangeetha was tears Did the Gandhars surrender

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ (BBK SEASON 10) ರಕ್ಕಸ-ಗಂಧರ್ವರ ಜಿದ್ದಾಜಿದ್ದು ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ಕಳೆದ ಎರಡು ದಿನಗಳಿಂದ ಗಳಿಗೆಗೊಂದು ತಿರುವು ಪಡೆದುಕೊಂಡು ಬೆಳೆಯುತ್ತಲೇ ಇದೆ. ಆದರೆ ಆ ಟಾಸ್ಕ್‌ ಈಗ ಒಂದು ಹಂತಕ್ಕೆ ಬಂದು ನಿಂತಿರುವ ಸೂಚನೆ ಇವತ್ತು ಜಿಯೋ ಸಿನಿಮಾದಲ್ಲಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ.

ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ತಂಡ, ಈಗ ಗಂಧರ್ವರಾಗಿದ್ದಾರೆ. ಮೊದಲ ದಿನ ರಕ್ಕಸರಿಂದ ಕಿರುಕುಳ ಅನುಭವಿಸಿದ್ದ ವರ್ತೂರು ಸಂತೋಷ್ ತಂಡ ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ.

ಈ ನಡುವೆ ಸದ್ಯ ಗಂಧರ್ವರಾಗಿರುವ ಸಂಗೀತಾ ತಂಡ ದಣಿದಂತೆ ಕಾಣಿಸುತ್ತಿದೆ. ನಿರಂತರವಾದ ರಕ್ಕಸರ ಕಿರುಕುಳವನ್ನು ತಾಳಿಕೊಳ್ಳಲಾಗದೆ ಕಾರ್ತಿಕ್, ‘ನನ್ನ ಕೈಲಿ ಸಾಧ್ಯವಾಗುತ್ತಿಲ್ಲ’ ಎಂದು ನೆಲಕ್ಕೊರಗಿದ್ದಾರೆ.
ನಾಯಕಿ ಸಂಗೀತಾ, ಸಿರಿ ಅವರೊಂದಿಗೆ, ‘ಪನಿಷ್ಮೆಂಟ್ ತೆಗೆದುಕೊಳ್ಳಬೇಕು ಎಂದು ಎಲ್ಲೂ ಹೇಳಿಲ್ಲ. ನಾವು ತಗೊಳ್ಳಲ್ಲ ಎಂದು ಹೇಳೋಣ’ ಎನ್ನುತ್ತಿದ್ದಾರೆ.

ಇತ್ತ ರಕ್ಕಸರ ಗುಂಪಿನ ನಮ್ರತಾ, ‘ಅವಳು ಯಾವ ಸೀಮೆ ರಾಣಿ ಗುರೂ.. ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು?’ ಎಂದು ಕಿರುಚಾಡಿದ್ದಾರೆ. ʻʻಅವ್ರು ವರ್ಸ್ಟ್‌ ಆಗಿ ಮಾಡ್ತಿರೋದಕ್ಕೆ ಅವ್ರು ಹೊಣೆ ಮ್ಯಾಮ್… ನಾನದಕ್ಕೆ ಕಾರಣ ಅಲ್ಲ’ ಎಂದು ಸಂಗೀತಾ ತನ್ನದೇ ಗುಂಪಿನ ಸದಸ್ಯರ ಎದುರಿಗೆ ಕೈ ಮುಗಿದು ಕಣ್ಣೀರು ಹಾಕುತ್ತಿದ್ದಾರೆ.
ಇಡೀ ಮನೆ ರಣರಂಗವಾಗಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿಯದಷ್ಟು ಗೊಂದಲದ ಗೂಡಾಗಿದೆ. ಇದರ ಪರಿಣಾಮ ಏನಾಗುತ್ತದೆ? ಯಾವ ತಂಡ ಗೆಲುವಿನ ದಡ ಸೇರುತ್ತದೆ? ಯಾವ ತಂಡ ಸೋಲಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ವೀಕೆಂಡ್‌ವರೆಗೂ ಕಾಯಲೇಬೇಕು.

ಇದನ್ನೂ ಓದಿ: BBK SEASON 10: ವಿನಯ್ v/s ಕಾರ್ತಿಕ್; ʻಏಯ್ ತಗಡುʼ ,ಹೆಣ್ಮಕ್ಕಳನ್ನ ಬಿಟ್ಟು ಆಡಿಸ್ತಿದ್ದಾನೆ ಅಂದ್ರೆ ಏನರ್ಥ?

ಕಣ್ಣೀರಿಟ್ಟ ಕಾರ್ತಿಕ್‌

ವಿನಯ್‌ ಹಾಗೂ ಕಾರ್ತಿಕ್‌ ಮಾತಿನ ಚಕಮಕಿ ತಾರರಕ್ಕೇರಿದೆ. ವಿನಯ್‌ ಕೂಡ ಕಾರ್ತಿಕ್‌ ಅವರಿಗೆ ʻತಗಡುʼ ಎಂದಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಕೆಟ್ಟದ್ದಾಗಿ ಕಾರ್ತಿಕ್‌ ಮಾತನಾಡಿದ್ದಾರೆ ಎಂದು ವಿನಯ್‌ ಅವರು ಗಂಭೀರವಾಗಿ ಆರೋಪ ಮಾಡಿದರು. ಕಾರ್ತಿಕ್‌ ಕೂಡ ಪದೇ ಪದೆ ತಮ್ಮ ಮೇಲೆ ಗಂಭೀರ ಆರೋಪ ಮಾಡುತ್ತಿರುವ ವಿನಯ್‌ ವಿರುದ್ಧ ಕಣ್ಣೀರು ಸುರಿಸಿದರು. ‘’ನಾನು ಅಂತಹ ಮಾತನ್ನು ಆಡಿದ್ದರೆ ಹೊರಗೆ ಹೋಗುತ್ತೇನೆ’’ ಎಂದು ಕಾರ್ತಿಕ್‌ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಕಣ್ಣೀರಿಟ್ಟಿದ್ದಾರೆ ಕೂಡ.

ಜಗಳ ಆರಂಭವಾಗಿದ್ದು ಯಾವಾಗ?

‘ಚೇರ್ ಆಫ್‌ ಥಾರ್ನ್ಸ್‌’ ಎಂಬ ಚಟುವಟಿಕೆಯನ್ನು ‘ಬಿಗ್ ಬಾಸ್‌’ ನೀಡಿದರು. ಇದರಲ್ಲಿ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಈ ಟಾಸ್ಕ್‌ನಲ್ಲಿ ಸಂಗೀತಾ ಹಾಗೂ ಕಾರ್ತಿಕ್‌ ಅವರು ವರ್ತೂರ್‌ ಮತ್ತು ಪವಿ ಅವರನ್ನು ಟಾರ್ಗೆಟ್‌ ಮಾಡಿದರು. ಈ ವೇಳೆ ಕಾರ್ತಿಕ್‌ ಮತ್ತು ವಿನಯ್‌ ನಡುವೆ ಮಾತಿನ ಜಕಮಕಿ ನಡೆದಿದೆ. ಸಂಗೀತಾ ಅವರು ಪವಿ ಮುಖಕ್ಕೆ ನೀರು ಎರಚುವ ಫೋರ್ಸ್‌ಗೆ ವಿನಯ್‌ ಅವರು ‘’ಕರೆಕ್ಟ್ ಆಗಿದೆ ಜೋಡಿ’’ (ಕಾರ್ತಿಕ್‌-ಸಂಗೀತಾ) ಎಂದು ವಿನಯ್ ಟಾಂಟ್‌ ಕೊಡುತ್ತಿದ್ದರು.

ʻಮೈಮ್‌ ಮಾಡಿಕೊಂಡು ಅಸಭ್ಯ ಬೈಗುಳ ಬಳಸಿದರೆ ಸುಮ್ಮನೆ ಇರಬೇಕಾ? ಅವನು ಕಿತ್ತೋದ್‌ ನನ್ಮಗ. ಅಮ್ಮ, ತಂಗಿ ಇದ್ದಾರೆ. ಅವನ ಯೋಗ್ಯತೆಗೆ ಹೆಣ್ಮಕ್ಕಳನ್ನ ಬಿಟ್ಟು ಮುಂದೆ ಆಡಿಸ್ತೀಯಾ ಎಂದು ಕೇಳ್ತಾನೆʼ ಎಂದು ವಿನಯ್‌ ಕೂಗಾಡಿದರು. ಇತ್ತ ಕಾರ್ತಿಕ್‌ ಕೂಡ ನಾನು ಆ ರೀತಿ ಮಾಡಿಲ್ಲ ಎಂದು ಭಾವುಕರಾದರು.

ನಾನೇನಾದರೂ ಅಂದಿದ್ದರೆ ಈ ಕ್ಷಣವೇ ಹೊರಗೆ ಹೋಗೋಕೆ ರೆಡಿ. ತಂಗಿಗೆ ಇನ್ನೂ ಹೆರಿಗೆ ಆಗಿದ್ಯಾ ಅಂತ ಗೊತ್ತಿಲ್ಲ. ಇಂತಹ ಮಾತುಗಳನ್ನ ಕೇಳಿಸಿಕೊಂಡು ಹೇಗಿರಲಿ? ಪ್ರತಿ ಸಲಿ ಇದೇ ಆಯ್ತು ಎಂದು ಕಾರ್ತಿಕ್‌ ಅವರು ಕಣ್ಣೀರಿಟ್ಟರು. ಆದರೆ ವಿನಯ್, ತುಕಾಲಿ, ನಮ್ರತಾ ಇನ್ನಿತರರ ಮುಂದೆ ಕಾರ್ತಿಕ್ ಬಗ್ಗೆ ಬೋಡ ಇನ್ನಿತರೆ ಮಾತುಗಳನ್ನು ಬೈಯ್ಯುತ್ತಲೇ ಇದ್ದರು. ನಿಜವಾಗಿಯೂ ಕಾರ್ತಿಕ್, ವಿನಯ್​ಗೆ ಕೆಟ್ಟ ಪದಗಳನ್ನು ಬಳಸಿದರೇ ಅಥವಾ ಇಲ್ಲವೇ ಎಂಬುದು ಪ್ರೇಕ್ಷಕರಿಗೆ ತಿಳಿಯಲಿಲ್ಲ. ವಾರಾಂತ್ಯದಲ್ಲಿ ಸುದೀಪ್ ಅವರು ಬಂದಾಗ ಈ ಈ ವಿಚಾರ ಮುನ್ನಲೆಗೆ ಬರಬಹುದು. ವಿನಯ್‌ ಬೇಕು ಎಂತಲೇ ಅಂದರೇ, ಇಲ್ಲವೇ ಎಂಬುದು ವೀಕೆಂಡ್‌ನಲ್ಲಿ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version